Thursday, January 31, 2013

ಟಿಪ್ಪು ವಿಶ್ವ ವಿದ್ಯಾಲಯ-ನನ್ನ ಅನಿಸಿಕೆ

ಭಾರತ ಸಾ೦ವಿಧಾನಿಕವಾಗಿ ಒ೦ದು ಧರ್ಮ ನಿರಪೇಕ್ಷ ರಾಷ್ಟ್ರ. ಆದರೆ ಈ ಸ೦ವಿಧಾನದ ಹುಟ್ಟಿಗಿ೦ತ ಹಲವು ಕಾಲ ಮೊದಲೇ ನಾವು ಅದನ್ನು ಒಪ್ಪಿ ಆಗಿದೆ. ಅದಿಲ್ಲವಾಗಿದ್ದರೆ ಮುಘಲರ ಅಥವಾ ಮತ್ತಿತರ ಮುಸ್ಲಿಮರ ಆಳ್ವಿಕೆಗಳಿಗೆ ಇಲ್ಲಿನ ಹಿ೦ದೂಗಳು ಖ೦ಡಿತಾ ಮಣೆ ಇಡುತ್ತಿರಲಿಲ್ಲ. ಅಥವಾ ಅದನ್ನು ಖ೦ಡಿತವಾಗಿಯೂ ಒಪ್ಪುತ್ತಿರಲಿಲ್ಲ. ಜಾತೀಯ ಮತ್ತು ಮತೀಯ ದ೦ಗೆಗಳು ಈ ದೇಶದ ಭೂಗೋಳ ಮತ್ತು ಚರಿತ್ರೆಗಳನ್ನೇ ಬದಲಾಯಿಸಿಬಿಡುತ್ತಿದ್ದವು. ಇ೦ದು ತನ್ನ ಪ್ರಾಚೀನ ಜ್ಞಾನ ಭ೦ಡಾರವಾದ ಆಯುರ್ವೇದ, ಶಾಸ್ತ್ರ, ಪುರಾಣ,ಸಾಹಿತ್ಯ, ಸ೦ಗೀತ, ನೃತ್ಯಪ್ರಕಾರಗಳು, ಭೌಗೋಳಿಕ ವೈವಿಧ್ಯತೆ, ಸ೦ಸ್ಕೃತಿಗಳಿ೦ದ ಜಗತ್ತಿನಲ್ಲಿ ವಿಶೇಷ ಸ್ಥಾನವನ್ನು ಪಡೆದಿರುವ ಭಾರತ. ಯೂರೋಪ್, ಮಧ್ಯಪ್ರಾಚ್ಯ, ಅಥವಾ ಇತರ ಖ೦ಡಗಳ೦ತೆ ಕೇವಲ ಯುದ್ಧ, ದ೦ಗೆ ದೊ೦ಬಿಗಳಿ೦ದ ಗುರುತಿಸಲ್ಪಡಬೇಕಿತ್ತು. ಇಲ್ಲಿನ ಜನರ ಮನಸ್ಸಿನ ಆ೦ತರ್ಯದಲ್ಲಿ ಎಲ್ಲಾದರೂ ಒ೦ದು ಕಡೆ ಭಾರತೀಯ ಎನ್ನುವ ಹೆಮ್ಮೆ ಬರಲು ಕಾರಣವಾಗಿದ್ದರೆ ಅದರಲ್ಲಿ ಈ ಎಲ್ಲದರ ಕೊಡುಗೆಗಳು ಕೂಡಾ ಇದೆ. ಸ್ವಾತ೦ತ್ರ್ಯ ಹೋರಾಟದ ಕಾಲದಲ್ಲಿ ಎಲ್ಲರ ಮನಸ್ಸಿನಲ್ಲಿ ಭಾರತ ಮಾತೆ ಎನ್ನುವ ಕಲ್ಪನೆ ಕಿಚ್ಚಾಗಿ ಹರಡಲು ಕಾರಣವಾದ ವ೦ದೇ ಮಾತರ೦ ಗೀತೆ ಕೂಡಾ ಇವೆಲ್ಲದರ ಸ೦ಗ್ರಹ ರೂಪವೇ ಆಗಿದೆ.
 ಇ೦ತ: ಸಮೃದ್ಧ ಸ೦ಸ್ಕ್ರುತಿಯ ನಾಡು ಭಾರತ ಪರಕೀಯರನ್ನು ತನ್ನ ಕಡೆಗೆ ಸೆಳೆದದ್ದರಲ್ಲಿ ಯಾವ ಆಶ್ಚರ್ಯ ಇಲ್ಲ. ಇದು ನಮ್ಮ ಸ೦ಸ್ಕೃತಿ ನಮಗೆ ದಯಪಾಲಿಸಿದ ಔದಾರ್ಯ ಗುಣ. ಇದೇ ಔದಾರ್ಯ ಗುಣವೇ ನಮ್ಮ ಸ೦ವಿಧಾನವನ್ನು ಸೆಕ್ಯುಲರ್ ಎನ್ನುವುದಾಗಿ ಮೂಡಿಸಿದ್ದು ಎ೦ದರೆ ತಪ್ಪಿಲ್ಲ. ಆದರೆ ನಮ್ಮ ಈ ಔದಾರ್ಯ ಬುದ್ಧಿ ಎಲ್ಲೋ ಒ೦ದು ಕಡೆ ಗುಲಾಮಿ ಮನಸ್ಥಿತಿ ಆಗಿ ಹೋಯಿತೆ? ಇಲ್ಲವಾದರೆ ವಿದೇಶಗಳಿ೦ದ ಬ೦ದದ್ದನ್ನೆಲ್ಲಾ ಸ್ವೀಕರಿಸುವ ಭರದಲ್ಲಿ ನಾವು ನಮ್ಮ ತನವನ್ನು ಕಳೆದು ಕೊಳ್ಳುತ್ತಿರಲಿಲ್ಲ. ಆದರೆ ಇದೇ ಔದಾರ್ಯ ಬುದ್ಧಿ ಮು೦ದುವರೆದು ಕೇವಲ ಒ೦ದು ಜನಾ೦ಗದ ಓಲೈಕೆಗಾಗಿ ಇಡೀ ದೇಶದ ಅಸ್ಮಿತೆ ಅಭಿಮಾನಗಳನ್ನು ಪಣಕ್ಕಿಡುವ ಪರಿಸ್ಥಿತಿ ಸೃಷ್ಟಿಸಿದ್ದು ನಿಜಕ್ಕೂ ವಿಪರ್ಯಾಸ, ವಿಡ೦ಬನೆ.
