Thursday, March 30, 2023

ಒಂದು ವ್ಯಭಿಚಾರಿಣಿಯ ಆರೋಪ

ಒಂದೂರಲ್ಲಿ ಒಬ್ಬಳು ಸೂಳೆ ಇದ್ದಳು. ಆದರೆ ಲೋಕಕ್ಕೆ ಅಂಜಿ ಸೂಳೆಗಾರಿಕೆಯನ್ನು ಗುಟ್ಟಾಗಿ ಮಾಡುತ್ತಿದ್ದಳು. ಅವಳು ವಯಸ್ಸು ಮೀರುತ್ತಿದ್ದರೂ ಮದುವೆಯಾಗದ್ದನ್ನು ನೋಡಿ ಜನ ಅನುಮಾನಿಸ ತೊಡಗಿದರು. ಕೊನೆಗೆ ಯಾವುದೋ ಒಬ್ಬನನ್ನು ಮದುವೆಯಾದಳು. ಎರಡೋ ಮೂರೋ ಸಂತಾನವೂ ಆಯ್ತು.

ತಾನು ಮಹಾ ಗರತಿ ಅಂತ ತೋರಿಸೋದಕ್ಕೆ ಯಾವ್ಯಾವುದೋ ಧರ್ಮಶಾಸ್ತ್ರದ ಪುಸ್ತಕ ಓದಿ ಇತರ ಹೆಂಗಸರನ್ನು ನಿಂದಿಸುತ್ತಿದ್ದಳು. ಅವಳ ಗಂಡ ಇದಕ್ಕೆಲ್ಲ ತಕರಾರು ಮಾಡಲೇ ಇಲ್ಲ. 

ಅವಳ ಆಪ್ತ ಗಿರಾಕಿಗಳಲ್ಲಿ ಊರ ದೊಡ್ಡ ಮನುಷ್ಯರೂ ಕೆಲವರಿದ್ದರು. 

ಇಂತಿಪ್ಪ ಹೊತ್ತಿನಲ್ಲಿ ಊರಿಗೆ ವೈದ್ಯರೊಬ್ಬರು ಬಂದು ನೆಲೆಯಾದರು. ತಮ್ಮ ಕೈಗುಣದಿಂದ ವೈದ್ಯರು ಒಳ್ಳೆ ಹೆಸರೂ ಸಂಪಾದಿಸಿದರು ಊರ ಗಣ್ಯರಲ್ಲಿ ಒಬ್ಬರು ಎಂದೂ ಎನ್ನಿಸಿಕೊಂಡರು.

ಆದರೆ ಸಾತ್ವಿಕರಾಗಿದ್ದ ವೈದ್ಯರು ಒಂದು ದಿನವೂ ಸೂಳೆಯ ಮನೆ ಕಡೆ ಗುಟ್ಟಾಗಿ ಸುಳಿಯಲಿಲ್ಲ. ತನ್ನ ಚೆಲುವಿಗೆ ಇದು ಅವಮಾನ ಎಂದು ಭಾವಿಸಿದ ಆ ಸೂಳೆ ವೈದ್ಯರ ಹೆಂಡತಿಗೆ ವ್ಯಭಿಚಾರಿಣಿಯ ಪಟ್ಟ ಕಟ್ಟಿದಳು.

ವೈದ್ಯರ ಹೆಂಡತಿ ಜೊತೆ ಹಾದರ ಮಾಡಿದ್ದು ತನ್ನ ಗಂಡನೇ ಅಂದಳು. ಪಂಚಾಯ್ತಿಯನ್ನೂ ಸೇರಿಸಿದಳು. ಅವಳ ಗುಟ್ಟಿನ ಗಿರಾಕಿಗಳೇ ಪಂಚರು.

ವೈದ್ಯರು ಇದನ್ನೆಲ್ಲ ಕೇಳಿ ನಗತೊಡಗಿದರು. ಪಂಚರು ಸಿಟ್ಟಾಗಿ ನಕ್ಕಿದ್ದನ್ನು ಆಕ್ಷೇಪಿಸಿದರು.

ವೈದ್ಯರು ಹೇಳಿದ್ದು ಇಷ್ಟೇ. "ಸಮರ್ಥ ಯೌವ್ವನ ಭರಿತ ಪುರುಷ ನಾನಿರುವಾಗ ನನ್ನ ಹೆಂಡತಿ ಆ ನಪುಂಸಕನ ಜೊತೆ ಹಾದರ ಮಾಡಿದ್ದಾಳೆ ಎಂದರೆ ನಗದೆ ಇನ್ನೇನು ಮಾಡಲಿ".

ಈಗ ಎಲ್ಲರಿಗೂ ಪೀಕಲಾಟ. ವೈದ್ಯರು ನಪುಂಸಕ ಎಂದ ಮೇಲೆ ಅದು ಸತ್ಯವೇ. ಅದನ್ನು ಪ್ರಶ್ನಿಸಿದರೆ ಸೂಳೆಯ ಗಂಡನ ಗಂಡಸುತನ ಸಾಬೀತು ಮಾಡಬೇಕು. ಅದು ಸಾಧ್ಯವಿಲ್ಲ. ಹಾಗಂತ ಸುಮ್ಮನಿದ್ದರೆ ಸೂಳೆ ಹಡೆದ ಮಕ್ಕಳು ಯಾರು ಎನ್ನುವ ಪ್ರಶ್ನೆ. ಎಲ್ಲಾದರೂ ತಮ್ಮನ್ನು ತೋರಿಸಿದರೆ ಎನ್ನುವ ಅಳುಕು ಎಲ್ಲಾ ಪಂಚರಿಗೆ. ತನ್ನ ಗುಟ್ಟು ರಟ್ಟಾಗುವ ಆತಂಕ ಸೂಳೆಗೆ.

ಇಷ್ಟು ದಿವಸ ಏನೇನೋ ಪುಂಗಿ ಭಾರತದ ಆಡಳಿತ ವ್ಯವಸ್ಥೆ ಸರಿ ಇಲ್ಲ, ಸಂವಿಧಾನಕ್ಕೆ ಅಪಾಯ ಎಂದೆಲ್ಲ ಏನೇನೋ ಎಂದವರ ಪಾಡು ಕೂಡಾ ಹೀಗೆಯೇ ಆಗಿದೆ.

ಸಂವಿಧಾನಾತ್ಮಕವಾಗಿ, ಶಾಸನಕ್ಕೆ ತಕ್ಕಂತೆ ಸಾಕ್ಷ್ಯಾಧಾರ ಪರಿಶೀಲಿಸಿ ಕೊಟ್ಟ ತೀರ್ಪನ್ನು ಅನುಸರಿಸಿ ಅನರ್ಹತೆಯ ನೋಟೀಸ್ ಕೊಟ್ಟಿದ್ದಾರೆ. ಇಲ್ಲಿ ನೋಟೀಸ್ ಒಂದು ಶಿಷ್ಠಾಚಾರ ಅಷ್ಟೇ. 

ತೀರ್ಪು ಪ್ರಶ್ನಿಸಿದರೆ ನ್ಯಾಯಾಂಗ ನಿಂದನೆ. ಮಾಡಿದ್ದನ್ನು ಸಮರ್ಥಿಸಿದರೆ ಜಾತ್ಯತೀತರು ಜಾತಿ ನಿಂದನೆ ಸಮರ್ಥಿಸಿದ ಹಾಗೆ. ಏನು ಮಾಡೋದು? ಪಾಪ. ಹೀಗಾಗಬಾರದಿತ್ತು.

#Disqualification 
#disqualified

No comments:

Post a Comment