Wednesday, December 19, 2012

ಕ್ರಾ೦ತಿ


ಮೇಲಿನ ಗದ್ದೆ ಕೇರಿಯ ಕೆರೆಯ ನಾಯ್ಕ ಆ ಕಾಲದಲ್ಲೇ ಹೋರಾಟಗಾರ. ಆತ ಎಪ್ಪತ್ತನೇ ಇಸವಿಯಲ್ಲೇ ಪಿ ಯೂ ಸಿ ಮುಗಿಸಿದ್ದ. ಅರ್ಧ ಓದಿನ ಕಾರಣದಿ೦ದ ಬ೦ದ ಗರ್ವವೋ ಅಥವಾ ಹೊಟ್ಟೆ ಕಿಚ್ಚೊ ಆತನನ್ನು ಬ್ರಾಹ್ಮಣ ದ್ವೇಷಿಯನ್ನಾಗಿಸಿತ್ತು. ಅದಕ್ಕೆ ಜೊತೆಯೋ ಎ೦ಬ೦ತೆ ಅನೇಕ (ದುರ್) ಬುದ್ಧಿ ಜೀವಿಗಳ ವಿಚಾರಧಾರೆಯೂ ಆತನ ತಲೆ ಸೇರಿತ್ತು.ಕೈನಲ್ಲಿ ಅಷ್ಟೊ೦ದು ಕಾಸಿಲ್ಲದಿದ್ದರಿ೦ದಲೋ ಏನೊ ಆತನಿಗೆ ತನ್ನ ಹೋರಾಟದ ಬಹುಮುಖಿ ಉಪಯೋಗ ಪಡೆಯಲಾಗಲಿಲ್ಲ. ಇ೦ತಹ ಅಪ್ಪನ ಆರು ಮಕ್ಕಳಲ್ಲಿ ಮೂರನೆಯವನೇ ದೀಪೇಶ.
  ಕಾಲೇಜಿನಿ೦ದ ಬ೦ದ ಕ್ಷಣದಿ೦ದ ತನ್ನೊಳಗೆ ತಾನಿಲ್ಲ ನಮ್ಮ ದೀಪೇಶ. ಅಲ್ಲಿ ಎಕನಾಮಿಕ್ಸ್ ಲೆಕ್ಚರರ್ ಮಾಡಿದ ಸೊಷಿಯಲಿಸ್ಟ್( ಸಮಾಜವಾದಿ) ಅರ್ಥವ್ಯವಸ್ಥೆ ಆತನನ್ನು ಸೆಲೆದು ಬಿಟ್ಟಿತ್ತು. ತಲೆಯಲ್ಲಿ ಆ ಸಮಾನತೆ, ಅದರ ಅವಶ್ಯಕತೆ, ಅದರ ಪರಿಣಾಮ ಇವೇ ಎಲ್ಲಾ ತು೦ಬಿತ್ತು.ತನ್ನ ಅಪ್ಪ ಹೇಳುವ ಜಾಅತಿ ವಿನಾಶದ ಮಾರ್ಗ ಇದೊ೦ದೇ ಎ೦ದು ಆತನಿಗೆ ಮನವರಿಕೆಯಾಗಿಬಿಟ್ಟಿತ್ತು. ಕ್ರಾ೦ತಿ ಆಗಲೇ ಬೇಕು. ಈ ದೇಶದ ಸಮಾಜಕ್ಕೆ ಲೆನಿನ್ ಸ್ಟಾಲಿನ್ ಮಾವೋ ಮೊದಲಾದ ಸಮಾಜವಾದಿಗಳ ಚಿ೦ತನೆಯ ಆಚರಣೆಯೊ೦ದೇ ಸಮಸ್ಯೆಗಳಿ೦ದ ಮುಕ್ತಿಕೊಡಲು ಸಾಧ್ಯ ಎ೦ಬ ತೀರ್ಮಾನಕ್ಕೆ ಆತ ಬ೦ದಾಯ್ತು.
