Wednesday, October 3, 2012

ಬಾಲು 2

ನಮ್ಮ ಬಾಲು ತನ್ನ ಪ್ರಥಮ ಕವಿತೆಯ ಮೊದಲ ಸಾಲು ಬರೆದು ಎರಡನೇ ಸಾಲಿಗೆ ಪ್ರಾಸಕ್ಕಾಗಿ ತ್ರಾಸ ಪಡುತ್ತಿದ್ದ ಹೊತ್ತಲ್ಲೇ ಎದುರುಗಡೆ ಮನೆಯಲ್ಲಿನ ಅಟ್ಟಹಾಸ ಬಾಲುವಿನಲ್ಲಿ ಸೇದೋ ಅಥವಾ ಸನ್ಯಾಸವೋ ಎಂಬ ಜಿಜ್ಞಾಸೆಯನ್ನು ಹುಟ್ಟು ಹಾಕಿದ್ದು ಊರಲ್ಲಿ ಯಾರಿಗೂ ತಿಳಿದಿರಲಿಲ್ಲ. ಆದರೆ ಬಾಲು ಮಾಡಿದ ಒಂದು ಸಣ್ಣ ಅಚಾತುರ್ಯ ಅಲ್ಲ ಪ್ರೇಮ ಭಗ್ನವಾದ ಆ ಘಳಿಗೆಯಲ್ಲಿ ಅವನಿಗೆ ತಿಳಿಯದೆ ಆದ ಒಂದು ಪ್ರಮಾದದಿಂದ ಅದು ಊರಿಗೆಲ್ಲ ಗೊತ್ತಾಗಿ ಹೋಯಿತು. ಹೇಗೆ ಗೊತ್ತೇ? ಬಾಲು ಬರೆದಿಟ್ಟ ಕವಿತೆಯ ಮೊದಲ ಸಾಲಿನ ಕಾಗದ ಅವರ ಅಮ್ಮ ಕಮಲಾಕ್ಷಕ್ಕನಿಗೆ ಸಿಕ್ಕಿ ಬಿಟ್ಟಿತು. ಮನದಲ್ಲಿ ಯಾರಿರ ಬಹುದು ಈ ಅಪ್ಸರೆ ತನ್ನ ಮಗನ ಮನಸ್ಸನ್ನು ಸೂರೆಗೊಂಡ ಸುಂದರಿ ಎಂದು ಒಮ್ಮೆ ಅನ್ನಿಸಿದರೆ ಇನ್ನೊಮ್ಮೆ ಈಕೆ ಅದ್ಯಾವ ಮಾಯಾಂಗನೆ ಇದ್ದಿರಬಹುದು? ತನ್ನ ಮಗ ಮೊದಲಿಗಿಂತ ಗಂಭೀರವಾಗುವಂತೆ ಮಾಡಿದ್ದಾಳಲ್ಲ ಈಕೆ? ಏನಿರಬಹುದು ಈಕೆಯ ಹತ್ತಿರ ಎಂದೆಲ್ಲ ಯೋಚಿಸಿ ಕೊನೆಗೆ ತೀರ್ಮಾನಕ್ಕೆ ಬಂದಿದ್ದು ಏನೆಂದರೆ "ಎಂತಾರು ಆಗ್ಲಿ ಇರದು ಒಂದೇ ಮಾಣಿ. ಅವ ಸುಖವಾಗಿದ್ರೆ ಸಾಕು. ಹುಡುಗಿ ಜೊತೆ ನಾನೇ ಹೊಂದ್ಕ್ಯಂದು ಹೋಗ್ತಿ. ಇವ ಹೆಂಗು ಮನೆಲಿಪ್ಪವ. ಗಣಗಿದ್ದು ಇಲ್ಲಿ. ಬೇಕಾರೆ ಸಾಗರದಾಗೆ  ಯಾವ್ದರು ಮಂದಿ ಸೇರ್ಕಲ್ಲಿ. ಇಲ್ದಿದ್ರೆ ಮೊಬೈಲ್ ಅಂಗಡಿ ಹಾಕ್ಕಲ್ಲಿ ಮಾಣಿ ಸಾಕು." ಎಂದು ತೀರ್ಮಾನಿಸಿ ಮುದ್ದು ಮಗನಲ್ಲಿ ಕೇಳಿದಾಗ ಆಟ ವಿಷಯ ಪೂರ್ತಿ ಬಾಯಿ ಬಿಟ್ಟ. 

