Friday, July 20, 2012

ಇದು ಒಂದು ಸೀರಿಯಸ್ ಕಥೆ


ನಮ್ಮ ಕಥಾ ನಾಯಕನ ಹೆಸರು ಜಗನ್ನಾಥ. ಎಲ್ಲರ ಬಾಯಲ್ಲಿ ಜಗ್ಗಣ್ಣ.ಇವನ ಬಗ್ಗೆ ಹೇಗೆ ಅಂತ ಕೇಳಿದರೆ ಊರಲ್ಲಿ ಎಲ್ಲರೂ ಅನುಕೂಲ ಅಂತಲೇ ಹೇಳುತ್ತಾರೆ. ಇವನಿಗೆ ೫ ಎಕರೆ ಅಡಿಕೆ ತೋಟ ಇದೆ. ಗದ್ದೆ ಕೂಡ ಒಂದು ೨ ಎಕರೆ ಇದೆ. ಸಾಲದ್ದಕ್ಕೆ ಅಪ್ಪ ಅಜ್ಜ ಮುತ್ತಜ್ಜ ಎಲ್ಲರೂ ದುಡಿದಿಟ್ಟ ದುಡ್ಡು ಕೂಡ ಹಾಗೆ ಇದೆ. ಹೆಂಡತಿ ಸರಸಿ ಕೂಡ ಒಳ್ಳೆಯವಳು. ಇವರ ದಾಂಪತ್ಯದ ಫಲ ಒಂದು ಮಗ ಒಂದು ಮಗಳು. ಮಗಳನ್ನು ಅವಳ ಇಷ್ಟದಂತೆಯೇ ಒಬ್ಬ ಒಳ್ಳೆ ಕಂಪನಿಯಲ್ಲಿ ಒಳ್ಳೆ ಕೆಲಸದಲ್ಲಿ ಇರುವ ಹುಡುಗನನ್ನು ನೋಡಿ ಮಾಡುವೆ ಮಾಡಿ ಆಗಿದೆ. ಮಗ ತಾನು ಅಪ್ಪ ನೆಟ್ಟ ಆಳದ ಮರಕ್ಕೆ ನೇಣು ಹಾಕಿಕೊಳ್ಳುವ ಜಾಯಮಾನದವನಲ್ಲ ಎನ್ನುತ್ತಾ ಬೆಂಗಳೂರು ಪೇಟೆ ಸೇರಿ ಕೆಲವು ವರ್ಷ ಕಳೆದು ಹೋಗಿದೆ. ಕೆಲಸದ ಮೇಲೆ ಹೊರಗಡೆ ಇರುವ ಮಾಣಿ ಎನ್ನಿಸಿಕೊಂದಿದ್ದರಿಂದ ಇವನಿಗೆ ಹೆಣ್ಣು ಸಿಗುವುದು ಕಷ್ಟವಾಗಲಿಲ್ಲ. ಇಷ್ಟೆಲ್ಲಾ ಅನುಕೂಲಗಳಿದ್ದರೂ ಜಗ್ಗನ್ನನಿಗೆ ಪಿತ್ತ ನೆತ್ತಿಗೆರಲಿಲ್ಲ.ಇವನಿಗೆ ತಂಬಾಕಿನ ಕವಳ ಒಂದನ್ನು ಬಿಟ್ಟು ಯಾವ ದುರಭ್ಯಾಸವೂ ಇಲ್ಲ. ಹಾ೦ ಮನೆಯಲ್ಲಿ ಕಾರ್ ಕೂಡ ಇದೆ. 

ಇಂತಿಪ್ಪ ಜಗ್ಗಣ್ಣ ಒಂದು ದಿನ ತಗ್ಗಿನ ತೋಟಕ್ಕೆ ಹೋಗಿ ಬಂದವ ಯಾಕೋ ಸುಸ್ತು ಸುಸ್ತು ಎನ್ನತೊಡಗಿದ. ಮರುದಿನ ಜ್ವರ ಬಂದಂತೆ ಆಯಿತು. ವಿಚಾರ ತಿಳಿದ ಮಗ ಫೋನ್ ಮಾಡಿ ಬೆಂಗಳೂರಿಗೆ ಬನ್ನಿ ಇಲ್ಲಿ ಒಳ್ಳೆ ಆಸ್ಪತ್ರೇಲಿ ತೋರ್ಸನ. ನಿ೦ಗಕ್ಕೆ  ವರ್ಷಾತು " ಅಂದ. ಮಗಳು ಕೂಡ ಅಣ್ಣ  ಹೇಳಿದ್ದು ಸರಿ ಅಂದಳು. ಹೀಗೆ ಮಗಳು ಮತ್ತು ಮಗ ಒಂದೇ ಮಾತು ಹೇಳಿದ ಮೇಲೆ ಇದನ್ನು ಕೇಳದೆ ಸರಿ ಅನ್ನಿಸಿ ಜಗ್ಗಣ್ಣ ಮತ್ತು ಸರಸಕ್ಕನ ಸವಾರಿ ಬೆಂಗಳೂರಿನ ಬಸ್ಸೇರಿತು.

ಬಸ್ಸು ಹೋಗುತ್ತಿರುವಾಗ ಅರಸೀಕೆರೆ ಹತ್ತಿರ ಒಂದು ಲಾರಿ ಬಂದು ಬಸ್ಸಿಗೆ ಬಲವಾಗಿ  ಜಪ್ಪಿ ಜಗ್ಗಣ್ಣ ಮತ್ತು ಸರಸಕ್ಕ ಇಬ್ಬರೂ ಅರಸೀಕೆರೆಯ ಆಸ್ಪತ್ರೆಗೆ ದಾಖಲಾದರು. ಆಸ್ಪತ್ರೆಗೆ ಬಂದ ಮಗ ಡಾಕ್ಟರ ಹತ್ತಿರ "ನಮ್ಮ ಅಪ್ಪ ಅಮ್ಮ ಹೇಗಿದ್ದಾರೆ?" ಎಂದ್ದಾಗ ಡಾಕ್ಟರ ಹೇಳಿದರು. "ನಿಮ್ಮ ತಂದೆ ತಲೆಗೆ ಬಲವಾದ ಏಟು ಬಿದ್ದಿದೆ. ಅವರ ಹಾರ್ಟ್ ಮೊದಲೇ ವೀಕ್ ಇತ್ತು. ಕಿಡ್ನಿಗೂ ಸ್ವಲ್ಪ damage ಆಗಿದೆ. ಬೆನ್ನಿಗೆ ಕೂಡ ಪೆಟ್ಟು ಬಿದ್ದಿದೆ. ಡಿಸ್ಕ್ ಸ್ಲಿಪ್ ಆಗಿದ್ರೂ ಆಗಿರಬಹುದು. ಒಂದು ಕೈ ಮುರಿದು ಹೋಗಿದೆ.ಒಂದು ಕಾಲು joint ತಪ್ಪಿ ಹೋಗಿದೆ .ತಲೆಗೆ ಪೆಟ್ಟು ಬಿದ್ದಿರೋದ್ರಿಂದ ಕಣ್ಣು ಮತ್ತು ಕಿವಿ ಎರಡೂ ವೀಕ್ ಆಗಿದೆ. ಒಟ್ನಲ್ಲಿ ತುಂಬಾ ಸೀರಿಯಸ್" ಎಂದರು

ನಿಜವಾಗಿಯೂ ಇಷ್ಟೆಲ್ಲಾ ಆದಮೇಲೆ ಇದು ಸೀರಿಯಸ್  ಕಥೆಯೇ ಅಲ್ಲವೇ?

No comments:

Post a Comment