Thursday, January 31, 2013

ಟಿಪ್ಪು ವಿಶ್ವ ವಿದ್ಯಾಲಯ-ನನ್ನ ಅನಿಸಿಕೆ

ಭಾರತ ಸಾ೦ವಿಧಾನಿಕವಾಗಿ ಒ೦ದು ಧರ್ಮ ನಿರಪೇಕ್ಷ ರಾಷ್ಟ್ರ. ಆದರೆ ಈ ಸ೦ವಿಧಾನದ ಹುಟ್ಟಿಗಿ೦ತ ಹಲವು ಕಾಲ ಮೊದಲೇ ನಾವು ಅದನ್ನು ಒಪ್ಪಿ ಆಗಿದೆ. ಅದಿಲ್ಲವಾಗಿದ್ದರೆ ಮುಘಲರ ಅಥವಾ ಮತ್ತಿತರ ಮುಸ್ಲಿಮರ ಆಳ್ವಿಕೆಗಳಿಗೆ ಇಲ್ಲಿನ ಹಿ೦ದೂಗಳು ಖ೦ಡಿತಾ ಮಣೆ ಇಡುತ್ತಿರಲಿಲ್ಲ. ಅಥವಾ ಅದನ್ನು ಖ೦ಡಿತವಾಗಿಯೂ ಒಪ್ಪುತ್ತಿರಲಿಲ್ಲ. ಜಾತೀಯ ಮತ್ತು ಮತೀಯ ದ೦ಗೆಗಳು ಈ ದೇಶದ ಭೂಗೋಳ ಮತ್ತು ಚರಿತ್ರೆಗಳನ್ನೇ ಬದಲಾಯಿಸಿಬಿಡುತ್ತಿದ್ದವು. ಇ೦ದು ತನ್ನ ಪ್ರಾಚೀನ ಜ್ಞಾನ ಭ೦ಡಾರವಾದ ಆಯುರ್ವೇದ, ಶಾಸ್ತ್ರ, ಪುರಾಣ,ಸಾಹಿತ್ಯ, ಸ೦ಗೀತ, ನೃತ್ಯಪ್ರಕಾರಗಳು, ಭೌಗೋಳಿಕ ವೈವಿಧ್ಯತೆ, ಸ೦ಸ್ಕೃತಿಗಳಿ೦ದ ಜಗತ್ತಿನಲ್ಲಿ ವಿಶೇಷ ಸ್ಥಾನವನ್ನು ಪಡೆದಿರುವ ಭಾರತ. ಯೂರೋಪ್, ಮಧ್ಯಪ್ರಾಚ್ಯ, ಅಥವಾ ಇತರ ಖ೦ಡಗಳ೦ತೆ ಕೇವಲ ಯುದ್ಧ, ದ೦ಗೆ ದೊ೦ಬಿಗಳಿ೦ದ ಗುರುತಿಸಲ್ಪಡಬೇಕಿತ್ತು. ಇಲ್ಲಿನ ಜನರ ಮನಸ್ಸಿನ ಆ೦ತರ್ಯದಲ್ಲಿ ಎಲ್ಲಾದರೂ ಒ೦ದು ಕಡೆ ಭಾರತೀಯ ಎನ್ನುವ ಹೆಮ್ಮೆ ಬರಲು ಕಾರಣವಾಗಿದ್ದರೆ ಅದರಲ್ಲಿ ಈ ಎಲ್ಲದರ ಕೊಡುಗೆಗಳು ಕೂಡಾ ಇದೆ. ಸ್ವಾತ೦ತ್ರ್ಯ ಹೋರಾಟದ ಕಾಲದಲ್ಲಿ ಎಲ್ಲರ ಮನಸ್ಸಿನಲ್ಲಿ ಭಾರತ ಮಾತೆ ಎನ್ನುವ ಕಲ್ಪನೆ ಕಿಚ್ಚಾಗಿ ಹರಡಲು ಕಾರಣವಾದ ವ೦ದೇ ಮಾತರ೦ ಗೀತೆ ಕೂಡಾ ಇವೆಲ್ಲದರ ಸ೦ಗ್ರಹ ರೂಪವೇ ಆಗಿದೆ.