ಬೇಸರಗೊಂಡ ಕಮಲಾಕ್ಷಕ್ಕ ಮಗನಿಗೆ ಸಮಾಧಾನ ಮಾಡಿ ಲಕ್ಷ್ಮಕ್ಕನೊಂದಿಗೆ ಮಾತಾಡುವ ನೆವದಲ್ಲಿ ಸಾಂತ್ವನ ಹೇಳಿ ಮಾಣಿ ವಿಚಾರ ಹೇಳುವಾಗ ಅಲ್ಲೇ ತುತ್ತ ಕುಟ್ಟುತ್ತಿದ್ದ ಹಾಲ ನಾಯ್ಕ ಕದ್ದು ಕೇಳಿ ಊರೆಲ್ಲ ಹೇಳಿದ. ಕಮಲಕ್ಕ ಹೇಳಿದ್ದ ಮಾತುಗಳನ್ನು ದೀಪಾ ಕೂಡ ಕೇಳಿಸಿಕೊಂಡು ಬಿಟ್ಟಳು.

ಊರೆಲ್ಲ ದೀಪಳನ್ನು ೮ ಕಾಲಿನ ನಾಯಿ ನೋಡುವಂತೆ ಆಶರ್ಯ- ಪಶ್ಚಾತ್ತಾಪ- ದು:ಖ- ಹಾಸ್ಯಾಸ್ಪದ- ಕನಿಕರಗಳಿಂದ ನೋಡ ತೊಡಗಿತ್ತು. ಆದರೆ ಬಾಲು ಮಾತ್ರ ನಿರ್ಲಿಪ್ತನಂತೆ ಇದ್ದ. ಈಗ ದೀಪಾ ಬಾಲುವನ್ನು ಗಮನಿಸ ತೊಡಗಿದ್ದಾಳೆ.  ಅವನಿಗಾದ ದು:ಖದ ತೀವ್ರತೆ ಅಷ್ಟಿತ್ತ? ಅಥವಾ ಸನ್ಯಾಸದ ಪ್ರಾಕ್ಟೀಸ್ ಮಾಡುತ್ತಿದ್ದನ ಗೊತ್ತಿಲ್ಲ. ಒಂದು ರೀತಿಯ ನಿರ್ಲಿಪ್ತ ಭಾವದಿಂದ ಪುಸ್ತಕದಲ್ಲಿ ಮುಖ ಹುದುಗಿಸಿ ಬಸ್ ಸ್ಟ್ಯಾಂಡ್ ಒಳಗೆ ಕೂರುತ್ತಿದ್ದ. ಯಾರಾದರೂ ತಮಾಷೆ ಮಾಡಿದರೆ ತುಟಿ ಬಿರಿಯುತ್ತಿತ್ತೆ ಹೊರತು ಹಲ್ಲು ಕಾಣದಂತೆ ನಗುತ್ತಿದ್ದ. ಕಾಲೇಜಿನಲ್ಲೂ ಅದೇ ಗಾಂಭೀರ್ಯ ಇಟ್ಟು ಕೊಂಡಿದ್ದ. ಲೈಬ್ರರಿ  ತಲೆ ಹಾಕದಿದ್ದವ ಈಗ ದಿನ ಹೋಗಿ ಅಲ್ಲಿ ಕುಳಿತು ಅನೇಕ ವಿಚಾರಗಳನ್ನು ಓದುತ್ತಿದ್ದ. ತಾನು ಸಾಧಿಸಿ ಇವಳನ್ನು ತುಚ್ಚವಾಗಿ ಕಾಣಬೇಕೆಂದು ಹಠ ತೊಟ್ಟಿದ್ದಾನೆ ಹಾಗಾದರೆ? ಇಲ್ಲ ಹಾಗೇನು ಇಲ್ಲ. ಇವಳು ಪ್ರತಿ ದಿನ ಅವನೆಡೆ ಏನೋ ಒಂದು ಆಕರ್ಷಣೆಯಿಂದ ನೋಡುತ್ತಿದ್ದಾಳೆ . ಇದೆಲ್ಲ ಬಾಳುವಿಗೆ ತಿಳಿಯದಾಯಿತೇ? ಹಾಗಂತ ಬಾಲು ಮಲ್ಲೇನು ಆಗಿಲ್ಲ. ಮೊನ್ನೆ ತಾನೇ ನಾಗ ಭಟ್ಟರ ಮನೆಯಲ್ಲಿ ನಡೆದ ಗಣ ಹೋಮದಲ್ಲಿ ಎಲ್ಲರೊಂದಿಗೆ ಬೆರೆತೆ ಇದ್ದ. ಆದರೆ ತನ್ನ ಗಾಂಭೀರ್ಯ ಬಿಟ್ಟಿರಲಿಲ್ಲ. 