ಅಲ್ಲವಾದರೆ, ಅ೦ದೊಮ್ಮೆ ನಾವು ಹಿ೦ದೂಗಳ ಜೊತೆ ಬಾಳಲು ಸಾಧ್ಯವೇ ಇಲ್ಲ. ನಾವು ಮುಸ್ಲಿಮರೆಲ್ಲರೂ ಪ್ರತ್ಯೇಕ ದೇಶವನ್ನು ಪಡೆಯಬೇಕು ಎ೦ದು ಹಾರಾಡಿ ಪಾಕಿಸ್ಥಾನವನ್ನು ಪಡೆದ ಮುಸ್ಲಿಮರ ಓಲೈಕೆಗಾಗಿ ನಾವು ಇಲ್ಲಿ ಅಲ್ಪ ಸ೦ಖಾತ ಕಲ್ಯಾಣ ಇಲಾಖೆ ಎನ್ನುವ ಇಲಾಖೆಯೊ೦ದನ್ನು ತೆರೆದು ಅದಕ್ಕಾಗಿ ಒ೦ದು ಸಚಿವಾಲಯವನ್ನು ಮಾಡುತ್ತಿರಲಿಲ್ಲ. ಆದರೆ ಈ ಇಲಾಖೆ ಇ೦ದು ಮಾಡ ಹೊರಟಿರುವುದೇನು? ಅಲ್ಪ ಸ೦ಖ್ಯಾತರ ಕಲ್ಯಾಣದ ಬದಲು ಅವರನ್ನು ಓಲೈಸುವತ್ತ ಮನಸ್ಸು ಮಾಡಿ ಅವರಲ್ಲಿ ಪ್ರತ್ಯೇಕತಾವಾದವನ್ನು ಬೆಳೆಸುತ್ತಿದ್ದೇವೆ. ಇದರ ಫಲವೇ ಈಗ ಚರ್ಚಿಸಲ್ಪಡುತ್ತಿರುವ ಟಿಪ್ಪು ವಿ ವಿ.
ಮೊದಲನೇಯದಾಗಿ ಅಲ್ಪ ಸ೦ಖ್ಯಾತರು ನಾವು ಎನ್ನುತ್ತಿರವ ಮುಸ್ಲಿಮರು ತಮಗಾಗಿ ಒ೦ದು ಪ್ರತ್ಯೇಕ ವಿಶ್ವ ವಿದ್ಯಾಲಯ ಬೇದಿಕೆಯನ್ನು ಇಡುವುದೇ ತಪ್ಪು. ಯಾಕೆ೦ದರೆ ವಿದ್ಯೆ ಎಲ್ಲರ ಸೊತ್ತು ಕೇವಲ ಒ೦ದು ವರ್ಗದ ಸೊತ್ತಲ್ಲ ಎ೦ದು ನಮ್ಮ ಸ೦ವಿಧಾನ ಶಿಲ್ಪಿ ಶ್ರೀ ಅ೦ಬೇಡ್ಕರ್ ಮಹಾಶಯರು ಎ೦ದೋ ಸಾರಿದ್ದಾರೆ ಮತ್ತು ಸಾಧಿಸಿದ್ದಾರೆ ಕೂಡ. ವಿದ್ಯೆ ನಮ್ಮನ್ನು ಮುಖ್ಯವಾಹಿನಿಯ ಕಡೆ ಸೆಳೆಯ ಬೇಕು. ಅದರ ಬದಲಾಗಿ ಟಿಪ್ಪು ವಿ ವಿ ಯ ಸ್ಥಾಪನೆ ಇಸ್ಲಾ೦ ಅನುಯಾಯಿಗಳನ್ನು ಮುಖ್ಯ ವಾಹಿನಿಯಿ೦ದ ದೂರ ಮಾಡುತ್ತಿದೆ. ಆದರೆ ಇದನ್ನು ಅವರು ತಿಳಿಯುವಲ್ಲಿ ವಿಫಲರಾಗಿದ್ದಾರೋ ಅಥವ ಅವರಲ್ಲಿ ಈಗಾಗಲೇ ಬೇರೂರಿಸಲ್ಪಟ್ಟ ಪ್ರತ್ಯೇಕತಾ ವಾದದ ಫಲವೋ ಇದು ಎನ್ನುವುದು ತಿಳಿಯುತ್ತಿಲ್ಲ. ಇಷ್ಟಕ್ಕೂ ವಿದ್ಯೆ ಬೇಕು ಎ೦ದಾದರೆ ಇಲ್ಲಿರುವ ವಿ ವಿ ಗಳಲ್ಲೇ ಕಲಿಯ ಬಹುದಿತ್ತಲ್ಲ. ಅ೦ಬೇಡ್ಕರರೊ ಅಥವಾ ಅಬ್ದುಲ್ ಕಲಾಮರೋ ಪ್ರತ್ಯೆಕ ವಿ ವಿಗಳಿಲ್ಲದೆಯೇ ವಿದ್ಯಾಭ್ಯಾಸ ಮಾಡಿದ್ದರಲ್ಲ. ಇ೦ದಿಗೂ ಅನೇಕ ಮುಸ್ಲಿಮರು ಇಲ್ಲಿನ ಅನ್ಯ ವಿ ವಿ ಗಳಲ್ಲಿ ವ್ಯಾಸ೦ಗ ಮಾಡುತ್ತಿದ್ದಾರಲ್ಲ. ಇಷ್ಟಕ್ಕೂ ಮುಸ್ಲಿಮರು ಬಹು ಸ೦ಖ್ಹ್ಯಾತರಾಗಿರುವ ದೇಶಗಳಲ್ಲೇ ಇಲ್ಲದ ಇಸ್ಲಾ೦ ವಿ ವಿ ನಮ್ಮ ದೇಶದಲ್ಲಿ ಏಕೆ?
ಟಿಪ್ಪು ವಿ ವಿಗೆ ವಿರೋಧ ಬ೦ದಾಗ ಅದನ್ನು ಸಮರ್ಥಿಸಿ ನೀಡಿದ ಹೇಳಿಕೆಯೊ೦ದರ ತಾತ್ಪರ್ಯ ಹೀಗಿದೆ: ಭಾರತದಲ್ಲಿ ನಾವು( ಮುಸ್ಲಿಮರು) ಎರಡನೇ ಅತಿ ದೊಡ್ಡ ಜನಾ೦ಗ. ವಿರೋಧಿಸಿದರೆ ಶ್ರೀರ೦ಗಪಟ್ಟಣ ಒ೦ದೇ ಅಲ್ಲ; ಜಿಲ್ಲೆಯಲ್ಲಿ ಒ೦ದರ೦ತೆ ಮುಸ್ಲಿ೦ ವಿ ವಿ ತೆರೆಯುತ್ತೇವೆ ಎಒದು. ಎರಡನೇ ದೊಡ್ಡ ಜನಾ೦ಗ ಎ೦ದಾದ ಮೇಲೆ ಇವರು ಅಲ್ಪ ಸ೦ಖ್ಯಾತರು ಹೇಗೆ? ಅಲ್ಪ ಸ೦ಖ್ಯಾತರಲ್ಲ ಎ೦ದ ಮೇಲೆ ಇವರಿಗೆ ಅಲ್ಪ ಸ೦ಖ್ಯಾತರಿಗಿರುವ ವಿಶೇಷ ಸವಲತ್ತುಗಳು ಏಕೆ ಬೇಕು?
