Thursday, September 14, 2017

ಅಂತ್ಯ ಸಂಸ್ಕಾರ

ಆ ಊರಿನಲ್ಲಿದ್ದ ಇಬ್ರಾಹಿಂ ಸಾಬು ಮಾರುತಿ ಎನ್ನುವ ಮಂಗವೊಂದನ್ನು ಸಾಕಿ ಅದನ್ನು ಆಡಿಸಿ ತನ್ನ ಮತ್ತು ಆ ಮಂಗನ ಹೊಟ್ಟೆ ಹೊರೆದುಕೊಂಡು, ದುಡ್ಡು ಸಾಕಾಗದಿದ್ದರೆ ತನ್ನ ಕೆಟ್ಟ ಬಾಯಿಯಿಂದ ಬ್ರಾಹ್ಮಣರನ್ನು ಮತ್ತು ಹಿಂದುಗಳನ್ನು ಹೆದರಿಸಿ ಬೆದರಿಸಿ ಅಷ್ಟೋ ಇಷ್ಟೊ ಗಿಟ್ಟಿಸಿಕೊಂಡು ತಾನೊಂದು ಸ್ವಲ್ಪ ಕುಡಿದು ತನ ಕೋತಿಗೊಂದಿಷ್ಟು ಕುಡಿಸಿ ತಾನೂ ಮಲಗಿ ತನ್ನ ಕೋತಿಯನ್ನು ಮಲಗಿಸುತ್ತಿದ್ದ.

ಆ ಊರಿನ ಎಷ್ಟೋ ಸಹಜ ಘಟನೆಗಳಂತೆ ಇದೂ ಸಹಜವಾಗಿಯೇ ಇತ್ತು. ಹೀಗಿದ್ದಾಗ ಒಮ್ಮೆಲೇ ಸಾಬಿಯ ಹೃದಯ ಸ್ಥ0ಬಿಸಿ ಉಸಿರು ನಿತ್ತು ಹೋಯಿತು. ಮಂಗ ಮಾತ್ರ ಅವನ ಸಂಗಾತಿಯಾಗಿತ್ತು. ಕೊನೆಹೆ ಅವನ ಜಾತಿಯವರು ಯಾರೂ ಆ ಊರಿನಲ್ಲಿಲ್ಲದ್ದರಿಂದ ಅವನ ಎಣ್ಣೆ ಅಂಗಡಿಯ ಸ್ನೇಹಿತರೆಲ್ಲಾ ಸೇರಿ ಹೆಣ ಹುಗಿದಾಯಿತು.

ಪಾಪ ಆತನ ಕೋತಿ. ಹೊಟ್ಟೆಗೂ ಇಲ್ಲದೆ ಒದ್ದಾಡುವಂತಾಯಿತು. ಊರಿನಲ್ಲಿದ್ದ ಕೆಲವು ಜನ "ಅಯ್ಯೋ ಪಾಪ"!! ಎನ್ನುತ್ತಾ ತಿನ್ನುವುದಕ್ಕೆ ಚೂರೋ ಪಾರೋ ಕೊಟ್ಟು ಕಳಿಸುತ್ತಿದ್ದರು. ಆದರೆ ಎಣ್ಣೆ ಬೇಕಲ್ಲ. ಅದಕ್ಕೆ ಅದೇ ಎಣ್ಣೆ ಅಂಗಡಿಯ ಸ್ನೇಹಿತರ ಮೊರೆ ಹೋಯಿತು. ಅವರೂ ಕೋತಿಯಿಂದ ಅಲ್ಪ ಸ್ವಲ್ಪ ರಂಜನೆ ಪಡೆದು ಎಣ್ಣೆ ಕುಡಿಸುತ್ತಿದ್ದರು. ಆದರೆ ಎಷ್ಟು ದಿನ ಅಂತ ಪುಕ್ಕಟೆ ಕುಡಿಯಲು ಸಾಧ್ಯ. ಒಬ್ಬ ಆ ಕೋತಿಯನ್ನು ಉಪಯೋಗಿಸಿ ಮನೆಕಳ್ಳತನ ಸುಲಭ ಮಾಡಿಕೊಂಡ.

