Thursday, July 26, 2018

ಅಸ್ಗಾಡ್ರಿಯಾ..ವಿಮಾನ...ವಿಯಾನ

ಅಸ್ಗಾಡ್ರಿಯಾ.. ಹೆಸರು ಕೇಳಿದರೆ ಕುಂದಾಪುರದ ಕಡೆ "ತೆಕಂಡ್ರಿಯಾ" "ಈಗ ಬಂದ್ರ್ಯಾ" ಎಂದೆಲ್ಲ ತೆಗೆಯುವ ಉದ್ಗಾರ ನೆನಪಾಗುತ್ತದೆ ನನಗೆ. ಉಮ್ದಾಪುರ ಭಾಷೆಯ ಸೊಗಸು ಅದು ಬಿಡಿ.ಆದರೆ ಈ ಹೆಸರ ಪಕ್ಕದಲ್ಲಿಯೇ ಇದ್ದ ಹೆಸರು ಅಂತರಿಕ್ಷದಲ್ಲೊಂದು ದೇಶ ಎನ್ನುವ ವಾಕ್ಯ ಕುತೂಹಾಕ್ಕೆಡೆಮಾಡಿಕೊಟ್ಟಿತು. ಲೇಖನ ಪೂರ್ತಿಯಾಗಿ ಓದಿದೆ. ಅಮೆರಿಕಾದ ಸಾಹಸಿ ಮತ್ತು ಉತ್ಸಾಹಿ ಜನರ ಗುಂಪೊಂದು ಅಂತರಿಕ್ಷದಲ್ಲಿ ವಾಸಾನುಕೂಲದ ಸ್ಪೇಸ್ ಷಟಲ್ ಒಂದನ್ನು ನಿರ್ಮಿಸಲಿದೆಯಂತೆ. ಅವರೇ ಹೇಳಿಕೊಳ್ಳುವ ಪ್ರಕಾರ ಆ ಸ್ಪೇಸ್ ಷಟಲ್ ಓಮ್ದು ದೇಶವಾಗಿರಲಿದೆಯಂತೆ. ಅಲ್ಲಿಗೆ ವಾಸಿಸಲು ಬರುವವರಿಗೆ ಒಂದು ನಿಬಂಧನೆ ಇದೆಯಂತೆ. ಅದೇನೆಂದರೆ ಅಲ್ಲಿ ರಿಲಿಜಿಯನ್ ಇಲ್ಲವಂತೆ. ಒಂದು ರೀತಿಯಲ್ಲಿ ಒಳ್ಳೆಯದು. ರಿಲಿಜಿಯನ್ ಇಲ್ಲದಲ್ಲಿ, ಅನವಶ್ಯಕ ಕಟ್ಟುಪಾಡುಗಳಿಲ್ಲದಲ್ಲಿ ಧರ್ಮ ತಂತಾನೇ ಬರುತ್ತದೆ ಬಿಡಿ. ನಾನೇನು ಒಬ್ಬ ನಾಗರೀಕತೆಯ ವಿಷ್ಲೇಶಕನಲ್ಲ. ಹಾಗಾಗಿ ಅಸ್ಗಾಡ್ರಿಯಾ ದೇಶದ ಮುಂದಿನ ಭವಿತವ್ಯದ ಬಗ್ಗೆ ನಾನು ಚಿಂತಿಸುವುದಿಲ್ಲ. ಹೊಸತನ, ಹೊಸ ಸಾಹಸಗಳು ಎಂದಿದ್ದರೂ ಚೆನ್ನವೇ ಸರಿ.