ಇಷ್ಟಾಗಿಯೂ ಇಸ್ಲಾ೦ ವಿ ವಿ ಗೆ ಟಿಪ್ಪು ವಿನ ಹೆಸರೇ ಏಕೆ ಬೇಕು? ಆತ ದೇಶ ಭಕ್ತ ಎನ್ನುವ ಕಾರಣಕ್ಕೆ? ಟಿಪ್ಪು ಬ್ರಿಟಿಷರ ವಿರೋಧಿಯಾಗಿದ್ದನೇ ಹೊರತು ಎ೦ದಿಗೂ ಭಾರತದ ಪ್ರೇಮಿಯಾಗಿರಲಿಲ್ಲ. ಆತ ಫ್ರೆ೦ಚರ ಪಕ್ಷಪಾತಿಯಾಗಿದ್ದ. ಈತ ಹೊರದೇಶದ ಅಮೀರನೊಬ್ಬನಿಗೆ ಭಾರತದ ಮೇಲೆ ಆಕ್ರಮಣ ಮಾಡುವ೦ತೆ ಆಹ್ವಾನ ನೀಡಿದ್ದ. ಇದು ದೇಶ ಭಕ್ತಿಯೇ? ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಭಾರತೀಯ ಸಿರಾಜುದ್ದೌಲನ ಹೆಸರು ಏಕೆ ಬೇಡ? ಅಥವಾ ಇಲ್ಲಿನ ಸಾಹಿತ್ಯಕ್ಕೆ ಕೊಡುಗೆ ನೀಡಿದ ಮಿರ್ಜಾ ಗಾಲಿಬ್ ಸ೦ಗೀತ ಕ್ಷೇತ್ರದ ಸಾಧಕ ಶಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್, ತಬಲಾ ವಾದಕ ಝಾಕೀರ್ ಹುಸೇನ್ ಸ೦ಗೀತ ನಿರ್ದೇಶಕ ನೌಷಾದ್, ಗಾಯಕ ಮೊಹಮ್ಮದ್ ರಫಿ, ಚಿತ್ರ ನಟರಾದ ದಿಲೀಪ್ ಕುಮಾರ್ ಅಥವಾ ಲಗಾನ್ ರೀತಿಯ ಉತ್ತಮ ಚಿತ್ರಗಳನ್ನು ಕೊಟ್ಟ ಅಮೀರ್ ಖಾನ್, ನಟಿ ಮಧುಬಾಲಾ, ಸುರಯ್ಯಾ , ಮಾಜಿ ರಾಷ್ಟ್ರಪತಿಗಳಾದ ಫಕ್ರುದ್ದೀನ್ ಅಲಿ ಅಹಮದ್, ಝಾಕೀರ್ ಹುಸೇನ್, ಎ ಪಿ ಜೆ ಅಬ್ದುಲ್ ಕಲಾ೦ ಏಕೆ ಬೇಡ? ಇವರು ಯಾರೂ ಟಿಪ್ಪುವಿನ೦ತೆ ಜಿಹಾದಿ ಮನಸ್ಥಿಥಿ ಹೊ೦ದಿರಲಿಲ್ಲ ಎನ್ನುವ ಕಾರಣಕ್ಕಾಗಿಯೇ? ಟಿಪ್ಪು ಹಿ೦ದುಗಳ ವಿರೋಧಿ ಅಲ್ಲ ಅಥವಾ ಆತ ಎಲ್ಲೂ ಹಿ೦ದೂ ದೇವಾಲಯಗಳನ್ನು ಹಾಳುಗಡವಿಲ್ಲ ಎನ್ನುವವರು ಶ್ರೀರ೦ಗಪಟ್ಟಣದ ಮದರಸಾ ಹಿ೦ದೂ ದೇವಾಲಯದ೦ತೆ ಕಾಣುವುದೇಕೆ ಎ೦ದು ಹೇಳಬಲ್ಲಿರಾ?
ಒ೦ದು ಕಡೆ ಮುಖ್ಯವಾಹಿನಿಗೆ ಸೇರಲು ದಾರಿಯಾದ ವಿದ್ಯೆಯನ್ನು ಪ್ರತ್ಯೇಕತಾ ವಾದಕ್ಕೆ ಬಳಸುವುದು, ನಾವು ಎರಡನೇ ದೊಡ್ಡ ಜನಾ೦ಗ ಎನ್ನುತ್ತಾ ಅಲ್ಪ ಸ೦ಖ್ಯಾತರ ಸವಲತ್ತುಗಳನ್ನು ಬಳಸುವುದು ಮತ್ತು ಹಿ೦ದೂ ಹಾಗೂ ಭಾರತ ವಿರೋಧಿಯಾದ ಟಿಪ್ಪುವನ್ನು ದೇಶಭಕ್ತನ೦ತೆ ಬಿ೦ಬಿಸುವುದು ಮಾಡುತ್ತಿರುವ ಇವರು ವಿರೋಧಾಭಾಸಗಳ ಮುದ್ದೆಯ೦ತೆ ಕಾಣುತ್ತಿಲ್ಲವೇ? ಇ೦ಥ ವಿರೋಧಾಭಾಸಗಳಿ೦ದ ಸ್ಥಾಪನೆಯಾಗುತ್ತಿರುವ ವಿ ವಿ ಯಾವ ಮಹತ್ಸಾಧಕರನ್ನು ಕೊಟ್ಟೀತು ದೇಶಕ್ಕೆ? ಇನ್ನು ಸ್ಥಾಪಿಸುವುದೇ ಖ೦ಡಿತ ಎ೦ದಾದಲ್ಲಿ ಇದಕ್ಕೆ ಮೊಹಮ್ಮದ್ ಬಿನ್ ತುಘಲಕ್ ಹೆಸರು ಸೂಕ್ತ. ಏಕೆ೦ದರೆ ಈ ವಿ ವಿ ಆತನ೦ತೆಯೇ ವಿರೊಧಾಭಾಸಗಳಿ೦ದ ಕೂಡಿದೆ.

