Friday, April 21, 2023

ಕಾಂಗನ್ಯಾಯ

ನಾರಾಯಣ ದತ್ ತಿವಾರಿ

ಈ ಹೆಸರು ಒಂದು ವಿಶಿಷ್ಠ ಕಾರಣಕ್ಕೆ ಪ್ರಸಿದ್ಧ. ಎರಡು ರಾಜ್ಯಗಳಿಗೆ ಮುಖ್ಯಮಂತ್ರಿಯಾದವರು ಇವರು. ಎರಡು ರಾಜ್ಯಗಳಿಗೆ ಮುಖ್ಯಮಂತ್ರಿಯಾದ ವಿಶೇಷ ದಾಖಲೆ ಇವರದ್ದು.
ಉತ್ತರ ಪ್ರದೇಶ ರಾಜ್ಯಕ್ಕೆ ಮೂರು ಸಲ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ಪಕ್ಷದಿಂದ ಉ.ಪ್ರ ದ ಕೊನೆಯ ಮುಖ್ಯಮಂತ್ರಿ ಕೂಡಾ ಇವರೇ. ಉತ್ತರಾಖಂಡ ರಾಜ್ಯದ ಮೂರನೇ ಮುಖ್ಯಮಂತ್ರಿ. ಆಂಧ್ರ ಪ್ರದೇಶದ ರಾಜ್ಯಪಾಲರಾಗಿದ್ದರು.

ಆದರೆ, ಈ ಮುತ್ಸದ್ದಿಯನ್ನು ಕಾಂಗ್ರೆಸ್ ಹೇಗೆಲ್ಲಾ ನಡೆಸಿಕೊಂಡಿತು ಅಂತ ರವಿ ಬೆಳಗೆರೆ ಬರೆದ ಇಂದಿರೆಯ ಮಗ ಸಂಜಯ ಎನ್ನುವ ಪುಸ್ತಕ ಓದಿ. Subtle ಆಗಿ ಸಣ್ಣದಾಗಿ, ಚೊಕ್ಕದಾಗಿ ರವಿ ಇವರಿಗಾದ ಅವಮಾನ ತಿಳಿಸಿದ್ದಾರೆ.

ಇವರ ಕೊನೆಯ ದಿನಗಳು ದುಃಖದಾಯಕ.
ವಯಕ್ತಿಕ ಜೀವನ ಒಂದು ರೀತಿಯ ದುರಂತ ನಿಜ. ಅದು ಒತ್ತಟ್ಟಿಗಿರಲಿ. ನಾನು ಅದರ ಬಗ್ಗೆ ಆಸಕ್ತನೂ ಅಲ್ಲ.

ತಿವಾರಿ ಮಾತ್ರವಲ್ಲ. ನರಸಿಂಹ ರಾವ್, ವಿದ್ಯಾಚರಣ ಶುಕ್ಲಾ, ಅಜಿತ್ ಜೋಗಿ, ಮಾಧವರಾವ್ ಸಿಂಧಿಯಾ, ಇಂದ್ರ ಕುಮಾರ್ ಗುಜರಾಲ್, ಕಾಮ ರಾಜನ್, ಕೃಷ್ಣ ಮೆನನ್, ಸೀತಾರಾಮ ಕೇಸರಿ, ಪ್ರಿಯರಂಜನ್ ದಾಸ್ ಮುನ್ಷಿ, ಎಸ್. ಎಂ ಕೃಷ್ಣ, ಹೀಗೆ ಕಾಂಗ್ರೆಸ್ ಅವಮಾನಿಸಿದ ಮುತ್ಸದ್ದಿಗಳ ದಂಡೇ ಇದೆ.  
ಅಷ್ಟೇ ಅಲ್ಲ. ವಾಜಪೇಯಿ ಎನ್ನುವ ಅಕಳಂಕ ಚರಿತ್ರನ ಭಾವ ಚಿತ್ರವೂ ಇವರ ಕಣ್ಣಿಗೆ ಮುಳ್ಳಾಗಿತ್ತು. 

