Wednesday, December 27, 2017

ಪಾಷಂಡಿಗಳು

"ಅಸುರರತಿಮಾಂಸಾಹಾರಿಗಳು ಪಾಷಂಡಿಗಳಿಗಿವನಗ್ಗಳದ ದೇವ"- ದಕ್ಷ ಯಜ್ಞ ಯಕ್ಶಗಾನ ಪ್ರಸಂಗದಲ್ಲಿ, ದಕ್ಷ ಶಿವನನ್ನು ನಿಂದಿಸುವಾಗ ಆಡುವ ಮಾತು ಇದು.ದಕ್ಷ ಯಜ್ಞ ಪ್ರಸಂಗದಲ್ಲಿ, ತನ್ನನ್ನು ಕಂಡು ಅಳಿಯನಾದ ಈಶ್ವರ ಎದ್ದು ನಿಂತು ಗೌರವ ಸೂಚಿಸದಿದ್ದಾಗ ಅವಮಾನಿತನಾದ ದಕ್ಷ ಈಶ್ವರನನ್ನು ನಿಂದಿಸುತ್ತಾನೆ. ತನ್ನ ನಾಲಗೆಯನ್ನು ಅತಿಯಾಗಿ ಹರಿಬಿಟ್ಟ. ಇದನ್ನು ಕೇಳಿ, ಇಂದ್ರಾದಿ ದೇವತೆಗಳು ಸಿಟ್ಟಾದರು. ಆದರೂ ದಕ್ಷ ಒಬ್ಬ ಪ್ರಜಾಪತಿ, ಆತನನ್ನು ಎಲ್ಲರೆದುರಿಗೆ ನಿಂದಿಸಬಾರದು ಎನ್ನುವ ಉದ್ದೇಶದಿಂದ, ದೇವೇಂದ್ರ  ನೀತಿಮಾತುಗಳನ್ನು ಹೇಳಿದ. ಈಶ್ವರ ದೇವರು ಎಂದು ನೆನಪು ಮಾಡಿ ಕೊಟ್ಟ. ಅಹಂಕಾರವೇ ಮೈಎಲ್ಲ ತುಂಬಿದ್ದಾಗ ಒಳ್ಳೆ ಮಾತುಗಳಿಗೆ ಕಿವಿ ಹೋದೀತಾದರೂ ಹೇಗೆ? ತಲೆಯಲ್ಲಿ ಬುದ್ಧಿ ಇದ್ದರೆ ಅಹಂಕಾರ ಬರುವುದಿಲ್ಲ. ಅಹಂಕಾರ ಬಂದ ಮೇಲೆ ಬುದ್ಧಿ ಉಳಿಯುವುದಿಲ್ಲ. ದಕ್ಷ ಇಂದ್ರನಿಗೂ ತನ್ನ ಹೊಲಸು ನಾಲಗೆ ತೋರಿಸಿದ. ಶಿವನ ಭಕ್ತರನ್ನೂ ಜರೆದ. ಆಗ ಬರುವ ಪದ್ಯವೇ ಇದು.

ಪ್ರತೀ ಸಲ ಈ ಪ್ರಸಂಗ ನೋಡಿದಾಗಲೆಲ್ಲ ಬಂದ ಪ್ರಶ್ನೆ, ಪಾಷಂಡಿಗಳು ಎನ್ನುವ ಶಬ್ದದ ಅರ್ಥ ಏನು? ನಮ್ಮ ಜಾತ್ಯತೀತ ರಾಷ್ಟ್ರದಲ್ಲಿ, ಜಾತಿ ಹೆಸರಿನಲ್ಲಿ ಪ್ರಲೋಭನೆ ಒಡ್ಡುವುದು, ಅದನ್ನೇ ಬಂಡವಾಳವಾಗಿಸಿ ಹೊಗಳಾಟ ಬಯ್ದಾಟ ಮಾಡಿ, ಪ್ರಶಸ್ತಿ ಪುರಸ್ಕಾರ ಗಿಟ್ಟಿಸುವುದು ಹೊಸತೂ ಅಲ್ಲ, ವಿಶೇಷವೂ ಅಲ್ಲ.ಚುನಾವಣೆ ಹೊತ್ತಿನಲ್ಲೂ ಈ ಕೆಲಸ ಬಹಳ ನಡೆಯುತ್ತದೆ. ಯಾವುದೇ ಜಾತಿ ಜಗಳ ಪೇಪರಿನಲ್ಲಿ ಬಂದರೂ, ಈ ಪಾಷಂಡಿ ಎನ್ನುವ ಹೆಸರು ಎಲ್ಲೂ ನನ್ನ ಕಣ್ಣಿಗೆ ಬೀಳಲಿಲ್ಲ.

