Tuesday, July 17, 2012

ಮನವ ಕಲಕಿದ ಮೋಹಿನಿ

ಅಂದು ಸಂಜೆ ತನಗಾದ ಅನುಭವಕ್ಕೆ ತಾನೇ ಬೆರಗಾಗಿ ಮನೆಯ ಚಿಟ್ಟೆ (ಮಲೆನಾಡಿನ ಮನೆಗಳಲ್ಲಿ ಮನೆಯ ಹೊರಗೆ ತುಸು ಚಾಚಿ ನಿಂತಿರುವ ಕಟ್ಟೆಯ ಭಾಗ) ಮೇಲೆ ಒರಗಿ ಯಚಿಸತೊಡಗಿದ ವಿಶ್ವ. ಅದು ತನಗಾದ ಅನುಭವಾ ಅಥವಾ ಭಾವೋತ್ಕಟತೆಯೋ ಎನ್ನುವುದು ಆತನ ಗೊಂದಲದ ಮೂಲ. ಮೂರು ಸಂಜೆಯ ಹೊತ್ತಿನಲ್ಲಿ ತಾನು ಪೇಟೆಯಿಂದ ಮನೆಕಡೆ ಬರುತ್ತಿದ್ದಾಗ ಒಂದು  ಹೆಣ್ಣು ಬಿಳಿ ಸೀರೆ ಉಟ್ಟು ಕಾಡಲ್ಲಿ ನಿಂತಿದ್ದು ಆತನಿಗೆ ಬಹಳ ದಿನಗಳಿಂದ ಅನುಭವಕ್ಕೆ ಬಂದ ವಿಚಾರ.
ಆ ಹೆಣ್ಣು ತನಗೆ ಮಾತ್ರ ಕಂಡಿದ್ದೋ ಅಥವಾ ಮತ್ತು ಯಾರಾದರೂನೋಡಿದ್ದಾರೋ ಎಂದು ಒಮ್ಮೆ ಯೋಚಿಸಿದ. ಬೇರೆ ಯಾರೂ ನೋಡದಿದ್ದಲ್ಲಿ ಅದು ತನಗೆ ಮಾತ್ರ ಕಂಡಿದ್ದೇಕೆ ಎಂದು ಕೂಡಾ ಯೋಚಿಸಿದ.

ಭೂತ ದೆವ್ವಗಳ ಬಗ್ಗೆ ಯಾರಾದರೂ ಮಾತಾಡಿದರೆ ಗಟ್ಟಿಯಾಗಿ ನಗುವ ತನಗೇ ಇಂತಹ ಅನುಭವ ಆಗಬೇಕಿತ್ತೇ ಎಂದು ಒಮ್ಮೆ ಕಸಿವಿಸಿಗೊಂಡ. ಏನಾದರಾಗಲಿ ಈ ವಿಚಾರ ಬರೇ  ಯೋಚಿಸಿ ಬಗೆ ಹರಿಯುವುದಿಲ್ಲ ಎನ್ನುವುದನ್ನು ಮನಗಂಡ ಆತ
ಇದರ ಮೂಲದತ್ತ ಸಾಗುವ ಯೋಚನೆ ಮಾಡಿದ.

ಒಹ್ ತಾನು ಈ ಮೊದಲೆಲ್ಲಾ ಮಾಡಿದ ಹಲ್ಕಟ್ ಗಿರಿ ಕೆಲಸಗಳಲ್ಲೆಲ್ಲಾ ತನ್ನ ಸಖನಾಗಿ, ಸಾರಥಿಯಂತೆ ಇದ್ದ ಗೋಪಿ ಶಾಸ್ತ್ರಿಯನ್ನು ಬಿಟ್ಟು ಈ ಮೋಹಿನಿಯ ಶೋಧನೆಯ ಮಹತ್ಕಾರ್ಯ ಮಾಡುವುದೇ ಎಂದೆನಿಸಿ ಒಂದು ಎಲೆ ಅಡಿಕೆ ಹಾಕಿಕೊಂಡು ಅಮ್ಮನ ಹತ್ರ "ಅಮ್ಮಾ ಇಲ್ಲೇ ಗೋಪಿ ಮನಿಗೆ ಹೋಗ್ಬತ್ತಿ. ಅಪ್ಪಯ್ಯ ಕೇಳಿರೆ ಎಲ್ಲಿಗೆ ಹೋಗ್ತಿ ಅಂತ ಹೇಳಲ್ಲೆ ಅಂತ ಹೇಳು" ಎಂದವನೇ ತನ್ನ ಬೈಕ್ ಸ್ಟಾರ್ಟ್ ಮಾಡಿ ಗೋಪಿ ಮನೆಗೆ ಹೋದ. ಆದರೆ ಅಲ್ಲಿ ಇವನ ಮೋಹಿನಿಯ ವಿಚಾರ ಜಾಳು ಎನ್ನಿಸುವಂತಹ ರುಚಿಕರ ಮಾತು ಕತೆ ನಡೆಯುತ್ತಿತ್ತು. ಅದು ಮತ್ತೇನಲ್ಲ ದೀಪಂಗೆ ಸಲೀಮ ಬರೆದ ಲವ್ ಲೆಟರ್ ಸಿಕ್ಕಿದ್ದು ಮತ್ತು ಅದರ ಕುರಿತಾಗಿ ಮುಂದೆ ಕೈಗೊಳ್ಳ ಬೇಕಾದ ಕ್ರಮಗಳ ಬಗೆಗಾಗಿತ್ತು. ಊರು ಮನೆ ಸಂಪ್ರದಾಯದಂತೆ ವಿಶ್ವ ಅದರಲ್ಲಿ ಭಾಗಿಯಾದ. ತನ್ನ ಮಹತ್ತರ ಉದ್ದೇಶವೂ ಆತನಿಗೆ ಮರೆತು ಹೋಯ್ತು. ಚರ್ಚೆ ಒಂದು ಅಂತ್ಯ ಕಾಣುತ್ತಲೇ ಎಲ್ಲರೂ ಮನೆಗೆ ಹೊರಟರು. ವಿಶ್ವನೂ ಹೋದ.