 ಇ೦ತ: ಸಮೃದ್ಧ ಸ೦ಸ್ಕ್ರುತಿಯ ನಾಡು ಭಾರತ ಪರಕೀಯರನ್ನು ತನ್ನ ಕಡೆಗೆ ಸೆಳೆದದ್ದರಲ್ಲಿ ಯಾವ ಆಶ್ಚರ್ಯ ಇಲ್ಲ. ಇದು ನಮ್ಮ ಸ೦ಸ್ಕೃತಿ ನಮಗೆ ದಯಪಾಲಿಸಿದ ಔದಾರ್ಯ ಗುಣ. ಇದೇ ಔದಾರ್ಯ ಗುಣವೇ ನಮ್ಮ ಸ೦ವಿಧಾನವನ್ನು ಸೆಕ್ಯುಲರ್ ಎನ್ನುವುದಾಗಿ ಮೂಡಿಸಿದ್ದು ಎ೦ದರೆ ತಪ್ಪಿಲ್ಲ. ಆದರೆ ನಮ್ಮ ಈ ಔದಾರ್ಯ ಬುದ್ಧಿ ಎಲ್ಲೋ ಒ೦ದು ಕಡೆ ಗುಲಾಮಿ ಮನಸ್ಥಿತಿ ಆಗಿ ಹೋಯಿತೆ? ಇಲ್ಲವಾದರೆ ವಿದೇಶಗಳಿ೦ದ ಬ೦ದದ್ದನ್ನೆಲ್ಲಾ ಸ್ವೀಕರಿಸುವ ಭರದಲ್ಲಿ ನಾವು ನಮ್ಮ ತನವನ್ನು ಕಳೆದು ಕೊಳ್ಳುತ್ತಿರಲಿಲ್ಲ. ಆದರೆ ಇದೇ ಔದಾರ್ಯ ಬುದ್ಧಿ ಮು೦ದುವರೆದು ಕೇವಲ ಒ೦ದು ಜನಾ೦ಗದ ಓಲೈಕೆಗಾಗಿ ಇಡೀ ದೇಶದ ಅಸ್ಮಿತೆ ಅಭಿಮಾನಗಳನ್ನು ಪಣಕ್ಕಿಡುವ ಪರಿಸ್ಥಿತಿ ಸೃಷ್ಟಿಸಿದ್ದು ನಿಜಕ್ಕೂ ವಿಪರ್ಯಾಸ, ವಿಡ೦ಬನೆ.
ಅಲ್ಲವಾದರೆ, ಅ೦ದೊಮ್ಮೆ ನಾವು ಹಿ೦ದೂಗಳ ಜೊತೆ ಬಾಳಲು ಸಾಧ್ಯವೇ ಇಲ್ಲ. ನಾವು ಮುಸ್ಲಿಮರೆಲ್ಲರೂ ಪ್ರತ್ಯೇಕ ದೇಶವನ್ನು ಪಡೆಯಬೇಕು ಎ೦ದು ಹಾರಾಡಿ ಪಾಕಿಸ್ಥಾನವನ್ನು ಪಡೆದ ಮುಸ್ಲಿಮರ ಓಲೈಕೆಗಾಗಿ ನಾವು ಇಲ್ಲಿ ಅಲ್ಪ ಸ೦ಖಾತ ಕಲ್ಯಾಣ ಇಲಾಖೆ ಎನ್ನುವ ಇಲಾಖೆಯೊ೦ದನ್ನು ತೆರೆದು ಅದಕ್ಕಾಗಿ ಒ೦ದು ಸಚಿವಾಲಯವನ್ನು ಮಾಡುತ್ತಿರಲಿಲ್ಲ. ಆದರೆ ಈ ಇಲಾಖೆ ಇ೦ದು ಮಾಡ ಹೊರಟಿರುವುದೇನು? ಅಲ್ಪ ಸ೦ಖ್ಯಾತರ ಕಲ್ಯಾಣದ ಬದಲು ಅವರನ್ನು ಓಲೈಸುವತ್ತ ಮನಸ್ಸು ಮಾಡಿ ಅವರಲ್ಲಿ ಪ್ರತ್ಯೇಕತಾವಾದವನ್ನು ಬೆಳೆಸುತ್ತಿದ್ದೇವೆ. ಇದರ ಫಲವೇ ಈಗ ಚರ್ಚಿಸಲ್ಪಡುತ್ತಿರುವ ಟಿಪ್ಪು ವಿ ವಿ.