ಜಾತಿ ಹೆಸರೆತ್ತುವುದಷ್ಟೆ ಅಲ್ಲ. ಅದನ್ನು ಬ್ರಾಹ್ಮಣರು ಮಾಡಿದ್ದು ಎಂದು ವದರುತ್ತಾ, ರಾಮಾಯಣ ಮಹಾಭಾರತಗಳು ಇತಿಹಾಸವಾಗಿದ್ದರೂ ಅದನ್ನು ಪುರಾಣದ ಜತೆ ಸೇರಿಸಿ, ಅದರ ಶ್ಲೋಕಗಳನ್ನು ತಿರುಚಿ, ಏನೇನೋ ಬೊಗಳುವ ಬುದ್ಧಿಜೀವಿಗಳು ಯಾವುದಾದರೂ ಜಾತಿಯ ಬೆಂಬಲ ಅಥವಾ ಸಹಾನುಭೂತಿ ಗಿಟ್ಟಿಸುವ ಭರದಲ್ಲಿ ಅವರ ಜಾತಿಯನ್ನು ಗ್ರನ್ಥಗಳಲ್ಲಿ ಹೀನಾಯವಾಗಿ ಚಿತ್ರಿಸಿದ್ದಾರೆ ಎಂದು ಹೇಳಿ ಅದಕ್ಕೊಂದು ಸುಳ್ಳು ಆಧಾರ ವ್ಯಾಖ್ಯಾನವನ್ನೂ ಕೊಡುವ ಸ-ಮಜಾವಾದಿಗಳೂ ಎಲ್ಲಿಯೂ ಈ ಬಗ್ಗೆ ಹೇಳಿದ್ದು ಕೇಳಿಲ್ಲ.

ಹೋಗಲಿ. ಇದು ಡೈನೋಸಾರಸ್ ಹಾಗೆ ಯಾವುದಾದರೂ ನಾಶವಾದ ಪ್ರಾಣಿಯೋ ಪಕ್ಷಿಯೋ ಇರಬಹುದೇ ಎಂದರೆ, ಡಿಸ್ಕವರಿ, ನ್ಯಾಷನಲ್ ಜಿಯೋಗ್ರಫಿಕ್, ಅನಿಮಲ್ ಪ್ಲಾನೆಟ್ ಚಾನೆಲ್ಲುಗಳು ಕೂಡಾ ಈ ಬಗ್ಗೆ ಏನು ಕೂಡಾ ಹೇಳಿಲ್ಲ. ಸುದ್ದಿವಾಹಿನಿಗಳು ಯಾವ ಮೇಧಾವಿಯನ್ನೂ ಕರೆಯಿಸಿ ಈ ಬಗ್ಗೆ ಚರ್ಚೆ ಕೂಡಾ ನಡೆಸಿಲ್ಲ. ಇದೆಲ್ಲ ಆದಮೇಲೆ ನಾನು ಇನ್ನೀ ಶಬ್ದದ ಅರ್ಥದ ಆಸೆ ಬಿಡುವುದೇ ಒಳ್ಳೆಯದು ಎಂದು ಭಾವಿಸಿದೆ. ನನಗೆ ಸರಿಯಾಗಿ ಮಾಡಲು ಬರುವ ಒಂದೇ ಕೆಲಸ ಓದುವುದು ಮತ್ತೆ ವರ್ಣಾಶ್ರಮ ಧರ್ಮದ ಪ್ರಕಾರ ನನಗೆ ಕರ್ತವ್ಯವೂ ಆದ ಅಧ್ಯಯನ ಮಾಡುತ್ತಿದ್ದೆ, ಉಳಿದ ಕೆಲಸಗಳ ಜೊತೆ.

ವಿಷ್ಣು ಪುರಾಣದಲ್ಲಿ ಒಂದು ಪ್ರಸಂಗ ಬರುತ್ತದೆ. ದೇವ ದಾನವರ ನಡುವೆ ಘನಘೋರ ಯುದ್ಧದಲ್ಲಿ ದೇವತೆಗಳಿಗೆ ಎಷ್ಟು ಪ್ರಯತ್ನಪಟ್ಟರೂ ಗೆಲುವು ದೊರಕುವುದಿಲ್ಲ. ತಾವು ಧರ್ಮಿಗಳಾಗಿಯೂ ಗೆಲುವು ಸಿಗದೆ ಇದ್ದಾಗ ದೇವತೆಗಳು ಅಸುರರ ಶಕ್ತಿಯ ರಹಸ್ಯ ಭೇದಿಸಲು ಹೋದರು. ಆಗ ಅವರಿಗೆ ತಿಳಿಯಿತು. ಈ ಅಸುರರ ಶಕ್ತಿ ರಹಸ್ಯ ಅವರ ನಿಯತ ಮತ್ತು ನೈಮಿತ್ತಿಕ ಕರ್ಮಗಳು, ಅದನ್ನು ಮಾಡುವಲ್ಲಿ ಅವರು ಇಟ್ಟುಕೊಂಡಿರುವ, ಧರ್ಮದ ಧಾರಣೆ, ವೇದೋಕ್ತ ಕರ್ಮಗಳನ್ನು ಕ್ರಮದಂತೆ ಮಾಡುವ ವಿಕ್ರಮವೇ ಅವರ ಪರಾಕ್ರಮಕ್ಕೆ ಕಾರಣ ಎಂದು.  ದೇವೇಂದ್ರ ಯಥಾ ಪ್ರಕಾರ ವಿಷ್ಣುವಿನ ಬಳಿ ಓಡಿದ.

ವಿಷ್ಣು, ವಿಚಾರವನ್ನೆಲ್ಲಾ ತಿಳಿದು ಗೊಂದಲಕ್ಕೀಡಾದ. ಧರ್ಮದ ಮೂಲಕ ದೇವರನ್ನು ತೃಪ್ತಿಪಡಿಸಿ, ಶಕ್ತಿ ಪಡೆದು ದೇವರ ವಿರುದ್ಧವೇ ಅಸುರರ ವರ್ತನೆ. ಉದ್ದೇಶ, ಭೋಗ, ಅಧರ್ಮದಾಚರಣೆ. ರಾಜಸೀ ಶಕ್ತಿಗಳ ಕೈಗೆ ಸಾತ್ವಿಕ ಶಕ್ತಿ ಸೇರಿದರೆ ಆಗುವ ಅಪಾಯ ಸರ್ವನಾಶ ಅಷ್ಟೇ. (ಇಂದಿನ ಉತ್ತರ ಕೊರಿಯಾ ಇದಕ್ಕೆ ಉದಾಹರಣೆ. ರಾಜಸೀ ಸ್ವಭಾವದ ಆಡಳಿತಗಾರನ ವರ್ತನೆ ನೋಡಿದರೆ ಅದರ ದುಷ್ಪರಿಣಾಮದ ಊಹೆ ಭಯ ಹುಟ್ಟಿಸುವುದಿಲ್ಲವೇ?). ಹಾಗಂತ, ಇವರನ್ನು ಕೊಲ್ಲೋಣ ಎಂದರೆ ಅದು ನಿಯಮಬಾಹಿರ. ಧರ್ಮದಲ್ಲಿದ್ದೂ ಕೊಂದರೆ ನಾಳೆ ಲೋಕದ ಜನ ಧರ್ಮ ತ್ಯಜಿಸುತ್ತಾರೆ. ಆಗಲೂ ಸರ್ವನಾಶವೇ ಆಗುವುದು. ಕೊಲ್ಲದೆ ಬಿಟ್ಟರೆ, ಜಗತ್ತಿನ ಚಾಲಕ ಶಕ್ತಿ-ಪಾಲಕ ಶಕ್ತಿ ಸತ್ವಗುಣ ಸಂಕಟಕ್ಕೆ ಸಿಗುತ್ತದೆ. ಸಾಧಕರಿಗೆ ಸಿಗಬೇಕಾದ ಸ್ವರ್ಗ ಮತ್ತು ಸಾತ್ವಿಕ ಶಕ್ತಿಯ ಅಧಿಪತ್ಯ, ದುಷ್ಟಭಾವದಿಂದ ಧರ್ಮ ನಡೆಸಿದ ಅಸುರರ ಕೈ ಸೇರುತ್ತದೆ. ಆಗಲೂ ಜನ ಧರ್ಮದ ಮೇಲಿನ ನಂಬಿಕೆ ಕಳೆದುಕೊಂಡು ಧರ್ಮವನ್ನು ತ್ಯಜಿಸುತ್ತಾರೆ. ಎರಡರಲ್ಲೂ ಧಕ್ಕೆ ಧರ್ಮಕ್ಕೆ.