ಒಂದು ದಿನ ಊರಲ್ಲೇ ಮನೆ ಕಟ್ಟಿಸಿ, ದೇಶ ಸೇವೆಗೆಂದು ಸೇನೆಗೆ ಸೇರಿದ್ದ ಸೂರ್ಯನ ತೋಟದ ಮನೆಯಲ್ಲಿ ಕಳ್ಳತನ ಮಾಡುವುದಕ್ಕೆ ಅದನ್ನು ಬಳಸಿದ. ಆದರೆ ಮನೆ ಕಾಯುವ ಆಳು ಅದಕ್ಕೆ ಗುಂಡಿಟ್ಟ. ಏಟು ತಿಂದ ಕೋತಿ ತೋಟದ ಹೊರಗೆ ಬಂದು ಸತ್ತಿತು.

ಎಣ್ಣೆ ಅಂಗಡಿಯ ಗೆಳೆಯರೆಲ್ಲಾ ಒಟ್ಟಾಗಿ ಮನೆ ಆಳು ತಮ್ಮ ಮೇಲಿನ ಹೊಟ್ಟೆ ಕಿಚ್ಚಿಗೇ ಕೋತಿಯನ್ನು ಕೊಂದಿದ್ದು ಎಂದು ಹುಯಿಲೆಬ್ಬಿಸಿ ಕೂಗತೊಡಗಿದರು. ಅಷ್ಟರಲ್ಲಿ ಯಾರೋ "ಮೊದಲು ಆ ಕೋತಿಯ ಹೆಣಕ್ಕೆ ಒಂದು ವ್ಯವಸ್ಥೆ ಮಾಡ್ರೋ ವಾಸನೆ, ರೋಗ ಬಂದ್ರೆ ಕಷ್ಟ" ಅಂದರು.

ಗೆಳೆಯರೆಲ್ಲಾ ಸೇರಿ "ಕೋತಿ ಬಹಳ ಒಳ್ಳೆಯ ಕೋತಿ. ಲೋಕದ ಕೋತಿಗಳೆಲ್ಲ ಹನುಮನ ಅಂಶ ಸಂಭೂತರು. ಅದಕ್ಕೆ ಸರಿಯಾದ ಸಂಸ್ಕಾರ ಆಗಬೇಕು" ಎಂದು ಊರೆಲ್ಲಾ ಓಡಾಡಿ ಚಂದಾ ಎತ್ತಿ ಅದರಲ್ಲಿ ಸ್ವಲ್ಪ ಖರ್ಚು ಮಾಡಿ ಹೆಣ ಹುಗಿದರು. ಉಳಿದ ಹಣದಲ್ಲಿ ಎಂದಿನಂತೆ ಚೈನಿ ಮಾಡಿದರು.

ಆದರೆ ಅವರಂದುಕೊಂಡಿದ್ದು ಆಗಲಿಲ್ಲ. ಮಿಲಿಟರಿ ಮನೆ ಕಳ್ಳತನ ಮಾಡಲಿಲ್ಲ ಎಂದು ಅವರ ಅಹಂಕಾರ ಚುಚ್ಚತೊಡಗಿತು. ತತ್ ಕ್ಷಣ ಅವರ ಸಿಟ್ಟು ಗುಂಡಿಟ್ಟ ಆಳಿನ ಕಡೆ ಹರಿಯಿತು. ಆತ ಹನುಮನ ಅಂಶವಿದ್ದ ಕೋತಿಯನ್ನು ಕೊಂದುಹಾಕಿದ್ದಾನೆ ಆತ ಊರು ಬಿಡಬೇಕು ಎಂದು ಗಲಾಟೆ ಎಬ್ಬಿಸಿದರು. ಆಳು ಮತ್ತು ಆತನ ಒಡೆಯ ಇಬ್ಬರೂ ಗಟ್ಟಿ ಮನಸ್ಕರಾಗಿದ್ದರಿಂದ ಏನೂ ಆಗಲಿಲ್ಲ. ಊರ ಜನ ಕೂಡಾ ಆ ಕೋತಿಯ ಹೊಸ ಮಾಲೀಕನನ್ನು ಪ್ರಶ್ನಿಸಲಿಲ್ಲ.

ವಿ.ಸೂ. ಸದ್ಯ ನಡೆದ ಅಥವಾ ನಡೆಯುತ್ತಿರುವ ಅಥವಾ ಮುಂದಾಗುವ ಯಾವ ಕೊಲೆ ಪ್ರತಿಭಟನೆ ವನ್ಯಜೀವಿ ಹಿಂಸೆ ಇತ್ಯಾದಿಗಳಿಗೂ ಈ ಕಥೆಗೂ ಏನೂ ಸಂಬಂಧವಿಲ್ಲ.

No comments:

Post a Comment