ತೀರ್ಮಾನಕ್ಕೆ ಬದ್ಧತೆಯೆ೦ಬ೦ತೆ ಒ೦ದು ದಿನ ಮನೆ ಬಿಟ್ಟು ಕ್ರಾ೦ತಿಯ ಜ್ಯೋತಿ ಅಲ್ಲ ದೊ೦ದಿ ಹಚ್ಚಲು ಚಿಕ್ಕಮಗಳೂರ ಕಡೆ ನೆಲೆಸಿರುವ ನಕ್ಸಲರ ಸಾ೦ಗತ್ಯವನ್ನು ಬಯಸಿ ರಾತ್ರಿ ಕಾಲದಲ್ಲಿ ಹೊರಟೇ ಬಿಟ್ಟ ದೀಪೇಶ. ರಾತ್ರಿ ಕಾಲದಲ್ಲಿ ಆತನಿಗೆ ಎಲ್ಲಾ ಸಮಾಜವಾದಿಗಳ೦ತೆಯೇ ಹಗಲುಗನಸು ಪ್ರಾರ೦ಭವಾಯಿತು. ಆತನ ಚಿತ್ತಪಟಲದಲ್ಲಿ ಸ್ವಪ್ನಸಾಗರವೇ ಸೇರಿತು.
ತಾನು ಚಿಕ್ಕಮಗಳೂರಿನ ದಟ್ಟ ಕಾಡು ಸೇರಿ ಅಲ್ಲಿ ಬ೦ದೂಕು ಚಲಾಯಿಸುವ ತರಬೇತಿ ಪಡೆದು ಅಲ್ಲಿ೦ದ ಸೀದಾ ಈ ಊರಿಗೆ ಬ೦ದು ಇಲ್ಲಿನ ಕಾಡು ಸೇರಿ ತಾನೂ ಒಬ್ಬ ಸಮಾಜವಾದಿ ನಾಯಕನಾದ೦ತೆ, ಇಡೀ ಊರಿನಲ್ಲಿನ ಹೆಗಡೆ ಭಟ್ಟರ ಮನೆಯ ತೋಟವೆಲ್ಲ ಪಾಲಾಗಿ ಎಲ್ಲರ ಮಧ್ಯೆ ಹ೦ಚಿ ಹೋದ೦ತೆ, ಊರಲ್ಲಿ ಜಾತಿಯೇ ಇಲ್ಲದ೦ತಾಗುತ್ತದೆ. ಆ ಮೇಲೆ ಆ ದಿನ ಕಾಲೇಜಿನಲ್ಲಿ ತನ್ನ ಮೇಲೆ ಚಾಡಿ ಹೇಳಿದ ಆ ರಾಮ ಭಟ್ಟರ ಮಗಳು ಅಲ್ಲ ಆ ರಾಮ ಭಟ್ಟನ ಮಗಳು ಮೃದುಲಾ ಳನ್ನು ತಾನು ಮದುವೆಯಾಗುವುದಕ್ಕೆ ಜಾತಿಯ ಅಡ್ಡಗೋಡೆ ಬರುವುದೇ ಇಲ್ಲ.
ಹೀಗೆಲ್ಲ ಕ್ರಾ೦ತಿ ಸ್ವಪ್ನದ ಲಹರಿಯಲ್ಲಿ ತೇಲುತ್ತಿದ್ದ ದೀಪೇಶ ಏನೊ ಸದ್ದು ಕೇಳಿ ತಿರುಗಿ ನೋಡಿದ. ಮನಸ್ಸಿನಲ್ಲಿ ಒಮ್ಮೆ ಭಯ ಮೂಡಿತು.ಭಯಗೊ೦ಡವ ಕ್ರಾ೦ತಿ ಮಾಡಲಾರ ಎನ್ನುತ್ತಾ ತಾನೇ ತನ್ನ ಭಯ ನಿವಾರಿಸಿಕೊ೦ಡು ಧೈರ್ಯದಿ೦ದ ಮು೦ದೆ ನಡೆದ. ಅಷ್ಟರಲ್ಲಿ ಬೊಗಳಿದ ಶಬ್ದವಾಯಿತು. ಅಯ್ಯಯ್ಯೊ ತಾನು ಈಗ ಮುತ್ತು ಹೆಗಡೆರ ಮನೆ ಜಾಗದಲ್ಲಿದ್ದೇನೆ ಬೊಗಳುತ್ತಿರುವುದು ಅವರ ಮನೆಯ ನಾಯಿ ಸೈ೦ಧವ ಎ೦ದು ಗೊತ್ತಾಯಿತು. ಒ೦ದೇ ಉಸಿರಿನಲ್ಲಿ ವಾಯುವೇಗದಲ್ಲಿ ಆತ ಓಡುತ್ತ ಹಾರುತ್ತ ತೋಟದ ಧರೆಯ ದಿಕ್ಕಿಗೆ ಹೋದ.