ಉಪಾಯಗಾರ ವಿಷ್ಣು, ಮಾಯಾಮೋಹನನ್ನು ಸ್ರುಷ್ಟಿಸಿದ. ಆ ಮಾಯಾಮೋಹ ಅಸುರರ ಬಳಿ ಬಂದ. ವಿವಸ್ತ್ರನಾಗಿ, ತಲೆ ಬೋಳಿಸಿಕೊಂಡು, ಸುಂದರ ಶಾಂತ ಮುಖ ಮುದ್ರೆ ಹೊತ್ತು. ಮೃದು ಮಧುರ ಧ್ವನಿ. ಶಬ್ದ ಸೌಂದರ್ಯ, ಮಕರಂದದ ಸಿಹಿಯನ್ನೂ ಮೀರಿಸುತ್ತಿತ್ತು. ಆತನಾಡಿದ ಮಾತುಗಳನ್ನು ಪುರಾಣದಲ್ಲಿ ಪಾಷಂಡವಾದ ಎಂದು ಹೇಳಲಾಗಿದೆ.

ಜಗತ್ತು ನಿರಾಧಾರ. ಮನಸ್ಸಿನ ಭ್ರಮೆಯೇ ಎಲ್ಲ ಗೋಚರ ಅಗೋಚರಕ್ಕೆ ಕಾರಣ. ಯಜ್ಞದಲ್ಲಿ ಅಗ್ನಿಗೆ ಹಾಕಿದ ಹವಿಸ್ಸು ಬೂದ್ಯಾಗುತ್ತದೆ ಅದು ಫಲವನ್ನು ನೀಡುತ್ತದೆ ಎನ್ನುವುದು ಬಾಲಿಶತನ. ಇಂದ್ರನಾಗಿ ಹವಿಸ್ಸಿಗೆ ಹಾಕಿದ ಸಮಿತ್ತುಗಳನ್ನು ಅಂದರೆ ಮರದ ಕಡ್ಡಿಗಳನ್ನು ತಿನ್ನಬೇಕೆ? ಅನ್ಯ ಪುರುಷನು ಶ್ರಾದ್ಧಾನ್ನವನ್ನು ಭುಂಜಿಸಿ ಪಿತೃಗಳಿಗೆ ಹೇಗೆ ತೃಪ್ತಿ ಕೊದಲು ಸಾಧ್ಯ? ಇದು ಸಾಧ್ಯವಿದ್ದಿದ್ದರೆ ಪ್ರವಾಸಿಗರು ತಮ್ಮೊಡನೆ ಬುತ್ತಿ ಒಯ್ಯುವ ಪ್ರಮೇಯವೇ ಇರುತ್ತಿರಲಿಲ್ಲ. ಶ್ರಾದ್ಧ-ಯಜ್ಝಗಳು ಮೌಢ್ಯ. ಅದನ್ನು ಉಪೇಕ್ಷಿಸುವುದರಿಂದ ಮಾತ್ರ ಶ್ರೇಯಸ್ಸು. ವೇದಗಳು ಅಪೌರುಷೇಯ ಎನ್ನುತ್ತಾರೆ? ಅವೇನು ಆಕಾಶದಿಂದ ಉದುರಿ ಬಿದ್ದವೇ? ಇದೆಲ್ಲ ಯುಕ್ತವೂ ತಾರ್ಕಿಕವೂ ಆದ ಮಾತುಗಳೇ? ಖಂಡಿತ ಅಲ್ಲ. ಅತಾರ್ಕಿಕವೂ ನಿರಾಧಾರವೂ ಆದ ಮಾತುಗಳನ್ನು ನಂಬಿ ನಡೆದರೆ ಹೇಗೆ ಶ್ರೇಯಸ್ಸು ಸಾಧ್ಯ? ಆದ್ದರಿಂದ ನಾನು ಹೇಳಿದಂತೆ ನದೆದು, ನನ್ನ ಮಾತುಗಳನ್ನು ಆಚರಿಸಿ ಯುಕ್ತರಾಗಿ ಬದುಕಿ ಸ್ವರ್ಗವನ್ನು ಪಡೆಯಿರಿ..