ಪ್ರಣಬ್ ಮುಖರ್ಜಿ ಅವರಿಗೆ ಕೂಡ ಕಾಂಗ್ರೆಸ್ ಕಡೆಗಣನೆಯ ಮರ್ಯಾದೆ ಕೊಟ್ಟಿತ್ತು. ಆದರೆ ಕೊನೆಗೆ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಕೊಂಡೊಯ್ದು ತನ್ನ ಮರ್ಯಾದೆ ಉಳಿಸಿಕೊಂಡಿತ್ತು.

A.P.J ಅಬ್ದುಲ್ ಕಲಾಂ ಎನ್ನುವ ಮೇಧಾವಿ, ದೂರದೃಷ್ಟಿ ಹೊಂದಿದ ವಿಜ್ಞಾನಿಯೋರ್ವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಅದೇಕೆ ಮರು ಆಯ್ಕೆ ಮಾಡಲಿಲ್ಲ? ಇದು ವೈಜ್ಞಾನಿಕ ಚಿಂತಕರ ಸಮೂಹಕ್ಕೆ ಎಸೆದ ದ್ರೋಹವಲ್ಲವೇ?

ಆದರೆ ಈಗ ಕಾಂಗ್ರೆಸ್ಸಿಗರಿಗೆ ಕೆಲವು ಮಾಜಿ ಬಿಜೆಪಿಗಳ ಮೇಲೆ ಭಾರೀ ಕಾಳಜಿ. ಅವಮಾನವಾಗಿದೆ ಅಂತಾರೆ.
ಅದನ್ನು ಈ ಮಾಜಿ ಬಿಜೆಪಿಗಳು ನಂಬುತ್ತಾರೆ. 

ಕಾಗೋಡು ತಿಮ್ಮಪ್ಪ ಎನ್ನುವ ಅನುಭವಿ ರಾಜಕಾರಣಿಯನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎನ್ನುವುದನ್ನು ನಾವೆಲ್ಲ ನೋಡಿದವರೇ ಸ್ವಾಮಿ. ಅಷ್ಟು ಹಿರಿಯ ನಾಯಕನನ್ನು ಬಿಟ್ಟು ವಲಸಿಗನೊಬ್ಬನನ್ನು ಮುಖ್ಯಮಂತ್ರಿ ಮಾಡಿದ್ದನ್ನು ಜನ ನೋಡಿಲ್ಲವೇ? 
ತಿಮ್ಮಪ್ಪ ಅವರು ಸ್ಪೀಕರ್ ಆದಾಗ ಖಡಕ್ ಮೇಷ್ಟ್ರಾಗಿದ್ದರು ಎನ್ನುವುದನ್ನೂ ನಾವು ನೋಡಿದ್ದೇವೆ.
ಅವರನ್ನು ಮಂತ್ರಿ ಮಾಡಿದ್ದು ಕೊನೆಗೆ ಯಾವಾಗಲೋ ಆಗಿತ್ತು. ಅದೇ ರೀತಿ 2013ರಲ್ಲಿ ಕಾಂಗ್ರೆಸ್ ಗೆದ್ದು ಬಂದ ಕೂಡಲೇ ರೋಷನ್ ಬೇಗ್ ಮತ್ತು ಡಿ.ಕೆ. ಶಿವಕುಮಾರ ಅವರನ್ನು ಮಂತ್ರಿ ಮಾಡಿರಲಿಲ್ಲ. ಕೊನೆಗೆ ಯಾವಾಗಲೋ ಮಾಡಿದ್ದು.

ಇದನ್ನೆಲ್ಲ ಒಬ್ಬ ರಾಜಕೀಯ ವ್ಯಕ್ತಿಯೊ ವಿಶ್ಲೇಷಕನೊ ಅಲ್ಲದ ನಾನೊ ನನ್ನಂಥವನೋ ಹೇಳುತ್ತಿದ್ದಾನೆ. ರಾಜ್ಯ ಬಿಜೆಪಿಗರು ಇದನ್ನೆಲ್ಲಾ ಹೇಳಬೇಕು. ಯಾಕೆ ಹೇಳುತ್ತಿಲ್ಲ ಗೊತ್ತಿಲ್ಲ.

✍️ಶಶಾಂಕ ತೆಂಕೋಡು

No comments:

Post a Comment