ಅಸ್ಗಾಡ್ರಿಯಾದ ಎನ್ನುವ ಹೆಸರಿನ ಬಗ್ಗೆ ಮತ್ತಷ್ಟು ಹುಡುಕಾಟ ನಡೆಸಿದೆ. ನನಗಿದ್ದ ಕುತೂಹಲ ಅದರ ಹೆಸರಿನ ಮೂಲದ ಬಗ್ಗೆ. ಕುತೂಹಲವನ್ನು ಕೇವಲ ಕುತೂಹಲವಾಗಿಡುವುದು ಬಹಳ ಕಷ್ಟ. ಅದನ್ನು ಪರಿಹರಿಸಿಕೊಳ್ಳಲು ಗೂಗಲ್ ಸಹಾಯ ಪಡೆಯುವುದು ಇನ್ನೂ ಕಷ್ಟ. ಆದರೆ ತಲೆಯೊಳಗೆ ಹೊಕ್ಕ ಹುಳ ಬಿಡಬೇಕಲ್ಲ... ಕಂಬಳಿ ಹುಳದಂತೆ ಕಾಲು ಬಾಲ ಹಚ್ಚಿಕೊಂಡು ಬೆಳೆಯತೊಡಗಿತು. ಅಸ್ಗಾಡ್ರಿಯಾ ಎಂದರೆ ಮಲೇರಿಯಾ, ಪೈಲೇರಿಯಾ, ಎನ್ನುವಂಥಾ ರೋಗಕ್ಕೂ ಹೋಲಿಕೆ ಇದೆ. ಯಾರೂ ತಮ್ಮ ಉದ್ದೇಶಿತ ಕನಸಿನ ಜಾಗಕ್ಕೆ ರೋಗದ ಹೆಸರಿಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಅಸ್ಗಾಡ್ರಿಯಾ ಎಂದರೆ ರೋಗವೊಂದಲ್ಲವೇ ಅಲ್ಲ ಎನ್ನುವುಸು ಖಾತ್ರಿಯಾಯಿತು.

ಅಸ್ಗಾಡ್ರಿಯಾ ಎಂದರೆ ಏನು ಎನ್ನುವುದು ನನ್ನ ಹುಡುಕಾಟದ ಉದ್ದೇಶವಾಗಿರಲಿಲ್ಲ. ಬದಲಾಗಿ, ಅದು ಏನೆಂದು ತಿಳಿಯುವ ಕುತೂಹಲವನ್ನು ತಣಿಸುವುದೇ ಆಗಿತ್ತು. ಹುಡುಕಾಟ ಮುಂದುವರೆಯಿತು. ಅಸ್ಗಾಡ್ರಿಯಾ ಎಂದರೆ ಯೂರೋಪ್ ದೇಶಗಳಲ್ಲಿ ಪ್ರಚಲಿತವಿರುವ 'ನಾರ್ಡಿಕ್ ಪುರಾಣ'ದಲ್ಲಿ ಬರುವ ಒಂದು ಸ್ಥಳವಂತೆ. ನಮ್ಮದೇ ಪುರಾಣಗಳಲ್ಲಿ ಮಾಡಬೇಕಾದ ಅಧ್ಯಯನ ಸಾವಿರದಷ್ಟಿರುವಾಗ ಮತ್ತೆ ಈ ನಾರ್ಡಿಕ್ ಪುರಾಣದ ಸಹವಾಸ ಬೇಡ ಎಂದು ಸುಮ್ಮನಾದೆ.

ನಮ್ಮ ಇತಿಹಾಸವಾದ ಮಹಾಭಾರತ ಗ್ರಂಥದಲ್ಲಿ ಬರುವ ವಸುರಾಜ, ತಾನೊಂದು ವಿಮಾನದಲ್ಲೇ ವಾಸಿಸುತ್ತಿದ್ದ. ಅಂತೆಯೇ ಯಯಾತಿ ಕೂಡ. ದೇವಯಾನಿ ಶರ್ಮಿಷ್ಠೆಯರ ಹಸಿ ಮೈನ ಅಪ್ಪುಗೆಯಲ್ಲಿ ಬಿಸಿ ಕಡಿಮೆಯಾದಾಗ, ಮಗನ ಯೌವನವನ್ನೇ ಪಡೆದು ವಿಶ್ವಾಚಿ ಎನ್ನುವ ಅಪ್ಸರೆಯೊಂದಿಗೆ ವಿಮಾನವೊಂದನ್ನೇರಿ ಇರುತ್ತಿದ್ದನಂತೆ. ಇನ್ನು ಕೃಷ್ಣ ರಾಜಸೂಯಕ್ಕೆಂದು ತೆರಳಿದ ಸಂದರ್ಭದಲ್ಲಿ ದ್ವಾರಕೆಯಮೇಲೆ ಧಾಳಿ ಮಾಡಿದ ಶಾಲ್ವರಾಜ ತನ್ನ ಸೌಭವಿಮಾನದಲ್ಲೇ ಕುಳಿತು ಸಂಚರಿಸುತ್ತಿದ್ದ. ಅವರ ವಿಮಾನದ ವರ್ಣನೆಗಳನ್ನು ನೋಡಿದರೆ ಅತ್ಯದ್ಭುತ-ಸುಂದರ-ಮನನನೀಯ-ಸ್ಮರಣೀಯ.