ಮಾಯಾಮೋಹನ ಮತುಗಳನ್ನು ಕೇಳಿ ಅಸುರರು ವೇದವನ್ನು ತ್ಯಜಿಸಿದರು. ತ್ರಯೀ ಎಂದು ಕರೆಸಿಕೊಂಡ ವೇದಗಳನ್ನು ತ್ಯಜಿಸಿಡೊಡನೆ ನಗ್ನ ಎನ್ನಿಸಿಕೊಂಡರು. ಮೂರೂ ಬಿಟ್ಟವರು ಎನ್ನುವ ಮಾತು ಹುಟ್ಟಿದ್ದೇ ಹೀಗೆ. ಮೂರೂ ಬಿಟ್ಟವರು ಎಂದರೆ ಧರ್ಮಸಮ್ಮತವಾದ ಆಚರಣೆಗಳನ್ನು ವರ್ಜಿಸಿದವರು ಅಂತ ಅರ್ಥ. ಮಾಯಾಮೋಹನು ಹೇಳಿದ ಮಾತುಗಳನ್ನೇ ಆಚರಿಸಿದರು. ಧರ್ಮವನ್ನು ತ್ಯಜಿಸಿದ್ದ ಅವರನ್ನು ದೇವತೆಗಳು ಸುಲಭವಾಗಿ ಸೋಲಿಸಿದರು.

ಉಳಿದ ಕೆಲವರು ತಾವು ನಂಬಿದ್ದ ಮಾಯಾಮೋಹನ ಉಪದೇಶವನ್ನೇ ಆಚರಿಸುತ್ತಾ ವೇದಗಳನ್ನು, ವೈದಿಕ ದೇವತೆಗಳನ್ನು ದೂಷಿಸತೊಡಗಿದರು. ಅವರ ದೂಷಣೆ ವಿತಂಡ ವಾದದಿಂದ ಕೂಡಿತ್ತು. ಅವರ ವಿಚಾರಗಳು ನಿರಾಧಾರವಾಗಿತ್ತು. ವೈದಿಕರು ಯಾವುದಾದರೊಂದನ್ನು ಅವರಿಗೊಪ್ಪುವ ತರ್ಕದಲ್ಲಿ ಸಾಧಿಸಲಿಲ್ಲ ಎನ್ನುವ ಕಾರಣಕ್ಕಷ್ಟೇ ವೈದಿಕರ ಮಾತುಗಳನ್ನು ಸುಳ್ಳು ಎಂದು ಹೇಳುತ್ತಿದ್ದರು. ವೇದದ ವಿಧಾನಗಳನ್ನೂ, ಅದರಲ್ಲಿನ ವಿಚಾರ ವಿಷಗಳನ್ನೂ ಆಚರಣೆಗಳನ್ನೂ ಕುತರ್ಕದ ಮೂಲಕ ಸುಳ್ಳು ಅಥವಾ ತಪ್ಪು ಎಂಬಂತೆ ಬಿಂಬಿಸುತ್ತಿದ್ದರು. ನೀವನ್ದುಕೊಣ್ಡಿದ್ದು ಸತ್ಯ. ನಮ್ಮ ಬಾಯಲ್ಲಿ ಗಂಜಿಗಳು ಅನ್ನಿಸಿಕೊಂಡವರೂ ಇಂಥಾ ಮಾತುಗಳನ್ನೇ ಆಡಿದ್ದು. ಜನ ಇಂಥವರನ್ನು ಪಾಷಂಡಿಗಳು ಎಂದು ಕರೆದರು.