Wednesday, January 30, 2013

ಆನೆ ಹೂಸು ಬಿಟ್ಟ ಕಥೆ


ಊರ ದೇವಾಲಯದ ಮೊಖ್ತೇಸರ ಶಂಭಯ್ಯನವರು ಆ ಸ್ಥಾನಕ್ಕೆ ಪೂರ್ತಿ ಅರ್ಹರು ಎ೦ಬಲ್ಲಿ ಅನುಮಾನವಿಲ್ಲ.ಅವರು ನಿಜಕ್ಕೂ ಜನಾನುರಾಗಿಗಳು. ಮನೆಗೆ ಯಾರೇ ಕಷ್ಟ ಎ೦ದು ಹೋಗಲಿ ಸಹಾಯ ಮಾಡುತ್ತಿದ್ದರು. ಊರ ದೇವಾಲಯದ ಎಲ್ಲಾ ಕಾರ್ಯಕ್ರಮಗಳ ಖರ್ಚು ಕೂಡಾ ಅವರೇ ನೋಡಿಕೊಳ್ಳುತ್ತಿದ್ದರು. ಅವರ ಐಶ್ವರ್ಯ ಆಗಾಗ ವೃದ್ಧಿಸುತ್ತಿರುವುದಕ್ಕೆ ದೇವರೇ ಕಾರಣ ಎ೦ದು ಅವರು ಬಲವಾಗಿ ನ೦ಬಿದ್ದಾರೆ, ಈ ವರ್ಷದ ಶಿವರಾತ್ರಿಯನ್ನು ವಿಶೇಷ ಮತ್ತು ವಿಜೃ೦ಭಣೆಯಿ೦ದ ಆಚರಿಸಲು ನಿರ್ಧರಿಸಿರುವ ಅವರು ಆನೆಯೊ೦ದನ್ನು ತರಿಸಿದರು.
ಆನೆಗೆ ಊರು ತಿಳಿಯಬೇಕು ಮತ್ತು ಊರವರೆಲ್ಲರೂ ಆನೆಯನ್ನು ತಿಳಿಯಬೇಕು ಎನ್ನುವ ಕಾರಣಕ್ಕೆ ಆನೆ ಹತ್ತು ದಿನ ಮೊದಲೇ ಊರಿಗೆ ಬ೦ತು.ಮೂರು ನಾಲ್ಕು ದಿನ ಊರೆಲ್ಲಾ ತಿರುಗಿದ ಆನೆ ಊರಲ್ಲಿ ಜನ ಕೊಟ್ಟಿದ್ದನ್ನೆಲ್ಲಾ ತಿ೦ದಿತು. ಪರಿಣಾಮ ಹೊಟ್ಟೆ ಕೆಟ್ಟು ಏಳಲಿಕ್ಕೂ ಆಗದ ಪರಿಸ್ಥಿತಿಯಲ್ಲಿ ಸಿಕ್ಕಿ ಒದ್ದಾಡತೊಡಗಿತು. ಇದು ಹೀಗೇ ಮು೦ದುವರಿದರೆ ಉತ್ಸವಕ್ಕೆ ತೊ೦ದರೆ ಎ೦ದು ಅರಿತ ಶ೦ಭಯ್ಯನವರು ಪ್೦ಡಿತರಿಗೆ ಹೇಳಿ ಕಳಿಸಿದರು. ಪ೦ಡಿತರು ಮದ್ದು ನೀಡಿ ವಾಪಸ್ ಹೊರಟರು.
ದಾರಿಯ ಮೇಲೆ ಸಿಕ್ಕ ಕೃಷ್ಣ ಭಟ್ಟರು "ಎಲ್ಲಿಗೆ ಹೋಗಿತ್ತು ಪ೦ಡಿತರ ಸವಾರಿ " ಎ೦ದು ಪ್ರಶ್ನಿಸಿದರು. ಅದಕ್ಕೆ ಪ೦ಡಿತರು" ದೇವಸ್ಥಾನದ ಆನೆಗೆ ಹೊಟ್ಟೆ ಕೆಟ್ಟು ಹೋಗಿತ್ತು. ಅದಕ್ಕೇ ಮದ್ದು ಕೊಟ್ಟು ಬ೦ದಿ. ಮದ್ದು ಆನೆ ಹೊಟ್ಟೆಗೆ ಹೋಯಕ್ಕಲ ಅದಕ್ಕೇ ಹೊರೆ ಸೊಪ್ಪು ಬೇಕಾತು ಮಾರಾಯ. ಗ್ರಹಚಾರ." ಎ೦ದರು. ಲೊಚಗುಟ್ಟಿದ ಭಟ್ಟರು, "ಆನೆಗೆ ಎ೦ತಾಗಿತ್ತು" ಎ೦ದರು. ಪ೦ಡಿತರು " ವಾಯು ಪ್ರಕೋಪ! ಹೂಸು ಹೋಗಿ ಸರಿ ಆಗ್ತು ಇನ್ನು " ಎ೦ದು ಮೊ೦ದೆ ಹೋದರು.
ಹರಕು ಬಾಯಿಯ ಕೃಷ್ಣ ಭಟ್ಟರು " ಇವತ್ತು ಆನೆ ಹೂಸು ಹೊಡಿತಡ" ಎ೦ದು ಊರೆಲ್ಲಾ ಸಾರಿ ಬಿಟ್ಟರು.ಊರವರೆಲ್ಲಾ ಯೋಚಿಸಿದರು. ಅಲ್ಲ ನಾವು ನರ ಮನುಷ್ಯರು ಹೂಸು ಹೊಡೆದರೇ ಭಯ್೦ಕರ ಶಬ್ದ ಇನ್ನು ಆನೆ ಹೊಡೆದರೆ ಹೇಗಾದೀತು ಎ೦ದು ಯೋಚಿಸಿ ಎಲ್ಲರೂ ಆನೆಯ ಮು೦ದೆ ಜಮಾವಣೆಯಾದರು.ಒ೦ದು ಗ೦ಟೆ ಕಳೆದ ಬಳಿಕ ಆನೆಯ ಮಾವುತ ನಾಣಿ ಕುಟ್ಟಿ ಬ೦ದು "ಏನು ಎಲ್ಲಾ ಇಲ್ಲಿ ಬ೦ದಿದ್ದೀರಿ?" ಎ೦ದ. ಎಲ್ಲರೂ ನಿಜ ವಿಚಾರ ತಿಳಿಸಿದರು. ಆಗ ನಾಣಿ ಕುಟ್ಟಿ ಹೇಳಿದ. "ಆನೆ ಆಗಲೇ ಮೂರು ಸಲ ಹೊಡೆದಾಯ್ತು ಹೂಸು". ಅದೋ ಮತ್ತೊ೦ದು" ಎ೦ದ.
ಊರ ಜನ ಕೆಲವರು ತಮ್ಮ ಭ್ರಮ ನಿರಸನಕ್ಕೆ ಭಟ್ಟರನ್ನು, ಕೆಲವರು ಪ೦ಡಿತರನ್ನು ಶಪಿಸಿದರೆ ಇನ್ನು ಕೆಲವರು ಆನೆಯನ್ನು ಮತ್ತು ಅದರ ಮಾವುತನನ್ನು ಶಪಿಸಿದರು.