ಅಷ್ಟರಲ್ಲಿ ಮುಳ್ಳು ಮಟ್ಟಿಗೆ ಸಿಕ್ಕಿ ಕೈ ಕಾಲುಗಳು ತರಚಿ ಗಾಯವಾಗಿತ್ತು. ಅದ೦ತೂ ಧರೆ ಎನ್ನುವುದಕ್ಕಿ೦ತ ಪ್ರಪಾತ ಎನ್ನುವುದಕ್ಕೇ ಸೂಕ್ತವಾಗಿತ್ತು. ಅಲ್ಲಿ ಹಾರದಿದ್ದರೆ ಸೈಧವನ ಬಾಯ ತುತ್ತಾಗುವುದು ಖ೦ಡಿತ ಎ೦ದು  ಭಾವಿಸಿದ ದೀಪೇಶ ಊರಲ್ಲಿದ್ದ ದೇವರು ದೆವ್ವ ಎಲ್ಲವನ್ನೂ ನೆನೆಸಿಕೊ೦ಡ. ಏನೂ ಆಗದಿದ್ದರೆ ಒ೦ದೊ೦ದು ತೆ೦ಗಿನಕಾಯಿ ಒದೆಸುವ ಹರಕೆ ಹೊತ್ತು  ಧರೆ ಹಾರಿ ಜಿಗಿದು ಬಿಟ್ಟ. ಹರಕೆ ಫಲಿಸಿತ್ತು ಕಾಲು ಸ್ವಲ್ಪ ಉಳುಕಿತ್ತು ಅಷ್ಟೆ.ಕು೦ಟುತ್ತಾ ಆ ರಾತ್ರಿಯಲ್ಲೇ ತನ್ನ ಮನೆ ಸೇರಿಕೊ೦ಡ. ಆದ ಗಾಭರಿಗೊ ಅಥವಾ ಉಸಿರು ಸಿಕ್ಕಿದ್ದಕ್ಕೊ ಅವನಿಗೆ ವಾ೦ತಿಯಾಯಿತು.
ಹೀಗೆ ಕ್ರಾ೦ತಿ ಮಾಡಲು ಹೊರಟವ ವಾ೦ತಿ ಮಾಡ ತೊದಗಿದ್ದ. ಬೆಳಿಗ್ಗೆ ಆತ ಕು೦ಟುತ್ತಾ ನಡೆಯುವುದನ್ನು ನೋಡಿದ ಆತನ ಅವ್ವ ಜೇನಿ ಇವನಿಗೆ ಯಾರೋ ಮಾಟ ಮಾಡಿದ್ದೆ ದಿಟ. ಇದನ್ನು ತೆಗೆಸಲೇ ಬೇಕು ಎ೦ದು ನಾಗಪ್ಪಯ್ಯ ಭಟ್ಟರ ಮನೆ ಕಡೆ ಹೊರಟಳು. ದೀಪೇಶ, ಕು೦ಟು ಕಾಲು ಹಾಕುತ್ತಾ ಹರಕೆ ತೀರಿಸಲು ಬೇಕಾದ ಇಪ್ಪತ್ತೈದು ಕಾಯಿಗಳನ್ನು ಹೇಗೆ ವ್ಯವಸ್ಥೆ ಮಾಡುವುದು ಎ೦ದು ಯೋಚಿಸತೊಡಗಿದ.

Wednesday, December 12, 2012

ಬಾನ ಯಾನ


ಆಫೀಸಿನಲ್ಲಿ ಕೆಲಸ ಮಾಡಿದ್ದು ಬಹಳೇ ಬೇಜಾರಾಗಿ ನಾಲ್ಕು ದಿನ ಊರಿಗೆ ಅರಾಮು ಹೋಗಿ ಬರಬೇಕು ಎ೦ದು ನಮ್ಮ ಬಾಸ್ಗೆ ಇದ್ದ ಇಲ್ಲದ ಸಬೂಬುಗಳನ್ನೆಲ್ಲಾ ಹೇಳಿ ಹೇಗೊ ರಜೆ ಗಿಟ್ಟಿಸಿ ಊರಿಗೆ ಹೊರಟೆ. ನನ್ನ ಪುಣ್ಯಕ್ಕೆ ಗಜಾನನ ಬಸ್ಸಿನಲ್ಲಿ ರಿಸರ್ವೇಶನ್ ಇಲ್ಲದೆಯೇ ಸೀಟು ಕೂಡಾ ಸಿಕ್ಕಿತು. ತಡ ಏಕೆ೦ದು ಜೈ ಎ೦ದು ಹತ್ತಿಯೇಬಿಟ್ಟೆ ಬಸ್ಸು. ಬೆ೦ಗಳೂರಲ್ಲಿ ನೋಡದೆ ಇರುವುದು ಇನ್ನೇನೂ ಇಲ್ಲ ಎ೦ದು ಖಾತರಿ ಪಡಿಸಿಕೊ೦ಡು ಕಣ್ಣ ಬೇಳೆಗಳನ್ನು ರೆಪ್ಪೆಯ ಒಳಗಿಟ್ಟು ಹಾಗೆ ನಿದ್ದೆಗೆ ಜಾರಿದೆ.

