Sunday, October 16, 2022

ವರಾಹಾವತಾರ:ಒಂದು ಬೌದ್ಧ ಅಧ್ಯಯನ

 ಬ್ರಾಗಳೆಲ್ಲ ಸೇರಿ ಯಜ್ಞ ಯಾಗ ಮಾಡಿ ಹೊಲಸು ಮಾಡುತ್ತಿದ್ದರು. ಆಗ  ಹೊಲಸು ತೆಗೆಯುವುದಕ್ಕೆ ಮತ್ತು ಬ್ರಾಗಳು ಯಜ್ಞ ಮಾಡುವುದಕ್ಕೆ ಬೇಕಾದ ಮೂಲಿಕೆಗಳನ್ನು ತರಲು ಕಾಡಿಗೆ ಹೋಗದಂತೆ ಮಾಡಲು ಬುದ್ಧನ ಶಿಷ್ಯರಾದ ಕೆಲವು ವಿಜ್ಞಾನಿಗಳು ಜೀನ್ ಮಾಡಿಫಿಕೇಷನ್ ಮುಖಾಂತರ ವರಾಹವನ್ನು ಸೃಷ್ಟಿಸಿದರು. 
ಮೊದಲು ಸೃಷ್ಟಿಸಿದ ವರಾಹ ಕೊರೆ ದಾಡೆಗಳಿಲ್ಲದೆ ಕೇವಲ ಹೊಲಸನ್ನು ತಿನ್ನುತ್ತಿತ್ತು. ಇನ್ನೊಂದು ವರಾಹ ಕೊರೆ ದಾಡೆಗಳನ್ನು ಹೊಂದಿ ಕಾಡನ್ನು ಕಾಯುತ್ತಾ ಗೆಡ್ಡೆ ತಿಂದು ಯಜ್ಞಕ್ಕೆ ತೊಂದರೆ ಮಾಡುತ್ತಿತ್ತು. 
ಕನಕಾಕ್ಷನೆಂಬ ಒಬ್ಬ ಮೂಲನಿವಾಸಿ ಬೌದ್ಧನಿಗೆ ವೈದಿಕರು ಮೋಸದಿಂದ ಸೋಮರಸ ಎನ್ನುವ ಹೆಂಡವನ್ನು ಕುಡಿಸಿ ಮತ್ತನನ್ನಾಗಿ ಮಾಡಿದರು. 
ಆತ ಅಮಲಿನಲ್ಲಿ ಕಾಡಿನಲ್ಲಿ ತಿರುಗುತ್ತಿದ್ದಾಗ ವರಾಹವೊಂದು ಕಿತ್ತಿದ್ದ ಸುವರ್ಣ ಗೆಡ್ಡೆಯನ್ನು ಹಿಡಿದುಕೊಂಡು ಓಡತೊಡಗಿದ. ಸಿಟ್ಟಿಗೆದ್ದ ವರಾಹ ಅವನನ್ನು ದಾಡೆಯಿಂದ ಸಿಗಿದು ಕೊಂಡಿತು.
ಇದೇ ವೈದಿಕರು ಹೇಳುವ ಪುರಾಣದ ಹಿರಣ್ಯಾಕ್ಷನ ಕತೆ. ಆ ಸುವರ್ಣಗಡ್ಡೆಯೇ ವೈದಿಕರ ಭೂದೇವಿ.
ಕಾಲಾಂತರದಲ್ಲಿ ವರಾಹದ ಭಯದಿಂದ ಅದಕ್ಕೆ ವೈದಿಕರೇ ಆಹಾರವನ್ನು ಕೊಡತೊಡಗಿದರು. ಇದರ ಬಗ್ಗೆ ಅವರಲ್ಲಿಯೇ ಭಿನ್ನಾಭಿಪ್ರಾಯ ಬಂದು ವರಾಹವನ್ನು ಅವತಾರ ದೇವರು ಎಂದೆಲ್ಲ ಅಂದರು. 
ಹೀಗೆ ಬೌದ್ಧರ ವೈಜ್ಞಾನಿಕ ಸೃಷ್ಟಿಯನ್ನು ಹೈಜಾಕ್ ಮಾಡಿ ಮೂಲ ನಿವಾಸಿ ಜನರನ್ನು ಶೋಷಿಸಲು ಪುರಾಣವನ್ನು ಸೃಷ್ಟಿಸಿ ಅವತಾರವನ್ನು ಆರೋಪಿಸಲಾಯಿತು. ಮೂಲ ನಿವಾಸಿ ಬೌದ್ಧ ದೊರೆ ಕನಕಾಕ್ಷನೇ ಮುಂದೆ ಹಿರಣ್ಯಾಕ್ಷನೆಂಬ ದೈತ್ಯನೆಂದೂ ಆತ ದುಷ್ಟನೆಂದೂ ಅಪ ಪ್ರಚಾರ ಮಾಡಿದರು ಆರ್ಯ ವೈದಿಕ ಬ್ರಾಗಳು.
...
.
.
....
.
.
.
.
.
.
.
.
.
.
.

..
.
.
.
.
.
.
.

ಮೇಲೆ ಹೇಳಿದ್ದೆಲ್ಲ ಶುದ್ಧ ಸುಳ್ಳು.
ನವಬೌದ್ಧರು ಈ ರೀತಿ ಹೇಳುತ್ತಾರೆ ಅಂತ ತೋರಿಸಿದ್ದು ಅಷ್ಟೇ.😀🙏