ಮರುದಿನ ಮತ್ತೆ, ಆಫೀಸೆನಿಂದ ಬರುವಾಗ ಇವನಿಗೆ ಮೋಹಿನಿಯ ನೆನಪಾಯಿತು. ಒಮ್ಮೆಲೇ ಹುದುಗಾತಿಕೆಯಲ್ಲಿ ಓದಿದ ಅನೇಕ ಕಾದಂಬರಿಗಳು ನೋಡಿದ ಅನೇಕ ಧಾರಾವಾಹಿಗಳು ನೆನಪಾದವು. ಹೀಗೆ ಗತಕಾಲದ ನೆನಪಿನಲ್ಲಿಯೇ ಬರುತ್ತಿದ್ದಾಗ ಮೊದಲು ಮೋಹಿನಿಯನ್ನು ಕಂಡ ಸ್ಥಳ ಬಂತು. ಏನಾದರಾಗಲಿ ನೋಡಿಯೇ ಬಿಡುತ್ತೇನೆ ಎಂದು ವಿಶ್ವ ಹೊರಟ. ಮೋಹಿನಿ ದ್ದ ಜಾಗದಲ್ಲಿ ಬಂದು ನಿಂತ. ಒಮ್ಮೆಲೇ ಹಗಲುಗನಸು  ಕಾಣಲು ಶುರು ಮಾಡಿದ. ತಾನು ಮೋಹಿನಿಯ ರಹಸ್ಯವನ್ನು ಭೇದಿಸಿದಂತೆ ತನ್ನ ಸುದ್ದಿ T V 9 ನಲ್ಲಿ ಸುವರ್ಣ ನ್ಯೂಸ್ ನಲ್ಲಿ ಬಂದಂತೆ ಮನಸೋ ಇಚ್ಛೆ ಟೇಪ್ ರಿಪೀಟ್ ಮಾಡಿದ. ಒಮ್ಮೆ ದೀಪ ಹಾಗು ಅವಳ ತಥಾಕಥಿತ  ಪ್ರೇಮಿ ತೊಗರು ಸಲೀಮನಿಗೂ ಈ ಮೋಹಿನಿ ಪ್ರಕರಣಕ್ಕೂ ಏನಾದರೂ ಸಂಬಂಧವಿದೆಯೇ ಎಂದು ಕೂಡ ಅನ್ನಿಸಿತು. ಇಷ್ಟಾದರೂ ಮೋಹಿನಿಯ ಸುಳಿವಿಲ್ಲ.

ಅಷ್ಟರಲ್ಲಿ ಯಾರೋ ಬೆನ್ನು ಮುಟ್ಟಿದ ಅನುಭವವಾಯಿತು. ವಿಶ್ವ ತಿರುಗಿ ನೋಡಿದ , ಮೋಹಿನಿ .ಮೊನ್ನೆ ಕಂಡ ಹಾಗೆ ಬಿಳಿ ಸೀರೆಯನ್ನೇ ಉಟ್ಟಿದ್ದಾಳೆ . ಒಮ್ಮೆಲೇ ಅವಕ್ಕಾಗಿ ನಿಂತ ನಮ್ಮ ವಿಶ್ವ. ಅವನ ಅಪ್ಪಯ್ಯನ ಯಕ್ಷಗಾನದ ಭಾಷೆಯಲ್ಲೇ ಹೇಳುವುದಾದರೆ ಬಿಟ್ಟ ಕಣ್ಣು ಬಿಟ್ಟ ಹಾಗೆ ಬೆಕ್ಕಸ ಬೆರಗಾಗಿ ದಿಕ್ಕು ಕೆಟ್ಟು ದಂಗು ಬಡಿದು ನಿಂತಿದ್ದ . ಅಷ್ಟರಲ್ಲಿ ಆ ಮೋಹಿನಿ "ಸಾಬ್ ! ಚೌಕೋ ಮತ್ ಚಮ್ಕೋ . ನಯಾ ಟೈಡ್ ನಾಚುರಲ್ !!."" ಎಂದು ಹೇಳಿ ಪಕ್ಕದಲ್ಲಿದ್ದ ಕಟ್ಟಿಗೆ ಹೊರೆಯನ್ನು ತಲೆಯ ಮೇಲೆ ಇಟ್ಟುಕೊಂಡು "ಬಸಂತೀ! ಮೈ ರಾಧಾ ಹಿಯಾ ಹ್ಞೂ" ಎನ್ನುತ್ತಾ  ನಡೆದುಕೊಂಡು ಹೊರಟಿತು.

ಇದನ್ನೆಲ್ಲಾ ನೋಡಿದ ವಿಶ್ವ  "ಅಯ್ಯೋ! ದೇವರೇ ಈ ಉತ್ತರ ಭಾರತೀಯರು ಇಲ್ಲಿ ಬಿಲ್ಡಿಂಗ್ ಕಟ್ಟಕ್ಕೆ ಬೈಂದ . ಬರಲಿ ಆದ್ರೆ ಬಿಳಿ ಸೀರೆಲಿ ಬಂದು ತಲೆ ಎಂಟಕ್ಕೆ ಕೆಡ್ಸಕ್ಕು " ಎಂದು ಮನದಲ್ಲೇ ಶಪಿಸುತ್ತಾ ಬೈಕ್  ಏರಿ ಮನೆ ಕಡೆ ಹೊರಟ.



No comments:

Post a Comment