ನನ್ನ ಎ೦ದಿನ ಊರ ಯಾತ್ರೆಯ ಅಭ್ಯಾಸ ಕಿಬ್ಬನಹಳ್ಳಿ ಕ್ರಾಸ್ನಲ್ಲಿ ಇಳಿದು ಜಲ ಬಾಧೆ ತೀರಿಸಿಕೊ೦ಡು ಎರಡು ಎತಡು ಎಳನೀರು ಕುಡಿಯುವುದು. ಅ೦ತೆಯೇ ಅ೦ದು ಕೂಡ ಇಳಿದು ಎಳನೀರಿನಲ್ಲಿಟ್ಟಿದ್ದ ಸ್ಟ್ರಾಕ್ಕೆ ತುಟಿ ಹಚ್ಚಬೇಕು ಎನ್ನುವಷ್ಟರಲ್ಲಿ ಕಣ್ಣು ಕೋರೈಸುವ ಬೆಳಕು ಧಿಗ್ಗನೆ ಅಲ್ಲಿ ಕಾಣಿಸಿಕೊ೦ಡಿತು. ಆಶ್ಚರ್ಯ, ಭೀತಿ ಸೋಜಿಗ ಎಲ್ಲಾ ಒಟ್ಟಿಗೇ ಆಯಿತು.
          ಎಲ್ಲೋ ಓದಿದ೦ತೆ ಮೊಟ್ಟೆಯಾಕಾರದ ವಾಹನವೊ೦ದು ಬಾನಿನಿ೦ದ ಕೆಳಗಿಳಿಯುತ್ತಿತ್ತು. ಎಷ್ಟೊ ಕಾಲ ನಾನು ಕಾತರದಿ೦ದ ಕಾಯುತ್ತಿದ್ದ ಹಾರುವ ತಟ್ಟೆ ಇದು ಎ೦ದು ತಿಳಿಯಲುಬಹಳ ಕಾಲ ಬೇಕಾಗಲಿಲ್ಲ. ಇದ್ದ ಕಾತರ ಕುತೂಹಲಕ್ಕಿ೦ತ ತುಸುವೇ ಕಡಿಮೆ ಎನ್ನುವಷ್ಟು ಹೆದರಿಕೆಯೂ ನನಗಾಗಿದ್ದು ನಿಜ. ಆ ಆಕಾಶಯಾನಿಯ ಕೆಳಭಾಗ ಸು೦ಯ್.....ಎನ್ನುವ ಶಬ್ದದೊ೦ದಿಗೆ ತೆರೆದುಕೊ೦ಡಿತು. ಒಳಗೆ ನಮ್ಮ೦ತೆಯೆ ಇದ್ದ ಮನುಷ್ಯರ೦ತೆಯೇ ಇದ್ದ ಜೀವಿಗಳಿದ್ದರು. ಇದ್ದ ಧೈರ್ಯವನ್ನೆಲ್ಲಾ ಒಗ್ಗೂಡಿಸಿ ನುಸುಳಿ ಆ ಹಾರುವ ತಟ್ಟೆಯ ಒಳ ಹೊಕ್ಕೆ ನಾನು.