ಇದನ್ನೆಲ್ಲಾ ನೋಡಿದ ದೀಪಾ ಭಾವಿಸಿದಳು. ಬಾಲು ತುಂಬಾ ಒಳ್ಳೆ ಮಾಣಿ. ಮನೆಳು ಅನುಕೂಲ. ಇವ ಅಂಥಾ ದಡ್ಡ ಏನೂ ಅಲ್ಲ. ನೋದಕ್ಕೋ ಚನಾಗಿದ್ದ. ಇವನ್ನೇ ತಾನು ಮಾಡುವೆ ಅಗದಾದ್ರೆ ಆಗ್ಲಕ್ಕು ಎಂದು ಯೋಚಿಸಿದಳು. ಆದರೆ ಇವ ಪ್ರಪೋಸ್ ಮಾಡದೇ ತಾನು ಹೇಗೆ ಮುಂದು ವರಿಲಿ? ಚನಗಿರ್ತಲ್ಲೇ ಎಂದು ಕೊಂಡೆ ಅನೇಕ ದಿನ ಕಳೆದಳು. ಉ೦ ಹು೦ ಬಾಲು ಬಗ್ಗಲಿಲ್ಲ. ಅದಕ್ಕೆ ಸಿನಿಮದಲ್ಲಿ ಮಾಡುವಂತೆ ಪುಸ್ತಕದೊಳಗೆ ಕಾಗದ ಇಡುವ ಉಪಾಯ ಮಾಡಿ ಬಾಳುವಿನ ಮನೆಗೆ ಬಂದು ನೋಟ್ಸ್ ಕೇಳಿದಳು. ಅದಕ್ಕೆ ಬಾಲು " ಮನಿಗೆ ಕೊಡ್ತ್ನಲ್ಲೇ. ಇಲ್ಲೆ  ಕಾಪಿ ಮಾಡ್ಕಂಡು ಹೋಗು " ಎಂದು ಚುಟುಕಾಗಿ ಹೇಳಿ ತೋಟದ ಕಡೆ ಹೋದ. ಅವಳು ತನ್ನ ಭಾಗ್ಯದ ಬಾಗಿಲ ಚಿಲಕವೇ ಸಿಕ್ಕಂತೆ ಸ೦ಭ್ರಮ ಪಟ್ಟಳು. ಆದ್ರೆ ವಿಧಿ ಲೀಲೆ ನೋಟ್ಸ್ ಒಳಗೆ ಇನ್ನೇನು ಚೀಟಿ ಇಡಬೇಕು ಎನ್ನುವಷ್ಟರಲ್ಲಿ ಕಮಲಕ್ಕ ಬಂದು ಮಾತಿಗೆ ಕುಳಿತಳು.

ಇನ್ನೊಂದು ದಿನ ಬಾಲುವನ್ನು ಮಾತಿಗೆಲೆಯಲೋ ಎಂಬಂತೆ " ಎ ನೀನು ಇವತ್ತು ನನ್ನ ಟಿಕೆಟ್ ಮಾಡ್ಸ. ಯನ್ನ ಹತ್ರ ಚಿಲ್ರೆ ಇಲ್ಲೆ " ಅಂದಳು ಬಾಲು ಟಿಕೆಟ್ ಮಾಡಿಸಿ ಸುಮ್ಮನಾಗಿ ಬಿಟ್ಟ. ಛೆ! ಎಂದು ಕೊಡರು ತನ್ನ ಪ್ರಯತ್ನ ಬಿಡುವ ಮನಸ್ಸು ಅವಳಿಗಾಗಳಿಲ್ಲ.

ಹೀಗೆ ಒಂದು ದಿನ ಇಂದು ಬಾಲುವನ್ನು ಹಿಡಿದು ಹೇಳಿಯೇ ಬಿಡುತ್ತೇನೆ ಎಂದು ಹಠ ತೊಟ್ಟು ಬಸ್ಸಿನಲ್ಲಿ ಅವನ್ ಪಕ್ಕವೇ ನಿಂತು ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಮೈ ಮರೆತಿದ್ದಳು. ಅಷ್ಟರಲ್ಲಿ ಟಿಕೆಟ್ ಟಿಕೆಟ್ ಎನ್ನುತ್ತಾ ಬಂದ ಬಸ್ ಕಂಡಕ್ಟರ್ ಅಂತೋನಿ ಅವಳ ಕಣ್ಣಿಗೆ ಸಲ್ಮಾನ್ ಖಾನ್ ಮತ್ತು ಶಃ ರುಖ್ ಖಾನ್ ರ ಮಿಶ್ರಣದಂತೆ ಕಂಡ. ಬಾಲು ಮರೆತೇ ಹೋದ.