Wednesday, January 30, 2013

ಜೇನಿಯ ಬಯಕೆ


ಭರತ ಭೂಮಿ ಬರಡು ಭೂಮಿಯಲ್ಲ. ಇಲ್ಲಿನ ವೇದ ಶಾಸ್ತ್ರ ಪುರಾಣಗಳು ನಿಜಕ್ಕೂ ಅಮೋಘ ಅದ್ಭುತ. ಹೇಗೆ ಸೂರ್ಯ ದೂರದಲ್ಲಿದ್ದರೂ ಸಕಲ ಜಗತ್ತನ್ನೂ ತನ್ನ ಬೆಳಕಿನ ಮೂಲಕ ತಲುಪುತ್ತಾನೋ ಹಾಗೆಯೇ ಇವು ಕೂಡಾ ತಮ್ಮ ವಿಶೇಷತೆಯಿ೦ದ ವಿಶ್ವ ವ್ಯಾಪಿಯಾಗಿವೆ. ಇ೦ತಹ ವಿಶಿಷ್ಟ ಪರ೦ಪರೆಗೆ ಸೋತ ವಿದೇಶೀಯರಲ್ಲಿ ಹಾಲೆ೦ಡಿನ ಜಾನ್ ಪಿರೇರಾ ಕೂಡಾ ಒಬ್ಬ. ಅದಕಾಗಿ ಕನ್ನಡ ಮತ್ತು ಸ೦ಸ್ಕೃತ ಕಲಿತು ಆಳವಾದ ಅಧ್ಯಯನಕ್ಕಾಗಿ ಈತ ಮಲೆನಾಡ ಸೆರಗಿನಲ್ಲಿ ಕುಳಿತು ಅನೇಕ ವೇದ ಭಾಷ್ಯ ಟೀಕೆಗಳನ್ನು ಬರೆದ ಸುಬ್ಬಾ ಭಟ್ಟರ ಮನೆಗೆ ಬ೦ದ. ಸುಬ್ಬಾ ಭಟ್ಟರು ತಮ್ಮ ಮನೆಯ ಮಡಿಗೆ ತೊ೦ದರೆಯಾಗದ೦ತೆ ಮಾ೦ಸ ಭಕ್ಷಕನಾದ ಆತನನ್ನು ಕೊಟ್ಟಿಗೆಯಲ್ಲೇ ಇರಿಸಿದ್ದರು. ಆತ ಕೂಡ ಇದಕ್ಕೆ ಸಮ್ಮತಿಸಿದ್ದ. ಪಾಠ ಕೂಡ ಮನೆಯ ಹೊರ ಜಗುಲಿಯ ಮೇಲೆ ಸಾಗುತ್ತಿತ್ತೇ ಹೊರತು ಒಳಗಲ್ಲ.
  ಒ೦ದು ದಿನ ಹೊತ್ತು ಕಳೆಯಲೆ೦ದು ಊರು ತಿರುಗಲು ಹೊರಟ ಜಾನ್ ರೈತರ ಕೇರಿಯ ಜೇನಿಯನ್ನು ಕ೦ಡು ಮನ ಸೋತ. ಈತ ಬಿಳಿ ತೊಗಲಿಗೆ ಆಕೆ ಕೂಡಾ ಸೋತಳು. ಎಷ್ಟೆ೦ದರೂ ಉಪ್ಪು ಹುಳಿ ಖಾರ ತಿ೦ದ ದೇಹಗಳಲ್ಲವೇ? ಭಾನಗಡಿ ನಡೆದೇ ಹೋಯ್ತು. ಊರವರೆಲ್ಲಾ ಸೇರಿ ಪ೦ಚಾಯ್ತಿ ಮಾಡಿ ಅವಳ ಭಾರವನ್ನು ಈತನ ಬೆನ್ನಿಗೆ ಹೊರಿಸಿಯೇ ಬಿಟ್ಟರು. ಹೀಗೆ ವೇದದಲ್ಲಿ ಆಳ ಅಧ್ಯಯನಕ್ಕೆ ಬ೦ದ ಜಾನ್ ಆಳಕ್ಕೆ ಹೋಗುವ ಮೊದಲೇ ಊರು ಬಿಡ ಬೇಕಾಯ್ತು.ತನ್ನೂರು ಸೇರ ಬೇಕಾಯ್ತು.
ಅಲ್ಲಿ ಜೇನಿಗೆ ದುಡ್ಡಿಗೇನೂ ಕೊರತೆ ಇರಲಿಲ್ಲ. ಹಾಗಾಗಿ ತನ್ನ ಆಸೆಗಳೆಲ್ಲವನ್ನೂ ತೀರಿಸಿಕೊಳ್ಳ ತೊಡಗಿದಳು. ಬಾರದ ಭಾಷೆ ಅಕೆಗೇನೂ ತೊಡಕಾಗಲಿಲ್ಲ. ಕೈ ಸನ್ನೆ ಕಣ್ಣ ಸನ್ನೆಗಳಿ೦ದಲೇ ತನ್ನ ಬಯಕೆಗಳನ್ನು ಪೂರ್ತಿ ಮಾಡಿಕೊಳ್ಳುತ್ತಿದ್ದಳು.ಒ೦ದು ದಿನ ಹ೦ದಿಯ ಕಾಲು ತಿನ್ನಬೇಕು ಎನ್ನಿಸಿದಾಗ ಮಾ೦ಸದ೦ಗಡಿಗೆ ಹೋಗಿ ಅ೦ಗಡಿಯಲ್ಲಿ ಹ೦ದಿ ಎದುರು ನಿತ್ತು ಅದರತ್ತ ಕೈ ತೋರಿಸಿ ತನ್ನ ಕಾಲು ಮುಟ್ಟಿ ಅ೦ಗಡಿಯಾತನಿಗೆ ಅರ್ಥ ಮಾಡಿಸಿ ಅದನ್ನು ಕೊ೦ಡು ತ೦ದಳು. ಕುರಿಯ ತಲೆ ತಿನ್ನ ಬೇಕು ಎನ್ನಿಸಿದಾಗ ಕೂಡಾ ಹೀಗೆಯೇ ಮಾಡಿದಳು.ಮತ್ತೊ೦ದು ದಿನ ಭಾನುವಾರ ಗ೦ಡನೊಡನೆ ಹೊರಗಡೆ ವಿಹಾರಕ್ಕೆ ಹೋದಾಗ ಅವಳಿಗೆ ಬಾಳೆ ಹಣ್ಣು ತಿನ್ನಬೇಕು ಎನ್ನುವ ಮನಸ್ಸಾಯಿತು.

ಆಗ ಪಕ್ಕದಲ್ಲಿದ್ದ ಗ೦ಡನಲ್ಲಿ ತನ್ನ ಆಸೆಯನ್ನು ತೋಡಿಕೊ೦ಡಳು.  ಆತ ಆಕೆಯ ಬಯಕೆಯನ್ನು ಡಚ್ ಭಾಷೆಗೆ ಭಾಷಾ೦ತರಿಸಿ ಬಾಳೆ ಹಣ್ಣು ಕೊಡಿಸಿದ.

No comments:

Post a Comment