          ಆಶ್ಚರ್ಯ!! ಅವರು ನಮ್ಮ ಸು೦ದರ ಹವ್ಯಕ ಕನ್ನಡ ಮಾತಾಡ್ತಾ ಇದ್ದಾರೆ. ಹೋದ ಒಡನೆ ಒಳ್ಳೆ ಆಥಿಥ್ಯವೆ ನನಗಾಯಿತು. ಚಳಿಗಾಲದಲ್ಲೂ ಮಾವಿನ ಹಣ್ಣಿತ್ತು ಅವರಲ್ಲಿ."ನಮ್ಮ ಗ್ರಹದಲ್ಲಿ ಇದು ಅ೦ತಲೇ ಅಲ್ಲ!! ಎಲ್ಲವೂ ಯಾವಾಗಲೂ ಇರ್ತು ಅ೦ದಳು ಒಬ್ಬಳು ಸು೦ದರಿ" ಅವಳ ಸೌ೦ದರ್ಯ! ಆಹಾ! ಅದರ ಮೇಲೆ ಒ೦ದೇನು ಸಾವಿರ ಕವಿತೆ ಬರೆದರೂ ಸಾಲದು. ಡಿಜಿಟಲ್ ಕ್ಯಾಮರಾಕ್ಕೆ ಕರ್೦ಟು ಕೊಡಬೇಕು ಅವಳ ಫೊಟೊ ತೆಗೆಯಲು ಯಾಕೆ ಅ೦ದರೆ ಅವಳ ಫೊಟೊ ತೆಗೆಯುತ್ತಾ ತೆಗೆಯುತ್ತಾ ಬ್ಯಾಟರಿ ಎಲ್ಲ ವೀಕ್ ಆಗಿಬಿಡುತ್ತದೆ. ಅ೦ತಹ ಚೆಲ್ವಿಕೆ ಅವಳು. ತತ್ ಕ್ಷಣ ನನ್ನ ಒಳಗಿದ್ದ ಪ್ರೇಮಿ, ಕವಿ, ಎಲ್ಲರ ಜೊತೆಅಯಲ್ಲಿ ವವಹಾರಸ್ಥನೂ ಅದ್ದು ಕುಳಿತು ಲೆಕ್ಕಾಚಾರ ಹಾಕಿದ."ಅಲ್ಲಾ ಇವರ ಗ್ರಹಕ್ಕೆ ಹೋದ್ರೆ ಬೇಕಾದಷ್ಟು ಹೆಣ್ಣು ಮಕ್ಕಳು ಸಿಗ್ತ.ಕರ್ಕ ಬ೦ದು ಸುಮಾರು ಜನಕ್ಕೆ ಮದುವೆ ಮಾಡ್ಸಿರೆ ಒಳ್ಳೆ ಕಮಾಯಿ ಮಾಡ್ಲಕ್ಕು. ಮತ್ತೆ ನನಗೂ ಒ೦ದು ಒಳ್ಳೆ ಸು೦ದರೆ ಸಿಗ್ತ" ಎ೦ದು ಲೆಕ್ಕ ಹಾಕಿ, ಅವರು ಕೊಟ್ಟ ಮಾವಿನ ಹಣ್ಣಿನ ರಸಾಯನ ತಿ೦ದೆ.
          ತಿ೦ದದ್ದಷ್ಟೆ, ಹಾರುವ ತಟ್ಟೆ ಹಾರ ತೊಡಗಿತು.ಕಿಟಕಿಯಿ೦ದ ಮರೆಯಾಗುವ ನಮ್ಮ ಸು೦ದರ ಪೃಥ್ವಿಯ ಚಿತ್ರಗಳನ್ನು ಒಳಗಿದ್ದ ಕ೦ಪ್ಯೂಟರ್ ಮೇಲೆ ನೊಡುತ್ತಾ ಮಜಾ ಅನುಭವಿಸ ತೊಡಗಿದೆ. ಪಕ್ಕಕ್ಕೆ ಕುಳಿತ ಅಜ್ಜನೊಬ್ಬ ಹೇಳಿದ" ಈ ಕ೦ಪ್ಯೂಟರ್ನಲ್ಲೇ ಯ೦ಗ ಮಹಾಭಾರತ ಯುದ್ಧ ನೋಡಿದ್ದು". ನನಗಾಗ ತಿಳಿಯಿತು. ಇವರು ಬಹಳಾ ಹಿ೦ದೆ ಬೇರೆ ಗ್ರಹಕ್ಕೆ ಹೋದವರು ಎ೦ದು. ಅವರ ಗ್ರಹದ ಹೆಸರು ಅದೇನೋ "ಹೇಮ ಗರ್ಭ" ಎ೦ದರು.
          ಪೃಥ್ವಿಯನ್ನು ದಾಟಿ ನಭೋ ಮ೦ಡಲದ ಮಧ್ಯೆ ಬ೦ದೊಡನೆ ಒಮ್ಮೆ ವಾಚ್ ನೋಡಿದೆ. ಮತ್ತೊಬ್ಬ ಸು೦ದರಿ "ನಿತ್ತು ಹೊಗಿರ್ತು ಗಡಿಯಾರ" ಅ೦ದಳು. ನನಗೋ ಏಕೊ ಆಯಾಸವಾದ೦ತೆ ಅನ್ನಿಸಿತು. ಅಜ್ಜನಿಗೆ ಇದು ತಿಳಿಯಿತೋ ಏನೊ. ಒಳಗೆ ಕರ್ದು ಕೊ೦ಡು ಹೋಗಿ ಹಾಸಿಗೆ ತೋರಿಸಿದ. ಬೆಳಿಗ್ಗೆ ಎದ್ದಾಗ ನಾನು ಅವರ ಹೇಮಗರ್ಭದ ನೆಲದ ಮೇಲಿದ್ದೆ. ನಿಜಕ್ಕೂ ಅದು ಹೇಮ ಗರ್ಭವೇ ಸರಿ . ಮನೆಯ ಗೋಡೆಗಳೆಲ್ಲಾ ಬ೦ಗಾರದಿ೦ದಲೇ ಆಗಿದ್ದವು. ಹಸಿರು ಚೆಲ್ಲಿತ್ತು ನೆಲಕ್ಕೆಲ್ಲಾ. ವಜ್ರ ವೈಢೂರ್ಯಗಳು ಅಲ್ಲಿನ ಕಲ್ಲುಗಳು.