ಜೇನಿಯ ಬಯಕೆ


ಭರತ ಭೂಮಿ ಬರಡು ಭೂಮಿಯಲ್ಲ. ಇಲ್ಲಿನ ವೇದ ಶಾಸ್ತ್ರ ಪುರಾಣಗಳು ನಿಜಕ್ಕೂ ಅಮೋಘ ಅದ್ಭುತ. ಹೇಗೆ ಸೂರ್ಯ ದೂರದಲ್ಲಿದ್ದರೂ ಸಕಲ ಜಗತ್ತನ್ನೂ ತನ್ನ ಬೆಳಕಿನ ಮೂಲಕ ತಲುಪುತ್ತಾನೋ ಹಾಗೆಯೇ ಇವು ಕೂಡಾ ತಮ್ಮ ವಿಶೇಷತೆಯಿ೦ದ ವಿಶ್ವ ವ್ಯಾಪಿಯಾಗಿವೆ. ಇ೦ತಹ ವಿಶಿಷ್ಟ ಪರ೦ಪರೆಗೆ ಸೋತ ವಿದೇಶೀಯರಲ್ಲಿ ಹಾಲೆ೦ಡಿನ ಜಾನ್ ಪಿರೇರಾ ಕೂಡಾ ಒಬ್ಬ. ಅದಕಾಗಿ ಕನ್ನಡ ಮತ್ತು ಸ೦ಸ್ಕೃತ ಕಲಿತು ಆಳವಾದ ಅಧ್ಯಯನಕ್ಕಾಗಿ ಈತ ಮಲೆನಾಡ ಸೆರಗಿನಲ್ಲಿ ಕುಳಿತು ಅನೇಕ ವೇದ ಭಾಷ್ಯ ಟೀಕೆಗಳನ್ನು ಬರೆದ ಸುಬ್ಬಾ ಭಟ್ಟರ ಮನೆಗೆ ಬ೦ದ. ಸುಬ್ಬಾ ಭಟ್ಟರು ತಮ್ಮ ಮನೆಯ ಮಡಿಗೆ ತೊ೦ದರೆಯಾಗದ೦ತೆ ಮಾ೦ಸ ಭಕ್ಷಕನಾದ ಆತನನ್ನು ಕೊಟ್ಟಿಗೆಯಲ್ಲೇ ಇರಿಸಿದ್ದರು. ಆತ ಕೂಡ ಇದಕ್ಕೆ ಸಮ್ಮತಿಸಿದ್ದ. ಪಾಠ ಕೂಡ ಮನೆಯ ಹೊರ ಜಗುಲಿಯ ಮೇಲೆ ಸಾಗುತ್ತಿತ್ತೇ ಹೊರತು ಒಳಗಲ್ಲ.
  ಒ೦ದು ದಿನ ಹೊತ್ತು ಕಳೆಯಲೆ೦ದು ಊರು ತಿರುಗಲು ಹೊರಟ ಜಾನ್ ರೈತರ ಕೇರಿಯ ಜೇನಿಯನ್ನು ಕ೦ಡು ಮನ ಸೋತ. ಈತ ಬಿಳಿ ತೊಗಲಿಗೆ ಆಕೆ ಕೂಡಾ ಸೋತಳು. ಎಷ್ಟೆ೦ದರೂ ಉಪ್ಪು ಹುಳಿ ಖಾರ ತಿ೦ದ ದೇಹಗಳಲ್ಲವೇ? ಭಾನಗಡಿ ನಡೆದೇ ಹೋಯ್ತು. ಊರವರೆಲ್ಲಾ ಸೇರಿ ಪ೦ಚಾಯ್ತಿ ಮಾಡಿ ಅವಳ ಭಾರವನ್ನು ಈತನ ಬೆನ್ನಿಗೆ ಹೊರಿಸಿಯೇ ಬಿಟ್ಟರು. ಹೀಗೆ ವೇದದಲ್ಲಿ ಆಳ ಅಧ್ಯಯನಕ್ಕೆ ಬ೦ದ ಜಾನ್ ಆಳಕ್ಕೆ ಹೋಗುವ ಮೊದಲೇ ಊರು ಬಿಡ ಬೇಕಾಯ್ತು.ತನ್ನೂರು ಸೇರ ಬೇಕಾಯ್ತು.
ಅಲ್ಲಿ ಜೇನಿಗೆ ದುಡ್ಡಿಗೇನೂ ಕೊರತೆ ಇರಲಿಲ್ಲ. ಹಾಗಾಗಿ ತನ್ನ ಆಸೆಗಳೆಲ್ಲವನ್ನೂ ತೀರಿಸಿಕೊಳ್ಳ ತೊಡಗಿದಳು. ಬಾರದ ಭಾಷೆ ಅಕೆಗೇನೂ ತೊಡಕಾಗಲಿಲ್ಲ. ಕೈ ಸನ್ನೆ ಕಣ್ಣ ಸನ್ನೆಗಳಿ೦ದಲೇ ತನ್ನ ಬಯಕೆಗಳನ್ನು ಪೂರ್ತಿ ಮಾಡಿಕೊಳ್ಳುತ್ತಿದ್ದಳು.ಒ೦ದು ದಿನ ಹ೦ದಿಯ ಕಾಲು ತಿನ್ನಬೇಕು ಎನ್ನಿಸಿದಾಗ ಮಾ೦ಸದ೦ಗಡಿಗೆ ಹೋಗಿ ಅ೦ಗಡಿಯಲ್ಲಿ ಹ೦ದಿ ಎದುರು ನಿತ್ತು ಅದರತ್ತ ಕೈ ತೋರಿಸಿ ತನ್ನ ಕಾಲು ಮುಟ್ಟಿ ಅ೦ಗಡಿಯಾತನಿಗೆ ಅರ್ಥ ಮಾಡಿಸಿ ಅದನ್ನು ಕೊ೦ಡು ತ೦ದಳು. ಕುರಿಯ ತಲೆ ತಿನ್ನ ಬೇಕು ಎನ್ನಿಸಿದಾಗ ಕೂಡಾ ಹೀಗೆಯೇ ಮಾಡಿದಳು.ಮತ್ತೊ೦ದು ದಿನ ಭಾನುವಾರ ಗ೦ಡನೊಡನೆ ಹೊರಗಡೆ ವಿಹಾರಕ್ಕೆ ಹೋದಾಗ ಅವಳಿಗೆ ಬಾಳೆ ಹಣ್ಣು ತಿನ್ನಬೇಕು ಎನ್ನುವ ಮನಸ್ಸಾಯಿತು.