ಮಾಯಾಮೋಹ ಹೇಳಿದ ಮಾತುಗಳನ್ನು ಮುಂದುವರೆಸಿದವರು ಪಾಷಂಡಿಗಳು ಅಂತ ಹೀಗೆ ತಿಳಿದೆ. ಮುಂದೆ ಕಲಿಯುಗದ ವರ್ಣನೆ ಮಾಡುವಾಗ ಅಲ್ಲಿ ಈ ರೀತಿ ಹೇಳಲಾಗಿದೆ.
"ಪಾಷಂಡಮಾಶ್ರಯೀಂ ವೃತ್ತಿಮಾಶ್ರಯಿಷ್ಯನ್ತಿ ಸತ್ಕೃತಾಃ"- ಪಾಷಂಡವಾದಿಗಳನ್ನು ಆಶ್ರಯಿಸಿ ಅವರ ವೃತ್ತಿಗಳನ್ನೇ ಆಶ್ರಯಿಸುತ್ತಾರೆ, ಅದೂ ಸತ್ಕೃತರು ಅಂದರೆ ಒಳ್ಳೆಯದನ್ನು ಮಾಡಿದವರು
ಇಂದಿನ ಬಾಯಿ ಹರುಕ ಭಿಕ್ಷುಕರ ಬಗೆಗೂ ಅಂದೇ ತಿಳಿದಿದ್ದರಲ್ಲ ಪಾರಾಶರ್ಯ ವ್ಯಾಸರು. ಅಚ್ಚರಿ ಅಲ್ಲವೇ?
ವರ್ತಮಾನದಲ್ಲೂ ಹೀಗೆ ವೇದಗಳನ್ನು ಅರಿಯದೆ ಅದನ್ನು ದೂಷಿಸಿ, ಆ ದೂಷಣೆಯನ್ನು ಸರಿ ಎಂದು ಸಾಧಿಸುವ ಜನ ಬಹಳ ಇದ್ದಾರೆ. ರಾಮನನ್ನು ಹೆಂಡಗುಡುಕ ಎಂದರು. ಅಪ್ಪನಿಗೆ ಹುಟ್ಟಿದವನಲ್ಲ ಎಂದರು. ತಾನು ಹಾಗಂದೆ ಇಲ್ಲ ಅಂತಲೂ ಹೇಳಿದರು. ಹಿಂದೂ ಎನ್ನುವ ಶಬ್ದದ ಅರ್ಥ, ಹೀನಶ್ಚ ದೂಷಿಶ್ಚ ಎಂದರು. ಬ್ರಾಹ್ಮಣರನ್ನು ಏನೇನೆಲ್ಲಾ ಅಂದರು. ಯಜ್ಞದಿಂದ ಆಹಾರ ಕೊರತೆ ಸೃಷ್ಟಿಯಾಯಿತು ಎಂದು ಪಾಠ ಬರೆದರು. ಹಿಂದೂ ಧರ್ಮಕ್ಕೆ ಅಪ್ಪ ಅಮ್ಮ ಇಲ್ಲ ಅಂದರು. ಸೀತೆಗೂ ಲಕ್ಶ್ಮಣನಿಗೂ ಅನೈತಿಕ ಸಂಬಂಧವಿತ್ತು ಎಂದರು. ಗಣೇಶನನ್ನು ಗಬ್ಬರ್ ಸಿಂಗ್ ರೀತಿ ಬಿಂಬಿಸಿದರು. ಮೈಸೂರಿನ ಚಾಮುಂಡೇಶ್ವರಿಯನ್ನು ಅಭಿಸಾರಿಕೆ ಎಂದರು. ಮಹಿಷನನ್ನು ಬುದ್ಧ ಎಂದರು. ಇವರ ಭಾಷಾಜ್ಞಾನದ ಅಗಾಧತೆ ಯಾವ ಮಟ್ಟದ್ದು ಎಂದರೆ ಆಸ್ತಿಕ ಎಂದರೆ ಆಸ್ತಿ ಇದ್ದವ ಎನ್ನುವಷ್ಟು. ಇಷ್ಟಾಗಿಯೂ, ಒಬ್ಬರನ್ನೊಬ್ಬರು ಬುದ್ಧಿ ಜೀವಿ ಎಂದು ಕರೆದರು.ಬಿಡಿ. ಪಟ್ಟಿ ಮಾಡಿದರೆ ಸಮಯ ವ್ಯರ್ಥ.