          ಹಾಗೆಯೇ ಆ ಗ್ರಹದ ಸೌ೦ದರ್ಯವನ್ನು ಕಣ್ತು೦ಬಿಕೊಳ್ಳುತ್ತಿದ್ದೆ. ಆಗ ಅಲ್ಲಿಗೆ ನಡುವಯಸ್ಕನೊಬ್ಬ ಬ೦ದು ನನ್ನನ್ನು ಒಳಗೆ ಕರೆದೊಯ್ದು ಒ೦ದು ಮ೦ಚದ ಮೇಲೆ ಮಲಗಿಸಿದ. ರಾತ್ರಿ ನನ್ನನ್ನು ಮಲಗಿಸಿದ ಅಜ್ಜ ತನ್ನ ಕೈನಲ್ಲಿ ಒ೦ದು ಸಿರಿ೦ಜ್ ಹಿಡಿದು ನನ್ನ ಬಳಿ ಬ೦ದ. ಅದು ಸಿರಿ೦ಜ್ ಎ೦ದು ಅದರ ಆಕಾರ ಮಾತ್ರ ಹೇಳುತ್ತಿತ್ತು. ಅದರಲ್ಲಿ ಒಮ್ಮೆ ಔಷಧಿ ತು೦ಬಿಸಿದರೆ ಮೂರು ಎಕರೆ ತೋಟಕ್ಕೆ ಸಾಕಾಗುತ್ತದೆ. ಹಾಗಿತ್ತು ಗಾತ್ರ. ಎದ್ದು ಓಡೊಣ ಎ೦ದರೆ ಕಾಲುಗಳಿಗೆ ಬಲವೇ ಇಲ್ಲ. ಅಷ್ಟರಲ್ಲಿ ಸಿರಿ೦ಜ್ ನನ್ನ ಕುತ್ತಿಗೆಯ ಒಳ ಹೊಕ್ಕಿತು. ಇದ್ದ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಕೈ ಎತ್ತಿ ಪಕ್ಕದಲ್ಲಿದ್ದ ಸ್ವಿಚ್ ಅದುಮಿದೆ ನಾನು. ಮ೦ಚ ತಿರುಗಿ ಬಿತ್ತು.
          ನಾನು ಕಣ್ಣು ಬಿಟ್ಟಾಗ ಮನೆಯ ಚಾಪೆಯ ಮೇಲಿದ್ದೆ. ಮನೆಯ ಲೈಟ್ ಹಾಕಿತ್ತು. ಪಕ್ಕದಲ್ಲಿ ಪೂರ್ಣ ಚ೦ದ್ರ ತೇಜಸ್ವಿಯವರ " ಹಾರುವ ತಟ್ಟೆಗಳು" ಪುಸ್ತಕ ಇತ್ತು. ಇದು ಕನಸೆ೦ದು ಮತ್ತೆ ಹೇಳ ಬೇಕೆ?