ಮರೆತು ಹೋಗಿದ್ದ ಈ ಅಸ್ಗಾಡ್ರಿಯಾದ ವಿಚ್ಗಾರ ನೆನಪಾಗಿದ್ದು, ಮೊನ್ನೆ ಮೊನ್ನೆ ಶಾಲ್ವ ವಧಾ ಪ್ರಕರಣವನ್ನು ಓದುತ್ತಿದ್ದಾಗ ಅದರಲ್ಲಿ ಬಂದ ಸೌಭ ವಿಮಾನವನ್ನು ಓದಿದಾಗ. ದೇವನಹಳ್ಳಿಯ ವಿಮಾನ ಶಾಸ್ತ್ರಿಗಳು ಎಂದೇ ಖ್ಯಾತರಾಗಿರುವ ಸುಬ್ಬಾ ಶಾಸ್ತ್ರಿಗಳು ವಿಮಾನ ಸೂತ್ರ ಎನ್ನುವ ಒಂದು ಗ್ರಂಥವನ್ನೇ ಬರೆದಿದ್ದಾರಂತೆ. ರಾಮಾಯಣದಲ್ಲೂ ಇದರ ಉಲ್ಲೇಖವಿದೆ.ಪುಷ್ಪಕ ವಿಮಾನದ ಬಗೆಗೆ ಯಾರಿಗೆ ತಿಳಿದಿಲ್ಲ?! ಗಂಧರ್ವರು, ಋಷಿ-ಮುನಿಗಳು, ಪಿತೃದೇವತೆಗಳು ವಿಮಾನವನ್ನು ಬಳಸುವುದು ಎಂದೇ ಉಲ್ಲೇಖವಿದೆ. ಶ್ರಾದ್ಧಗಳಲ್ಲಿ, ಪಿತೃಗಳಿಗೆ ಪಿಂಡವಿಡುವಾಗ ವಿಮಾನದ ಚಿತ್ರ ಬಿಡಿಸುತ್ತಾರೆ. ಇತ್ತೀಚೆಗಷ್ಟೇ ರೈಟ್ ಸಹೋದರರಿಗಿಂತ ಮೊದಲು ಭಾರತೀಯನೊಬ್ಬ ವಿಮಾನ ಹಾರಿಸಿದ್ದ ಎನ್ನುವ ವಿಷಯ ಬಹಳ ಚರ್ಚೆಗೂ ಒಳಗಾಗಿತ್ತು.

ನನಗನಿಸುವುದು, ಅಂದಿನ ಕಾಲದಲ್ಲಿ ಏರೋಕ್ರಾಫ಼್ಟ್ ಅಥವಾ ಏರೋನಾಟಿಕಲ್ ಇಂಜಿನಿಯರಿಂಗ್ ವಿದ್ಯೆಯೂ ಇತ್ತು. ಅರಗಿನ ಮನೆಯಿಂದ ಪಾರಾದ ಪಾಂಡವರು ಕಾಡಿನಲ್ಲಿದ್ದಾಗ ಚಿತ್ರರಥ ಎನ್ನುವ ಗಂಧರ್ವ ಏ ವಿದ್ಯೆಯನ್ನು ಅರ್ಜುನನಿಗೆ ಉಪದೇಶಿಸುತ್ತಾನೆ.

