Wednesday, October 25, 2017

ಸರ್ ಮಿರ್ಜಾ ಇಸ್ಮಾಯಿಲ್

ಸರ್ ಮಿರ್ಜಾ ಇಸ್ಮಾಯಿಲ್- ಈ ಹೆಸರು ಕೆಲವರಿಗೆ ಚಿರ ಪರಿಚಿತ ಹೆಸರು ಎನ್ನಿಸಿದರೆ ಇನ್ನು ಕೆಲವರಿಗೆ ಯಾವುದೋ ಒಂದು ಮುಸ್ಲಿಮನ ಹೆಸರು ಎನ್ನಿಸಬಹುದು. ಮುಸಲ್ಮಾನರ ವೋಟ್ ತನ್ನ ಪಿತ್ರಾರ್ಜಿತ ಆಸ್ತಿ ಎಂದುಕೊಂಡಿರುವ ಪಕ್ಷಗಳ ಸದಸ್ಯರಿಗೆ ಒಂದು ಮತ ಮಾತ್ರವಾಗಿ ಗಣನೆಗೆ ಬಂದಿರಬಹುದು.  ಇವರು ಮೈಸೂರಿನ ದಿವಾನ್ ಆಗಿದ್ದರು. ಮೈಸೂರಿನ ಬೃಂದಾವನ ಗಾರ್ಡನ್ ನಿರ್ಮಾತೃ ಇವರೇ.
ಇವರ ಅಜ್ಜ ಅಲಿ ಅಸ್ಗರ್ ಪರ್ಷಿಯಾ ದೇಶದಿಂದ ವ್ಯಾಪಾರಾಕ್ಕೆಂದು ಭಾರತಕ್ಕೆ ಬಂದರು.ಇಲ್ಲಿನ ವ್ಯಾಪಾರದಿಂದ ಶ್ರೀಮಂತರೂ ಆದರು. ಮೊಮ್ಮಗ ಇಸ್ಮಾಯಿಲ್, ಈ ಕಾರಣದಿಂದ ಒಳ್ಳೆಯ ವಿದ್ಯಾಭ್ಯಾಸವನ್ನೇ ಪಡೆದು ಮೈಸೂರು ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ನಂತರ ಮಹಾರಾಜರಿಗೆ ಹುಜೂರ್ ಕಾರ್ಯದರ್ಶಿ ಆದರು. ಅಲ್ಲಿ ಶ್ರೀ ವಿಶ್ವೇಶ್ವರಯ್ಯನವರ ಮಾರ್ಗದರ್ಶನ ಇವರಿಗೆ ಸಿಕ್ಕಿತು. ಮುಂದೆ ವಿಶ್ವೇಶ್ವರಯ್ಯನವರೆ ಇವರನ್ನು ಮುಂದಿನ ದಿವಾನರಾಗಿ ಸೂಚಿಸಿದರು.
ಎಂ ವಿಯವರ ಆಯ್ಕೆ ತಪ್ಪಾಗವುದಕ್ಕೆ ಸಾಧ್ಯವೇ ಇಲ್ಲವಲ್ಲ. ಇಸ್ಮಾಯಿಲ್ ನಿಜಕ್ಕೂ ತಾಮು ಆ ಜಾಗಕ್ಕೆ ಸೂಕ್ತ ಮತ್ತು ಅರ್ಹ ವ್ಯಕ್ತಿ ಎನ್ನುವುದನ್ನು ಸಾಧಿಸಿ ತೋರಿಸಿದರು. ಸರ್ ಸಿ ವಿ ರಾಮನ್ ಅವರಿಗೆ ಸಂಶೋಧನಾ ಸಂಸ್ಥೆ ಸ್ಥಾಪಿಸಲು ಬೆಂಗಳೂರಲ್ಲಿ ಜಾಗ ಕೊಟ್ಟರು. ಸಿ ವಿ ರಾಮನ್ ಕೂಡಾ ಅವರನ್ನು ಬಹಳ ಗೌರವದಿಂದ ಕಾಣುತ್ತಿದ್ದರು. “ಆಪತ್ತೆ ಇರಲಿ, ಅಪ್ಯಾಯಮಾನ ಪರಿಸ್ಥಿತಿಯೇ ಇರಲಿ, ಮಿರ್ಜಾ ನನಗೊಬ್ಬ ಒಳ್ಳೆಯ ಸ್ನೇಹಿತ” ಎಂದಿದ್ದರು ರಾಮನ್.