ನಾವೂ ಕಡಿಮೆ ಇಲ್ಲ. ಇವರಿಗೆ ಬಹಳ ಹೇಳಿಬಿಟ್ಟೆವು. ಪಾಕಿಸ್ತಾನಿ ಏಜೆಂಟರು, ಲದ್ದಿ ಜೀವಿಗಳು, ಕಾಂಗಿ ಬಕೆಟ್ಟುಗಳು, ಕೆಂಪಂಗಿಗಳು, ಕಮ್ಮಿನಿಷ್ಟರು, ಕಾಕಗಳು, ಬಾಯಿ ಬಡುಕರು, ಹರ್ಕು ಬಾಯಿಗಳು, ಅಲರ್ಜಿಗಳು, ಕಜ್ಜಿಗಳು, ಕಂತ್ರಿಗಳು.... ಸಾಕು ಬಿಡಿ. ಇವರನ್ನು ಬಯ್ಯುವ ಭರದಲ್ಲಿ ನಾವು ಎಷ್ಟೋ ಬಡವರ ಆಹಾರಕ್ಕೆ ಅವಮಾನ ಮಾಡಿಬಿಟ್ಟೆವು. ಗಂಜಿ ಎಂದು ಬಿಟ್ಟೆವು.
ನಮ್ಮ ಪುರಾಣಗಳೇ ಹೇಳುತ್ತಿವೆ ಇವಕ್ಕೆ ತಕ್ಕ ಹೆಸರು ಏನು ಅಂತ. ಮೂರು ಬಿಟ್ಟವರು, ಪಾಷಂಡಿಗಳು. ನಾವು ಇನ್ನೂ ಹೆಸರು ಹುಡುಕುವುದು ಬೇಡ. ಈಗಾಗಲೇ ಗಂಜಿಗಳು ಎಂದು ಕರೆದು ಎಷ್ಟೋ ಜನ ಬಡತನದಿಂದ ಮೇಲೆ ಬಂದವರು ಪಟ್ಟ ಕಷ್ತವನ್ನು ಅವಮಾನಿಸಿದ್ದೇವೆ. ಅವರು ಗಂಜಿಯಾದರೂ ಕಷ್ಟದಿಂದ ಸಂಪಾದಿಸಿದ್ದರು. ಈ ಪಾಷಂಡಿಗಳು ಸುಳ್ಳು ಹೇಳಿ, ಅರ್ಹರಿಗೆ ಸಿಗಬೇಕಾಗಿದ್ದನ್ನು ದೋಚಿದರು. ಆ ಶ್ರಮಿಕರ ಅರ್ಜನೆ ಇವರ ಚೌರ್ಯಕ್ಕೆ ಹೋಲಿಕೆಯಾಗುವುದು ಬೇಡ. ಇನ್ನೂ ನಾವು ಇವರನ್ನು ಪಾಷಂಡಿಗಳು ಎಂದೇ ಕರೆಯೋಣ. ಮೂರೂ ಬಿಟ್ಟವರು ಎಂದರೂ ಸರಿಯೆ. ಉದ್ದವಾದರೆ ಮೂಬಿ ಎನ್ನೋಣ. ನಗ್ನರು ಎಂದರೂ ಆದೀತು. ಇದಕ್ಕೆ ಆಧಾರ ಕೇಳುವ ಧೈರ್ಯ ಅವಕ್ಕಿಲ್ಲ. ಒಂದು ವೇಳೆ ಕೇಳಿದರೂ ನಮ್ಮಲ್ಲಿದೆ.

No comments:

Post a Comment