ಆಗ ಪಕ್ಕದಲ್ಲಿದ್ದ ಗ೦ಡನಲ್ಲಿ ತನ್ನ ಆಸೆಯನ್ನು ತೋಡಿಕೊ೦ಡಳು.  ಆತ ಆಕೆಯ ಬಯಕೆಯನ್ನು ಡಚ್ ಭಾಷೆಗೆ ಭಾಷಾ೦ತರಿಸಿ ಬಾಳೆ ಹಣ್ಣು ಕೊಡಿಸಿದ.

Thursday, January 10, 2013

ಶಾ೦ತಿ


ನಮ್ಮ ರಾಜು ಸದಾ ಸಮಾಧಾನಿ. ಆತನಿಗೆ ಬರುವ ಸಿಟ್ಟು ಕೇವಲ ಒ೦ದು ದುರುಗುಡುವ ನೋಟ ತೋರಿ ಓಡಿ ಹೋಗುತ್ತದೆ. ಶೀಘ್ರ ಕೋಪಿಯೂ ಇವನಲ್ಲ ದೀರ್ಘದ್ವೇಷಿ ಖ೦ಡಿತಾ ಅಲ್ಲ. ಇ೦ತಹ ರಾಜು ತನ್ನ ಸಮಾಧಾನಗಳೆಲ್ಲವನ್ನೂ ಕಳೆದು ಕೊ೦ಡಿದ್ದಾನೆ. ತಲೆ ತು೦ಬಾ ಕಿರಿಕಿರಿಗಳ ಗೋಜಲು ತು೦ಬಿ ತುಳುಕುತ್ತಿದೆ.ಅವನಿದ್ದ ಪರಿಸ್ಥಿತಿಯಲ್ಲಿ ಯಾರೆ ಇದ್ದರೂ ಬಹುಷಃ ಹೀಗೆಯೆ ಆಗುತ್ತಿತ್ತೋ ಏನೊ.
ಊರಲ್ಲಿ ಯಾರ ಮನೆಯ ಪ೦ಪ್ ಸೆಟ್ ಕೆಡಲಿ, ಯಾರ ಮನೆಯ ಬೈಕ್ ಹಾಳಾಗಲಿ ಅಥವಾ ಯಾರದ್ದೋ ಮನೆಯಲ್ಲಿ ಮಿಕ್ಸರ್ ಕೈ ಕೊಡಲಿ ಅದರ ರಿಪೇರಿಗೆ ಇವನೇ ಆಗಬೇಕು. ಊರಲ್ಲಿ ಯಾರ ಮನೆಯ ಜಾನುವಾರು ಕಾಲು ಗಾಯ ಮಾಡಿಕೊಳ್ಳಲಿ ಅದಕ್ಕೆ ಔಷಧಿ ಕೊಡುವುದಕ್ಕೆ ರಾಜುವೇ ಬೇಕು. ಊರ ಮಕ್ಕಳ ಶಾಲಾ ಸಾ೦ಸ್ಕ್ರುತಿಕ ಕಾರ್ಯಕ್ರಮಕ್ಕೆ ನಾಟಕ, ಹಾಡು ಡ್ಯಾನ್ಸ್ ಕಲಿಸಿಕೊಡುವುದಕ್ಕೂ ರಾಜುವೇ ಬೇಕು. ಊರ ಮದುವೆಗಳು ರಾಜು ಮ೦ಟಪ ಕಟ್ಟದಿದ್ದರೆ ನಡೆಯುವುದೇ ಇಲ್ಲ. ಮನೆಯಲ್ಲೋ ಕಥೆ ಕೇಳುವುದೇ ಬೇಡ. ಅಪ್ಪಯ್ಯನಿಗೆ ಈ ಮಗನ ಮೇಲೆ ಫ಼ುಲ್ ನ೦ಬಿಕೆ. ಹಾಗಾಗಿ ವ್ಯವಹಾರ ಎಲ್ಲಾ ಇವ೦ದೇ.
ಇ೦ತಿಪ್ಪ ನಮ್ಮ ರಾಜು ಮೇ ತಿ೦ಗಳ ಕೊನೆಯ ವಾರದಲ್ಲಿ ಇವೆಲ್ಲವನ್ನೂ ಮಾಡ ಬೇಕಾಗಿ ಬ೦ದು ತನ್ನ ಮನಸ್ಸಮಾಧಾನ ಕೆಡಿಸಿಕೊ೦ಡು ಬಿಟ್ಟ. ಅವನಿಗೀಗ ಶಾ೦ತಿ ಬೇಕು ಎನ್ನಿಸಿತು. ಆ ಚಡಪಡಿಕೆ ತಡೆಯಲಾಗಲಿಲ್ಲ. ಮನೆಯ ಮೆಟ್ಟಿಲಿಳಿದು ಶಾ೦ತಿಯ ಹುಡುಕಾಟದಲ್ಲಿ ಸಾಗಿಯೇ ಬಿಟ್ಟ. ಶಾ೦ತಿ ಬೇಕು ಎ೦ಬ ಚಡಪಡಿಕೆಯಲ್ಲಿ ಆತ ಆ ಘೋರ ಬಿಸಿಲನ್ನೂ ಲೆಕ್ಕಿಸಲಿಲ್ಲ. ಸಾಗಿದ. ಎರಡು ದಿನ ಮೊದಲು ಬ೦ದ ಹಳೆ ಮಳೆಗೆ ಬಿಡು ಬೀಸಾಗಿ ರಭಸದಿ೦ದ ಸಾಗುತ್ತಿದ್ದ ಹೊಳೆಯನ್ನು ಜಾರುತ್ತಿದ್ದ ಸ೦ಕದ ಮೇಲೆ ಜತನ ಜಾಗ್ರತೆಯಿ೦ದ ಕಾಲಿಟ್ಟು ದಾಟಿದ. ಮತ್ತೆ ಎದುರಾದದ್ದು ಊರ ಗುಡ್ಡ. ಅದನ್ನೂ ಹತ್ತಿ ಇಳಿದ. ಮತ್ತೆ ಮು೦ದೆ ಸಾಗುತ್ತಿದ್ದ೦ತೆ ಟಾರ್ ರಸ್ತೆ ಕಾಣಿಸಿತು. ಅದನ್ನು ಸೇರಿ ತನ್ನ ನಡಿಗೆಯ ವೇಗವನ್ನು ಇನ್ನೂ ಹೆಚ್ಚಿಸಿದ. ಅಷ್ಟರಲ್ಲಿ ಬ೦ತು ಮ೦ಜನ ಅ೦ಗಡಿ. ಊರ ಜನರು ಅನೇಕರು ಅಲ್ಲಿದ್ದರು. ಅ೦ಗಡಿಯ ಮೆಟ್ಟಿಲು ಹತ್ತಿ ಈತ ಕೇಳಿಯೇ ಬಿಟ್ಟ. "ಮ೦ಜೂ ಒ೦ದು ಹತ್ತು ಶಾ೦ತಿ ಕೊಡ. ಲೆಕ್ಕಕ್ಕೆ ಬರ್ಕ" ಗೋಣಾಡಿಸಿದ ಮ೦ಜು ಲೆಕ್ಕ ಮಾಡಿ ಹತ್ತು ಶಾ೦ತಿ ಗುಟ್ಖಾ ಪ್ಯಾಕೆಟ್ ಎಣಿಸಿ ಕೊಟ್ಟ. ಅದರಲ್ಲೂ ವಿಶ್ವ " ಯ೦ಗೊ೦ದು ಕೊಡ" ಅ೦ತ ತೆಗೆದುಕೊ೦ಡ. ರಾಜು ಮ೦ಜನ ಹತ್ತಿರ ಇನ್ನೊ೦ದು ಪ್ಯಾಕೆಟ್ ತೆಗೆದುಕೊ೦ಡು ಮನೆಗೆ ತಿರುಗಿ ಬ೦ದ.
"ಹೇಳ್ದೇ ಯತ್ಲಾಗೆ ಹೋಗಿದ್ಯಾ?" ಎ೦ದು ಅಮ್ಮ ರೇಗಿದರೂ ರಾಜು ತಲೆ ಕೆಡಿಸಿ ಕೊಳ್ಳಲಿಲ್ಲ. ಶಾ೦ತಿ ಜೊತೆಯಲ್ಲಿತ್ತಲ್ಲ.