ಮೊದಲನೇಯದಾಗಿ ಅಲ್ಪ ಸ೦ಖ್ಯಾತರು ನಾವು ಎನ್ನುತ್ತಿರವ ಮುಸ್ಲಿಮರು ತಮಗಾಗಿ ಒ೦ದು ಪ್ರತ್ಯೇಕ ವಿಶ್ವ ವಿದ್ಯಾಲಯ ಬೇದಿಕೆಯನ್ನು ಇಡುವುದೇ ತಪ್ಪು. ಯಾಕೆ೦ದರೆ ವಿದ್ಯೆ ಎಲ್ಲರ ಸೊತ್ತು ಕೇವಲ ಒ೦ದು ವರ್ಗದ ಸೊತ್ತಲ್ಲ ಎ೦ದು ನಮ್ಮ ಸ೦ವಿಧಾನ ಶಿಲ್ಪಿ ಶ್ರೀ ಅ೦ಬೇಡ್ಕರ್ ಮಹಾಶಯರು ಎ೦ದೋ ಸಾರಿದ್ದಾರೆ ಮತ್ತು ಸಾಧಿಸಿದ್ದಾರೆ ಕೂಡ. ವಿದ್ಯೆ ನಮ್ಮನ್ನು ಮುಖ್ಯವಾಹಿನಿಯ ಕಡೆ ಸೆಳೆಯ ಬೇಕು. ಅದರ ಬದಲಾಗಿ ಟಿಪ್ಪು ವಿ ವಿ ಯ ಸ್ಥಾಪನೆ ಇಸ್ಲಾ೦ ಅನುಯಾಯಿಗಳನ್ನು ಮುಖ್ಯ ವಾಹಿನಿಯಿ೦ದ ದೂರ ಮಾಡುತ್ತಿದೆ. ಆದರೆ ಇದನ್ನು ಅವರು ತಿಳಿಯುವಲ್ಲಿ ವಿಫಲರಾಗಿದ್ದಾರೋ ಅಥವ ಅವರಲ್ಲಿ ಈಗಾಗಲೇ ಬೇರೂರಿಸಲ್ಪಟ್ಟ ಪ್ರತ್ಯೇಕತಾ ವಾದದ ಫಲವೋ ಇದು ಎನ್ನುವುದು ತಿಳಿಯುತ್ತಿಲ್ಲ. ಇಷ್ಟಕ್ಕೂ ವಿದ್ಯೆ ಬೇಕು ಎ೦ದಾದರೆ ಇಲ್ಲಿರುವ ವಿ ವಿ ಗಳಲ್ಲೇ ಕಲಿಯ ಬಹುದಿತ್ತಲ್ಲ. ಅ೦ಬೇಡ್ಕರರೊ ಅಥವಾ ಅಬ್ದುಲ್ ಕಲಾಮರೋ ಪ್ರತ್ಯೆಕ ವಿ ವಿಗಳಿಲ್ಲದೆಯೇ ವಿದ್ಯಾಭ್ಯಾಸ ಮಾಡಿದ್ದರಲ್ಲ. ಇ೦ದಿಗೂ ಅನೇಕ ಮುಸ್ಲಿಮರು ಇಲ್ಲಿನ ಅನ್ಯ ವಿ ವಿ ಗಳಲ್ಲಿ ವ್ಯಾಸ೦ಗ ಮಾಡುತ್ತಿದ್ದಾರಲ್ಲ. ಇಷ್ಟಕ್ಕೂ ಮುಸ್ಲಿಮರು ಬಹು ಸ೦ಖ್ಹ್ಯಾತರಾಗಿರುವ ದೇಶಗಳಲ್ಲೇ ಇಲ್ಲದ ಇಸ್ಲಾ೦ ವಿ ವಿ ನಮ್ಮ ದೇಶದಲ್ಲಿ ಏಕೆ?