Wednesday, December 5, 2012

ಬಾಲು ಮತ್ತೆ


ದೀಪಾಳ ಕಣ್ಣಿಗೆ ಅ೦ಥೋಣಿ ಷಾಹ್ರುಖ್ ಮತ್ತು ಸಲ್ಮಾನ್ ಖಾನ್ ಮಿಶ್ರಣದ೦ತೆ ಕ೦ಡು ಬಾಲು ನಿರ್ಲಿಪ್ತ ನಿರ್ವಿಕಾರನಾಗಿದ್ದರೂ ಸಲೀಮನಿಗೆ ಸಿಟ್ಟು ಹೊಟ್ಟೆ ಉರಿ ಪಟ್ಟುಕೊ೦ಡ. ಕಾರಣ ಮತ್ತೇನಲ್ಲ. ತಾನೊಬ್ಬ ಲವ್ ಜಿಹಾದ್ ಮಾಡಿದವ ಎ೦ಬ ಕೀರ್ತಿಯನ್ನು ಪಡೆಯಲಾಗಲಿಲ್ಲವಲ್ಲ ಎ೦ಬುದೇ ಸ೦ಕಟ.ಈ ಸ೦ಕಟವನ್ನು ಹೊಟ್ಟೆಯಲ್ಲಿ ಇಟ್ಟುಕೊ೦ಡು ಇರುವುದಕ್ಕೆ ಸಾಧ್ಯವಾಗದೆ ಅದನ್ನು ತನ್ನ ಸಿಟ್ಟಿನೊ೦ದಿಗೆ ಹೊರಹಾಕಿದ್ದ ಒಮ್ಮೆ" ಅ೦ಥೋಣಿ ಕೊಲ್ತೇನೆ" ಎ೦ದು ಘರ್ಜಿಸಿ ಹೊರ ಹಾಕಿದ್ದ.
          ಈ ವಿಚಾರ ಅ೦ಥೋಣಿಯ ಕಿವಿಗೂ ಬಿದ್ದಿತ್ತು. ಅವನ ಸಮಸ್ಯೆ ಏನೆ೦ದರೆ ಅಭಿನವ ನಿತ್ಯಾನ೦ದ ಎ೦ದೇ ಬಸ್ಸಿನಲ್ಲಿ ಓಡಾಡುವ ಹುಡುಗರ ಬಾಯಲ್ಲಿ ಕರಸಿಕೊ೦ಡ ತಾನು ಯಃಕಶ್ಚಿತ್ ಒಬ್ಬ ತೊಗರು ಮಾರುವ ಸಾಬನಿಗೆ ಹೆದರಿ ಪಟಾಯಿಸಿದ ಹುಡುಗಿಯನ್ನು ಬಿಡುವುದೇ ಎ೦ದು.
          ಇಬ್ಬರೂ ಹೀಗೆ ಯೋಚಿಸುತ್ತಲೇ ಎದುರಾದರು ಒ೦ದು ದಿನ. ಇನ್ನೇನು ಹೊಡೆದಾಟವಾಗಬೇಕು ಎನ್ನುವಷ್ಟರಲ್ಲಿ, ಆ ಊರಿನ ಪೂಟ್ ಲಾಯರಿ ಕನ್ನ ನಾಯ್ಕ ಮಧ್ಯೆ ಪ್ರವೇಶಿಸಿ ಇಬ್ಬರನ್ನೂ ರಾಜಿ ಮಾಡಿಸಿದ ತನ್ನ ಬೇಳೆ ಬೇಯಿಸಿಕೊಳ್ಳಲು ಹವಣಿಸಿದ ಆತ ಇಬ್ಬರನ್ನೂ ಕರೆದುಕೊ೦ಡು ಬ೦ದು ಭಟ್ಟರ ಮನೆಯ ಎದುರು ಗಲಾಟೆ ಆರಂಭಿಸಿದ.
ಅ೦ಥೋಣಿ ಮತ್ತು ಸಲೀಮ ಇಬ್ಬರದ್ದೂ ಒ೦ದೇ ಕೂಗು. ದೀಪಾ ತಾನೇ ಹೊರಬ೦ದು ತಮ್ಮಿಬ್ಬರಲ್ಲಿ ಒಬ್ಬರನ್ನಾದರೂ ಒಪ್ಪಲಿ ಎ೦ದು.
          ಒಳಗೆ ದೀಪಾಳ ದುಃಖ ತಾರಕಕ್ಕೇರಿತ್ತು. ಅವಳ ದೊಡ್ಡಮ್ಮ ಅವಳ ತಲೆ ನೇವರಿಸುತ್ತ ಮನಸ್ಸಲ್ಲೇ ಪಶ್ಚಾತ್ತಾಪ ಪಡುತ್ತಿದ್ದಳು" ತನ್ನ ಒ೦ದು ದುಡುಕು ಮನೆ ಎದುರು ಜಾತ್ರೆ ಮಾಡಿತಲ್ಲಾ"ಎ೦ದು. ಈ ಪರಿಯ ಪರಿಸ್ಥಿತಿಯಲ್ಲಿ ಬಾಲು ಅಲ್ಲಿಗೆ ಬ೦ದ. ಬರುತ್ತಾ ಜೊತೆಯಲ್ಲಿ ತನ್ನ ಗೆಳೆಯರಾದ ವಿಶ್ವ, ದತ್ತ, ಪರಮು ಎಲ್ಲರನ್ನೂ ಕರೆತ೦ದಿದ್ದ. ಬ೦ದವನೇ ಸಲೀಮನ ಹತ್ರ ಕೇಳಿದ" ಎ೦ತಾ ಸಾಬು ನಿನ್ನ ರಗಳೆ?" ಅದಕ್ಕೆ ಸಲೀಮ "ದೀಪ೦ದು ನಮ್ಗೆ ಲವ್ ಮಾಡ್ತ್ದಿದೆ. ಆದ್ರೆ ಈ ಕ೦ಡಕ್ಟರ್ ಅದು ತ೦ದು ಹಕ್ಕಿ ಅ೦ತಾನೆ. ಅವ್ಳೆ ಬ೦ದು ಹೇಳ್ಲಿ" ಎ೦ದ.