ಆದರೆ, ಅಸ್ಗಾಡ್ರಿಯಾ ಒಂದು ಸ್ಪೇಸ್ ಶಿಪ್ ಅಥವಾ ಸ್ಪೇಸ್ ಷಟಲ್. ಅಂದಿನ ಕಾಲದಲ್ಲಿ ಸ್ಪೇಶ್ ಷಟಲ್ ಮತ್ತು ವಿಮಾನ ಎರಡನ್ನೂ ಒಂದೇ ಹೆಸರಿನಿಂದ ಕರೆಯುತ್ತಿದ್ದರೇನೋ. ಯಾಕೆಂದರೆ ವಿಯಾನ ಎನ್ನುವ ಒಂದು ಪ್ರಯೋಗವೂ ಇದೆ. ಆದರೆ ವಿಯಾನ ಎನ್ನುವ ಶಬ್ದ ಪ್ರಯೋಗ ಪುರಾಣಗಳಲ್ಲಿ ಇಲ್ಲಿಯ ತನಕ ನನ್ನ ಕಣ್ಣಿಗೆ ಬಿದ್ದಿಲ್ಲ. ಆದರೆ ಇರುವುದು ಖಡಾಖಂಡಿತ. ನಾನು ಬಹಳ ಅಧ್ಯಯನ ಮಾಡಿಲ್ಲ. ಆದರೆ ಮಾಡಿದವರು ಹೇಳಿದ್ದನ್ನು ಕೇಳಿದ್ದೇನೆ. ಈ ವಿಯಾನ ಎನ್ನುವ ಶಬ್ದವನ್ನು ನಾನು ಕೇಳಿದ್ದು ವಾಗ್ದೇವಿಯ ವರಪುತ್ರ ಯಕ್ಷಗಾನ ಅರ್ಥಗಾರಿಕೆಯ ವಾಚಸ್ಪತಿ- ಶ್ರೀ ವಾಸುದೇವ ಸಾಮಗರ ಬಾಯಿಯಲ್ಲಿ. ಅವರು ವಿಮಾನ ವಿಯಾನ ಶಬ್ದಗಳ ವ್ಯತ್ಯಾಸವನ್ನು ಬಹಳ ಸೊಗಸಾಗಿ ವರ್ಣಿಸಿದ್ದರು, ತ್ರಿಶಂಕುವನ್ನು ಸ್ವರ್ಗಕ್ಕೆ ಕಳುಹಿಸಲು ಸಿದ್ಧನಾದ ವಿಶ್ವಾಮಿತ್ರನ ಪಾತ್ರದಲ್ಲಿ- "ವಿ-ಮಾನ ಎಂದರೆ ವಿಶಿಷ್ಠವಾದ ಮಾನವುಳ್ಳದ್ದು. ಜನ ಹೆಚ್ಚಿದಂತೆಲ್ಲ ಅದರ ಧಾರಣಾ ಸಾಮರ್ಥ್ಯ, ಉದ್ದ ಅಗಲಗಳೂ ಹೆಚ್ಚುತ್ತವೆ. ಮಾನ ಅಂದರೆ ಇದೇ ಅಲ್ಲವೇ? ವಿ-ಯಾನ ಎಂದರೆ ವಿಶಿಷ್ಠವಾದ ಯಾನ. ಅದು ನೆಲ ಬಿಟ್ಟು ಎಲ್ಲಿಯೇ ಸಂಚರಿಸುವ ಸಾಧನವಾದರೂ ಅದು ವಿಯಾನ. ಅಸ್ಗಾಡ್ರಿಯಾ ಕೂಡಾ ಒಂದು ವಿಯಾನವೇ ಇರಬೇಕು.

ಅಂದಹಾಗೆ ನಾರ್ಡಿಕ್ ಪುರಾನಗಳಿಗೆ ಇನ್ನೊಂದು ಹೆಸರು "norse mythology". ಇದು ಬಹುಷಃ ನ ಆರ್ಷ ಎನ್ನುವ ಶಬ್ದದಿಂದ ಬಂದಿದ್ದಿರಬೇಕು. ಆರ್ಷ ಎಂದರೆ ಋಷಿಗಳಿಂದ ಬಂದಿದ್ದು ಎಂದರ್ಥ. ಋಷಿಗಳಿಂದ ಅಲ್ಲದೇ ಇರುವುದು ನಾರ್ಷ=+ಆರ್ಷ. ಇದೇ ಮುಂದೆ "Norse" ಎಂದಾಗಿರಬೇಕು.

No comments:

Post a Comment