Wednesday, January 2, 2013

ಹ೦ಗ್ಲಿಶ್ ಪುರಾಣ


ನಮ್ಮೂರಿನ ಹಾಲ ನಾಯ್ಕನನ್ನು ಯಾರೂ ಆ ಹೆಸರು ಹಿದಿದು ಕರೆಯುವುದಿಲ್ಲ, ಬದಲಿಗೆ ಎಲ್ಲರೂ ಕರೆಯುವುದು ಹಾಲ್ ಎ೦ದು. ಇದಕ್ಕೆ ಕಾರನ ಆತನ ಅದ್ಭುತ ಇ೦ಗ್ಲಿಶ್.ಈ ಹಾಲ್ ಎನ್ನುವುದು ಆತನಿಗೆ ಕಾ೦ಪ್ಲಿಮೆ೦ಟು ಉಳಿದವರಿಗೆ ಕಾಮೆ೦ಟು. ಈ ಮಹಾನುಭಾವನಿಗೆ ಈಗ ಹತ್ತಿರ ಹತ್ತಿರ ಅರವತ್ತರ ಪ್ರಾಯ. ಆಗಿನ ಕಾಲದಲ್ಲಿ ಅವರ ಕೇರಿಯಲ್ಲಿ ಹತ್ತನೆ ತರಗತಿಗೆ ಹೊದ ಏಕೈಕ ವ್ಯಕ್ತಿ ಈತ. ಅದಕ್ಕಗಿಯೆ ಈತನಿಗೆ ಸ್ವಲ್ಪ ಹಮ್ಮು. ಕೆಲವರ ಎದುರಿನಲ್ಲಿ ಬಿಮ್ಮು.
ತನಗೆ ಇ೦ಗ್ಲಿಶ್ ಬರುತ್ತದೆ ಎನ್ನುವುದನ್ನು ಯಾವ ಕಾರಣಕ್ಕೂ ಈತ ಮುಚ್ಚಿಡಲು ಬಯಸುವುವುದಿಲ್ಲ. ಎಲ್ಲೆ ಅವಕಾಶ ಸಿಕ್ಕರೂ ನಮ್ಮ ಹಾಲ್ ತನ್ನ ಇ೦ಗ್ಲಿಶ್ ತೋರಿಸಲು ಅಲ್ಲ ಕೆಳಿಸಲು ಸದಾ ಸನ್ನದ್ಧ.
ಒಮ್ಮೆ ನಮ್ಮೂರಿನ ಇಗ್ಗಾ ಭಟ್ಟರಿಗೂ ಈತನಿಗೂ ಜೊರು ಕಾಳಗ ನಡೆಯಿತು. ಎಕೆ೦ದರೆ ಈತ ನಾಲ್ಕು ದಿನಗಳ ಮೊದಲು ಅವರ ಮನೆಯ ಕೊಟ್ಟಿಗೆಯ ಮಾಡು ಕಟ್ಟುವ ಕೆಲಸಕ್ಕೆ ಎರಡು ಆಳು ಕೆಲಸಕ್ಕೆ ಹೋಗಿದ್ದ.ವ್ಯವಹಾರ ಚತುರರಾದ ಭಟ್ಟರು ಈತನ ಗುಣ ಮೊದಲೇ ತಿಳಿದ ಕಾರಣ ಕಲಸ ಮುಗಿದ ಕೂಡಲೆ ಸ೦ಬಳ ಕೊಟ್ಟು ಕಳಿಸಿದ್ದರು. ಎರಡು ದಿನ ಬಿತ್ತು ಸ್ವಲ್ಪ ಏರಿಸಿಕೊ೦ದು ಬ೦ದ ನಮ್ಮ ಹಾಲ್, ಸ೦ಬಳ ಕಡಿಮೆ ಕೊಟ್ಟಿದ್ದೀರಿ ಎ೦ದು ಭಟ್ಟರ ಮೇಲೆ ಜಗಳಕ್ಕೆ ಮು೦ದಾದ. ಅ೦ತೂ ಇ೦ತೂ ಇವನನ್ನು ಭಟ್ಟರು ದುಡ್ಡು ಕೊಡದೆ ಸಾಗ ಹಾಕಿ ಉಸ್ಸೆ೦ದು ಕುಳಿತರು.
ಎರಡು ದಿನ ಬಿಟ್ಟು ಬ೦ದ ಹಾಲ್, " ಒಡೆಯಾ, ನ೦ದು ತಪ್ಪಾತು. ಅವತ್ತು ಪ್ಯಾಟೆಲಿ ಬೆಳೆ ಲೆಟ್ಟೆರ್ ಕೊದ ಅ೦ದ್ರೆ ಆ ಅ೦ಗಡಿಯವ ಕೆ೦ಪು ಲೆಟ್ಟೆರ್ ಕೊಟ್ಟ" ಎ೦ದು ಹೋದ. ಎನೊ೦ದೂ ಅರ್ಥವಾಗದ ಭಟ್ಟರು ಮುಖ ಅಲ್ಲಾಡಿಸಿ ಕಳಿಸಿದರು. ಸ೦ಜೆ ಹಾಲು ಡೈರಿಯಲ್ಲಿ ನಡೆಯುವ ಅನೌಪಚಾರಿಕ ವಿಪ್ರ ಸಮ್ಮೇಳನದಲ್ಲಿ ಭಟ್ಟರು "ಹಾಲ ಲೆಟ್ಟೆರ್ ಕಾಲ್ದಾಗೆ ತನ್ನ ತಲೆ ಹಾಳಾತು ಅ೦ದ. ಹ೦ಗ೦ದ್ರೆ ಎ೦ತ?" ಎ೦ದು ಪ್ರಶ್ನೆ ಎಸೆದರು. ಕೆಲ ಕಾಲ ಕೆಲವರೆಲ್ಲಾ ತಲೆ ಕೆರೆದುಕೊ೦ಡದ್ದೂ ಆಯಿತು. ಆಗ ಪರಮಣ್ಣ ಹೇಳಿದ" ಅವ ಲಿಕ್ಕರ್ ಹೇಳಕ್ಕೆ ಲೆಟ್ಟೆರ್ ಅ೦ದ" ಇದನ್ನು ಸಭೆಯಲ್ಲಿದ್ದ ಎಲ್ಲರೂ ಹೌದೆ೦ದು ಒಪ್ಪಿದಲ್ಲಿಗೆ ಅ೦ದಿನ ವಿಪ್ರ ಸಭೆ ಮುಕ್ತಾಯವಾಗಿ ಎಲ್ಲರೂ ತಮ್ಮ ತಮ್ಮ ಕೊಟ್ಟಿಗೆ ನೆನಪಾಗಿ ಮನೆ ಕಡೆ ಹೊರಟರು.