ಇವರ ಸಾಧನೆಗಳನ್ನು ಹೇಳುವುದಾದರ್ ಹಲವು. ಬೆಂಗಳೂರಿನ ಪುರ ಭವನ, ಗಾಜಿನ ಕಾರ್ಖಾನೆ, ಮೈಸೂರ್ ಲ್ಯಾ0ಪ್ಸ್, ಪಿಂಗಾಣಿ ಕಾರ್ಖಾನೆ, ವೈಶ್ಯ ಬ್ಯಾಂಕ್ ಸ್ಥಾಪನೆಗೆ ಸಹಾಯ, ಬೃಂದಾವನ ಗಾರ್ಡನ್, ಮೈಸೂರ್ ಕಾಫಿ ಕ್ಯೂರಿಂಗ್ ಇತ್ಯಾದಿಗಳು.
ನಾಲ್ಮಡಿ ಕೃಷ್ಣರಾಜ ಒಡೆಯರ್ ನಿಧನಾನಂತರ ಕೆಲ ಕಾಲ ದಿವಾನರಾಗಿ ಮುಂದುವರೆದು ನಂತರ ರಾಜಾಸ್ಥಾನದ ಸಂಸ್ಥಾನವೊಂದರ ದಿವಾನರಾದರು. ನಂತರ ಹೈದರಾಬಾದ್ ಸಂಸ್ಥಾನದಲ್ಲಿ ದಿವಾನರಾದರು.
ಭಾರತ ಸ್ವತಂತ್ರವಾಗುವ ಆ ಕಾಲದಲ್ಲಿ, ಜಿನ್ನಾ ಇವರನ್ನು ಪಾಕಿಸ್ಥಾನ ಕ್ಕೆ ಬರುವುದಕ್ಕೆ ಕೇಳಿಕೊಂಡಿದ್ದಾರು.  ದೇಶವಿಭಜನೆಯನ್ನ ವಿರೋಧಿಸಿದ್ದ ಇಸ್ಮಾಯಿಲ್ ಇದಕ್ಕೆ ಒಪ್ಪಲಿಲ್ಲ. ಅನೇಕ ಸಾರಿ ಸಾರ್ವಜನಿಕವಾಗಿ ದೇಶ ವಿಭಜನೆಯನ್ನವರು ವಿರೋಧಿಸಿದ್ದರು. ಕಾಶ್ಮೀರದ ಮುಖ್ಯಮಂತ್ರಿಯಾಗುವ ಅವಕಾಶ ಕೂಡ ತಿರಸ್ಕರಿಸಿದ್ದರು ಇವರು. ಇವರ ಮುಂದೆ ಆಕಸ್ಮಿಕವಾಗಿ ಒಡಗಿದ್ದ, ಸಾಂವಿಧಾನಿಕವಾಗಿ ಸಲ್ಲದ ಪ್ರಧಾನಿ ಪಟ್ಟವನ್ನು ಯಾವುದೇ ಅರ್ಹತೆ ಇಲ್ಲದ ಒಬ್ಬರು ತ್ಯಜಿಸಿದ್ದು ತ್ಯಾಗವೇ?
ಹೈದರಾಬಾದಿನ ನಿಜಾಮನನ್ನು ಭಾರತಕ್ಕೆ ಸೇರುವಂತೆ ಒಪ್ಪಿಸಿದ್ದರು ಕೂಡ. ನಿಜಾಮ ತನ್ನ ನೀಚ ಬುದ್ಧಿ ತೋರುತ್ತಿದ್ದಾಗ ಜಾಗದ ಮೇಲೆ ಆಸೆ ಜಾತಿ ಮೇಲೆ ಪ್ರೀತಿ ಇದ್ದ ಕಾಂಗ್ರೆಸ್ ಅಧಿನಾಯಕರಿಗೆ ಸಂಧಿ ವಿಗ್ರಹಿಯಾಗಿದ್ದರು ಮಿರ್ಜಾ. ಆದರೆ, ನಿಜಾಮ ಗಾಂಧಿಯವರ ಸಾವಿನ ನಂತರ ತನ್ನ ವರಸೆ ಬದಲಿಸಿದ. ಮನನೊಂದ ಮಿರ್ಜಾ ರಾಜೀನಾಮೆ ಕೊಟ್ಟರು. ಸಾಲದ್ದಕ್ಕೆ ನಿಜಾಮ ಮಿರ್ಜಾರನ್ನು ಸಾರ್ವಜನಿಕವಾಗಿ ನಿಂದಿಸಿದ.
ಇದೆಲ್ಲಾ ಆದಮೇಲೆ ಮಿರ್ಜಾ ತಮ್ಮ ಸ್ವಂತ ಊರಾದ ಬೆಂಗಳೂರಿಗೆ ಬಂದು ಕೊನೆಯ ದಿನಗಳನ್ನು ಕಳೆದರು.