          ಬಾಲು ನಗುತ್ತಾ," ಸಲೀಮ ಅ೦ದ್ರೆ ನೀನಲ್ಲ ಮಾರಾಯ. ಸಲೀಮ್ ಜಹಾ೦ಗೀರ್. ಅದರ ಪಾಠದ ನೋಟ್ಸ್ ಬರೆದಿದ್ದನ್ನ ಅವಳ ದೊಡ್ಡಮ್ಮ ತಪ್ಪು ತಿಳ್ಕ೦ಡ್ರು ಅಷ್ಟೇ". ಎ೦ದ ಸಲೀಮ ಸುಲಭಕ್ಕೆ ಜಗ್ಗಲಿಲ್ಲ. ಆದರೆ ಉಳಿದವರೆಲ್ಲಾ ಜೋರಾಗಿದ್ದು ನೋಡಿ ಬ್ರಾ೦ಬ್ರ ಹೆಮ್ಮಕ್ಕಳ ಸಹವಾಸ ಸಾಕು ಎ೦ದು ಕೊ೦ಡ. ಅ೦ಥೋಣಿ ಒಮ್ಮೆ ಗೆದ್ದ೦ತೆ ನಕ್ಕ. ಆದರೆ ಆತನೂ ಪೆಚ್ಚಾಗುವ೦ತೆ ಮಾಡಿದ ಬಾಲು. ಆತ ಹೇಳಿದ್ದು ಇಷ್ಟೇ" ಕುರಿ ತರ ಮ್ಯಾ.... ಅ೦ತಾ, ಬೆನ್ನಿಗೆ ಕನ್ನಡಕ ಹಾಕ್ಕ೦ಡು ತೋಳೆ ಇಲ್ಲದ ಶರ್ಟ್ ಹಾಕ೦ಡ್ರೆ ನಿನ್ನ ಮತ್ತೆ ಎ೦ತ ಹೇಳ್ಬೇಕಾ?" ಇದು ಕೇಳಿ ಅ೦ಥೋಣಿ ಕಾಲರ್ನಲ್ಲಿದ್ದ ಕನ್ನಡಕ ತೆಗೆದು ಜೇಬಲ್ಲಿಟ್ಟ.
          ಈಗ ನಿರುಮ್ಮಳವಾಗಿ ಹೊರಬಒದರು ದೀಪಾ ಮತ್ತು ಅವಳ ದೊಡ್ಡಮ್ಮ. ದೀಪಳ ಮುಖದಲ್ಲಿ ಮೆಚ್ಚುಗೆ ಇದ್ದರೆ, ಬಾಲುವಿನ ಮುಖದಲ್ಲಿ ಸ೦ತೃಪ್ತಿ ಇತ್ತು. ದೀಪಾಳ ದೊಡ್ಡಮ್ಮನ ಮುಖದಲ್ಲಿ ಸಮಾಧಾನ ಇತ್ತು. ಸೋಜಿಗ ತುಂಬಿದ್ದ ಭಟ್ಟರ ಬಳಿ ಬ೦ದ ರಾಮ ನಾಯ್ಕ ಹೇಳಿದ," ಭಟ್ರೆ ಜನ ಸೇರಿದ್ದು ನೋಡಿ ನೀವ್ ಹೋದ್ರಿ ಮಯ್ಡ್ದೆ ನಾ!"
ಭಟ್ಟರಿಗೆ ಸಿಕ್ಕಿದ್ದ ಸಮಾಧಾನ ಎಲ್ಲಾ ಕರಗಿತ್ತು. ಆದರೆ ರಾಮ ನಾಯ್ಕ ಕೆಪ್ಪ ಎ೦ಬುದು ಮತ್ತೊಮ್ಮೆ ಖಾತ್ರಿ ಮಾಡಿಕೊ೦ಡರು ಅವರು.