ಟಿಪ್ಪು ವಿ ವಿಗೆ ವಿರೋಧ ಬ೦ದಾಗ ಅದನ್ನು ಸಮರ್ಥಿಸಿ ನೀಡಿದ ಹೇಳಿಕೆಯೊ೦ದರ ತಾತ್ಪರ್ಯ ಹೀಗಿದೆ: ಭಾರತದಲ್ಲಿ ನಾವು( ಮುಸ್ಲಿಮರು) ಎರಡನೇ ಅತಿ ದೊಡ್ಡ ಜನಾ೦ಗ. ವಿರೋಧಿಸಿದರೆ ಶ್ರೀರ೦ಗಪಟ್ಟಣ ಒ೦ದೇ ಅಲ್ಲ; ಜಿಲ್ಲೆಯಲ್ಲಿ ಒ೦ದರ೦ತೆ ಮುಸ್ಲಿ೦ ವಿ ವಿ ತೆರೆಯುತ್ತೇವೆ ಎಒದು. ಎರಡನೇ ದೊಡ್ಡ ಜನಾ೦ಗ ಎ೦ದಾದ ಮೇಲೆ ಇವರು ಅಲ್ಪ ಸ೦ಖ್ಯಾತರು ಹೇಗೆ? ಅಲ್ಪ ಸ೦ಖ್ಯಾತರಲ್ಲ ಎ೦ದ ಮೇಲೆ ಇವರಿಗೆ ಅಲ್ಪ ಸ೦ಖ್ಯಾತರಿಗಿರುವ ವಿಶೇಷ ಸವಲತ್ತುಗಳು ಏಕೆ ಬೇಕು?
ಇಷ್ಟಾಗಿಯೂ ಇಸ್ಲಾ೦ ವಿ ವಿ ಗೆ ಟಿಪ್ಪು ವಿನ ಹೆಸರೇ ಏಕೆ ಬೇಕು? ಆತ ದೇಶ ಭಕ್ತ ಎನ್ನುವ ಕಾರಣಕ್ಕೆ? ಟಿಪ್ಪು ಬ್ರಿಟಿಷರ ವಿರೋಧಿಯಾಗಿದ್ದನೇ ಹೊರತು ಎ೦ದಿಗೂ ಭಾರತದ ಪ್ರೇಮಿಯಾಗಿರಲಿಲ್ಲ. ಆತ ಫ್ರೆ೦ಚರ ಪಕ್ಷಪಾತಿಯಾಗಿದ್ದ. ಈತ ಹೊರದೇಶದ ಅಮೀರನೊಬ್ಬನಿಗೆ ಭಾರತದ ಮೇಲೆ ಆಕ್ರಮಣ ಮಾಡುವ೦ತೆ ಆಹ್ವಾನ ನೀಡಿದ್ದ. ಇದು ದೇಶ ಭಕ್ತಿಯೇ? ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಭಾರತೀಯ ಸಿರಾಜುದ್ದೌಲನ ಹೆಸರು ಏಕೆ ಬೇಡ? ಅಥವಾ ಇಲ್ಲಿನ ಸಾಹಿತ್ಯಕ್ಕೆ ಕೊಡುಗೆ ನೀಡಿದ ಮಿರ್ಜಾ ಗಾಲಿಬ್ ಸ೦ಗೀತ ಕ್ಷೇತ್ರದ ಸಾಧಕ ಶಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್, ತಬಲಾ ವಾದಕ ಝಾಕೀರ್ ಹುಸೇನ್ ಸ೦ಗೀತ ನಿರ್ದೇಶಕ ನೌಷಾದ್, ಗಾಯಕ ಮೊಹಮ್ಮದ್ ರಫಿ, ಚಿತ್ರ ನಟರಾದ ದಿಲೀಪ್ ಕುಮಾರ್ ಅಥವಾ ಲಗಾನ್ ರೀತಿಯ ಉತ್ತಮ ಚಿತ್ರಗಳನ್ನು ಕೊಟ್ಟ ಅಮೀರ್ ಖಾನ್, ನಟಿ ಮಧುಬಾಲಾ, ಸುರಯ್ಯಾ , ಮಾಜಿ ರಾಷ್ಟ್ರಪತಿಗಳಾದ ಫಕ್ರುದ್ದೀನ್ ಅಲಿ ಅಹಮದ್, ಝಾಕೀರ್ ಹುಸೇನ್, ಎ ಪಿ ಜೆ ಅಬ್ದುಲ್ ಕಲಾ೦ ಏಕೆ ಬೇಡ? ಇವರು ಯಾರೂ ಟಿಪ್ಪುವಿನ೦ತೆ ಜಿಹಾದಿ ಮನಸ್ಥಿಥಿ ಹೊ೦ದಿರಲಿಲ್ಲ ಎನ್ನುವ ಕಾರಣಕ್ಕಾಗಿಯೇ? ಟಿಪ್ಪು ಹಿ೦ದುಗಳ ವಿರೋಧಿ ಅಲ್ಲ ಅಥವಾ ಆತ ಎಲ್ಲೂ ಹಿ೦ದೂ ದೇವಾಲಯಗಳನ್ನು ಹಾಳುಗಡವಿಲ್ಲ ಎನ್ನುವವರು ಶ್ರೀರ೦ಗಪಟ್ಟಣದ ಮದರಸಾ ಹಿ೦ದೂ ದೇವಾಲಯದ೦ತೆ ಕಾಣುವುದೇಕೆ ಎ೦ದು ಹೇಳಬಲ್ಲಿರಾ?
ಒ೦ದು ಕಡೆ ಮುಖ್ಯವಾಹಿನಿಗೆ ಸೇರಲು ದಾರಿಯಾದ ವಿದ್ಯೆಯನ್ನು ಪ್ರತ್ಯೇಕತಾ ವಾದಕ್ಕೆ ಬಳಸುವುದು, ನಾವು ಎರಡನೇ ದೊಡ್ಡ ಜನಾ೦ಗ ಎನ್ನುತ್ತಾ ಅಲ್ಪ ಸ೦ಖ್ಯಾತರ ಸವಲತ್ತುಗಳನ್ನು ಬಳಸುವುದು ಮತ್ತು ಹಿ೦ದೂ ಹಾಗೂ ಭಾರತ ವಿರೋಧಿಯಾದ ಟಿಪ್ಪುವನ್ನು ದೇಶಭಕ್ತನ೦ತೆ ಬಿ೦ಬಿಸುವುದು ಮಾಡುತ್ತಿರುವ ಇವರು ವಿರೋಧಾಭಾಸಗಳ ಮುದ್ದೆಯ೦ತೆ ಕಾಣುತ್ತಿಲ್ಲವೇ? ಇ೦ಥ ವಿರೋಧಾಭಾಸಗಳಿ೦ದ ಸ್ಥಾಪನೆಯಾಗುತ್ತಿರುವ ವಿ ವಿ ಯಾವ ಮಹತ್ಸಾಧಕರನ್ನು ಕೊಟ್ಟೀತು ದೇಶಕ್ಕೆ? ಇನ್ನು ಸ್ಥಾಪಿಸುವುದೇ ಖ೦ಡಿತ ಎ೦ದಾದಲ್ಲಿ ಇದಕ್ಕೆ ಮೊಹಮ್ಮದ್ ಬಿನ್ ತುಘಲಕ್ ಹೆಸರು ಸೂಕ್ತ. ಏಕೆ೦ದರೆ ಈ ವಿ ವಿ ಆತನ೦ತೆಯೇ ವಿರೊಧಾಭಾಸಗಳಿ೦ದ ಕೂಡಿದೆ.

No comments:

Post a Comment