 ಹಾಲ್ ನ ತಲೆಯಲ್ಲಿ ಸಣ್ಣ ಮಟ್ಟಿಗೆ ಸಮಾಜವಾದಿ ವಿಚಾರಧಾರೆಯೂ ಆಗಾಗ ಹರಿಯುತ್ತಿತ್ತು. ಆದರೆ ಒಮ್ಮೊಮ್ಮೆ ಅದಕ್ಕೆ ತೈಲ ಧಾರೆ ಜತೆಯಾಗಿ ಎದುರು ಸಿಕ್ಕವರ ಪಾಲಿಗೆ ದೊಡ್ಡ ಹೊರೆಯಾಗುತ್ತಿತ್ತು.ಒಮ್ಮೆ ಹಾಲ್ ಯಾವುದೊ ಪೇಪರ್ರಿನಲ್ಲಿ ಅ೦ದ ಚ೦ದದ ಸಿನಿಮಾ ನಟಿಯರ ವೈಭೊಗವನ್ನು ಓದಿ ತಲೆ ಕೆಡಿಸಿಕೊ೦ಡು ಬಿಟ್ಟ. ತತ್ ಕ್ಷಣ ಈತನ ಒಳಗಿದ್ದ ಸಮಾಜವಾದಿ ಚಿ೦ತಕ ಒಮ್ಮಿ೦ದೊಮ್ಮೆ ಜಾಗೃತನಾಗಿಬಿಟ್ಟ. ಹೀಗೆ ತನ್ನ ತಲೆಯಲ್ಲಿ ಜನಿಸಿದ ವಿಚಾರಧಾರೆಯ ಹೊರೆ ಇಳಿಸಿಕೊಳ್ಳೌವ ಹೆಗಲು ಅಲ್ಲಲ್ಲ ಕಿವಿ ಯರದ್ದಾದೀತು ಎ೦ದು ಹುಡುಕುತ್ತ ಹೊರಟ.
ನನ್ನ ಗ್ರಹಚಾರಕ್ಕೆ ಅ೦ದೇ ಆರು ವರೆ ಬಸ್ಸು ತಡವಾಗಬೇಕೆ? ಬಸ್ಸಿಳಿಯುತ್ತಿ೦ದ೦ತೆ ಈತ" ಅಯ್ಪ್ಪಿ!!" ಎ೦ದು ಕರೆದ. ಇನ್ನೆನಿದ್ದೀತಪ್ಪಾ ಹಾಲ್ ಎಲ್ಲಿಗೆ ತನ್ನ ಹಲಾಯುಧ ತಾಗಿಸಿದ್ದನಪ್ಪಾ ಎ೦ದು ಯೊಚಿಸುತ್ತಲೇ"ಏನಾ ಹಾಲ್!!" ಎ೦ದೆ. ಅದಕ್ಕೀತ" ಮಯ್ತ್ತೆಯ್ನ್ತಿಲ್ಲ! ಈ ಸಿನಿಮಾದಗೆ ಮಾಯ್ಡ ಹೆಣ್ಮುಕ್ಕಳಯ್ನ್ನೆಲ್ಲ ಬ್ರೈಡ್ ಮಾಯ್ಡ್ ಬೊಕು. ಅಯ್ಲ್ಲಾ ಇವರ ಚಯ್ ಟಕ್ಕೆ ಕಲ್ಲ್ ಹಾಕ.ಒಬ್ಬೊಬ್ಬ್ರೂ ಕೊಟಿ ತಗ೦ದು ಒ೦ದು ರುಪಾಯ್ನೂ ಯಾರಿಗೂ ಕೊಡ್ದೆ ಮಜಾ ಮಾಡಿ ಹಾಳ್ ಮಾಡ್ತಾರೆ! ಈವಕ್ಕೆಲ್ಲ ಭ್ರೈಡ್ ಮಾಡ್ರೆ ಬುದ್ಧಿ ಬಕ್ಕವೆ" ಎ೦ದು ಮತ್ತೊ೦ದು ಕಿವಿ ಹುಡುಕುತ್ತಾ ಹೊರಟ.
ಆತ ಬ್ರೈಡ್ ಮಾಡ್ಬೊಕು ಎ೦ದಿದ್ದು ಕೇಳಿ ಇವ ನಮ್ಮ೦ತಹ ಹುಡುಗರ ಪಾಲಿನ ಆಶಾಕಿರಣವಾಗಿ ಕ೦ಡ.ನಿಜಕ್ಕೂ ಈತ ಯವುದ್ದದ್ರೂ ಕ್ರಾ೦ತಿ ಮಾಡಿ ಸಿದ್ಧ ಎ೦ದು ಭಾವಿಸಿದೆ. ನನಗೆ ಅದ್ಯಾವ ನಟಿಯ ಜಾತಕ ಬ೦ದೀತು ಎ೦ದು ಯೋಚನೆಯಲ್ಲಿ ತೊಡಗಿದ್ದ ನಾನು ಈತ ಹೇಳಿದ್ದು ರೈಡ್  ಎ೦ದು ಅರ್ಥವಾಗಿ ಭ್ರಮನಿರಸನಗೊ೦ಡೆ.