ಇಷ್ಟೆಲ್ಲಾ ಮಿರ್ಜಾ ಅವರ ಸಾಧನೆಗೆ ಕಡಿಮೆಯೇ ಬರೆದಂತಾಗಿದೆ. ನಿನ್ನೆ ಅಂದರೆ ಆಕ್ಟೊಬರ್ 24 ಮಿರ್ಜಾ ಅವರ ಹುಟ್ಟಿದ ದಿನ. ಅವರ ಸ್ಮರಣೆಗೆ ಏನನ್ನೂ ಮಾಡಲಿಲ್ಲ ಕರ್ನಾಟಕದ ಕಾಂಗ್ರೆಸ್ ಸರಕಾರ. ಅವರೇನು ಅಲ್ಪಸಂಖ್ಯಾತರಲ್ಲವೇ? ಬಿ ಜೆ ಪಿ ಯವರು ಉಳಿದ ಹೊತ್ತಲ್ಲಿ ದೇಶ ವಿಭಜನೆಯ ಬಗ್ಗೆ ಕಿಲೋಮೀಟರು ಗಟ್ಟಲೆ ಮಾತಾಡುತ್ತಾರೆ. ಇವರ ನೆನಪಾಗಲಿಲ್ಲ. ಪಠ್ಯ ಪುಸ್ತಕದಲ್ಲಿ ಬ್ರಾಹ್ಮಣರನ್ನು ತೆಗಳುವುದೇ ಕಾರ್ಯವಾಗಿಸಿಕೊಂಡು, ಏನೇಮೋ ಕಾರಣ ಕೊಟ್ಟು ಪ್ರಶಸ್ತಿ ವಾಪಸ್ ಕೊಡುವ ಬು ಜೀ ಗಳ ಬಾಯಿ ಸುಮ್ಮನಿದ್ದಿದ್ದ್ಯಾಕೆ ಗೊತ್ತಿಲ್ಲ. ತಾನು ಪ್ರಶಸ್ಟಿ ಸ್ವೀಕರಿಸಲು ಯಾರಿಗೋ ಅಪ್ಪ ಮಗ ಮೊಮ್ಮಗ ಎಲ್ಲಾ ಆಗುವ ನಟರೂ ಸುಮ್ಮನಿದ್ದಿದ್ದು ಯಾಕೋ ಗೊತ್ತಿಲ್ಲ. ಬಹುಷಃ ಸ್ತ್ರೀಲೋಲ ಶಾಹ್ ಜಹಾನ್ ಕಟ್ಟಿಸಿದ ಸಮಾಧಿ ಉಳಿಸಿಕೊಳ್ಳಲಿಕ್ಕೆ ಹೋಗಿದ್ದರು ಅನ್ನಿಸುತ್ತದೆ. ಸಿಂಹನಂತೆ ಪ್ರತಾಪ ತೋರಿಸುವ ಸಂಸದರು, ಅನಂತ ಹಿಂದೂ ವಾದಿ ಕೇಂದ್ರ ಮಂತ್ರಿಗಳೂ ಬಾಯಿ ಮುಚ್ಚಿಕೊಂಡಿದ್ದರು.

ಈಗ ಹೇಳಿ, ಭಾರತದ ಮೇಲೆ ಆಕ್ರಮಣ ಮಾಡಲಿಕ್ಕೆ ತುರ್ಕಿಯ ಖಲೀಫನಿಗೆ ಪತ್ರ ಬರೆದ ಟಿಪ್ಪು ಜಯಂತಿ ಮಾಡಬೇಕೋ ಅಥವಾ ಮಿರ್ಜಾ ಅವರ ಜಯಂತಿ ಆಚರಿಸಬೇಕೋ?
ಮಿರ್ಜಾರನ್ನು ಮೂಲೆಗುಂಪಾಗಿಸಿದ ರಾಜಕೀಯ ಪಕ್ಷಗಳಿಗೆ, ಅದರ ಸದಸ್ಯರಿಗೆ, ಟಿಪ್ಪು ಎಂದರೆ ತಮ್ಮಜ್ಜನೋ ಎಂಬಂತೆ ವರ್ತಿಸುವ ಬು.ಜೀ ಗಳಿಗೆ ಧಿಕ್ಕಾರವಿರಲಿ.

No comments:

Post a Comment