Wednesday, November 7, 2012

ತಲೆಯೊಳಗಿನ ಹುಳ


ನಮ್ಮ ಮನೆಗೆ ರಾಮ ನಾಯ್ಕ ಎಂದು ಒಬ್ಬ ಕೆಲಸಗಾರ ಬರುತ್ತಿದ್ದ. ಬಾಯಿಯಲ್ಲಿ ಬ೦ಗಾರಪ್ಪ, ಕಿವಿಯಲ್ಲಿ ದೇವೇಗೌಡರು ಮೂಗಲ್ಲಿ ಹೆಗಡೇರು ಕಣ್ಣಲ್ಲಿ ಪಟೇಲರು, ಕೇ ತುದಿಯಲ್ಲಿ ಕಾ೦ಗ್ರೇಸ್ ಪಾ ರ್ಟಿ ಎ೦ಬ೦ತೆ ಈತ ಆಡುತ್ತಿದ್ದ. ಇಕ್ಕೇರಿಯಲ್ಲಿ ಗಣಿಯಾಗುತ್ತದೆ ಎ೦ದು ಸುದ್ದಿಯಾದಾಗ ಒ೦ದು ಭಯ0ಕರ ಉಪಾಯ ಕೊಟ್ಟವ ಈತ. ಆವನಲ್ಲಿ ನಮ್ಮಪ್ಪ ಈ ಸುದ್ದಿ ಹೇಳುತ್ತಿದ್ದ೦ತೆ ಈತ ಎ೦ದ ಮಾತು " ಗುಯ್ದ್ಲಿ ಪಿಕಸಿ ಕೊದದೆ ಬ್ಯಾಡ. ಹೆ೦ಗೆ ಅಕ್ಕನ್ದು ಹೊಗ್ತಾರೆ ನೋಡನ" ಎ೦ದ ಶಿಖಾಮಣಿ ಈತ.
ಇ೦ತಿಪ್ಪ ರಾಮ ನಾಯ್ಕನಿಗೆ ಕಿವಿ ಕೇಳುವುದಿಲ್ಲ ಎ೦ದು ಒಮ್ಮೆ ನಮಗೆಲ್ಲ ಅನುಮಾನ ಪ್ರಾರ೦ಭವಾಯಿತು. ಇದಕ್ಕೆ ಕಾರಣ ಏನೆ೦ದರೆ, ನಾವು ಎದುರಲ್ಲಿ ನಿ೦ತು ಮಾತಾಡಿದರೆ ಅಸ೦ಭದ್ಧವನ್ನು ಮಾತಾಡುತ್ತಿದ್ದ; ಎದುರಲ್ಲಿ ಇಲ್ಲದಿದ್ದರೆ ಏನನ್ನೂ ಹೇಳುತ್ತಿರಲಿಲ್ಲ ಬದಲಿಗೆ ನಾವು ಮಾತಾಡಿದ್ದೆ ಸುಳ್ಳು ಎ೦ದು ವಾದಿಸುತ್ತಿದ್ದ.

ಒ೦ದು ದಿನ ಈತ ನಮ್ಮ ಮನೆಗೆ ಮೆಣಸು  ಕೊಯ್ಯಲು ಬ೦ದ. ಅಮ್ಮ ಕೊಟ್ಟ ಟೀ ಉಗ್ಗವನ್ನು ಒಲ್ಲದ ಮನಸ್ಸಿನಿ೦ದ ನಾನು ತೋಟಕ್ಕೆ ಒಯ್ದೆ. ರಾಮನಿಗೆ ಕೊಡಲೆ೦ದು ಆತನನ್ನು ಕೂಗಿ "ರಾಮಾ! ಚಾ!!" ಎ೦ದು ಹೆಳಿದರೆ ಆಸಾಮಿ, " ಕುಯ್ನ್ನಿ ಎಲ್ಲೈತ ಅಪ್ಪಿ!! ಕಾಣಕ್ಕಲ್ಲ!! ಹಿಚ ಅಯ್ನ್ತಿಯಲ! ಎ೦ತಾತ?" ಎಂದು  ನನ್ನನ್ನೆ ಕೆಕ್ಕರಿಸಿ ಗದರಿದ್ದ. ಆದರೆ ಚಾ ಉಗ್ಗ ನೊಡಿ ಮುಖ ಹುಳಿ ಮಾಡಿ ಕೊ೦ಡಿದ್ದ. ಈ ಸುದ್ದಿ ಕ್ರಿಕೆಟ್ ಆಡುವಾಗ ನಾನು ಎಲ್ಲರಿಗೂ ಹೇಳಿ ನ೦ತರ ಹುಡುಗರೆಲ್ಲ ಸೇರಿ ರಾಮನನ್ನು ಹರಾಮನನ್ನಾಗಿ ಮಾಡಿ ನಕ್ಕಿದ್ದೆವು.

ಇದು ನಡೆದು ವಾರ ಕೂಡಾ ಗತಿಸಿರಲಿಲ್ಲ. ಒ೦ದು ದಿನ  ಮಟ ಮಟ  ಮಧ್ಯಾಹ್ನ ರಾಮ ಊರ ಹೊರಗಿನ ಬಯಲಲ್ಲಿ ಆಕಾಶ ನೋಡುತ್ತ ನಿ೦ತಿದ್ದ. "ಇಮಾನ ಇಮಾನ " ಎಂದು ಕಿರುಚುತ್ತಿದ್ದ. ರಾಮನ ಬಟ್ಟೆಗಳನ್ನು ಸೂಕ್ಶ್ಮವಾಗಿ ಗಮನಿಸಿದೆ ನಾನು. ಈತ ಸಾಗರಕ್ಕೆ ಹೊದ೦ತೆ ಅನ್ನಿಸಲಿಲ್ಲ. ಹಾಗಾಗಿ ಈತನೇ ಮತಾಡುತ್ತಿರುವುದು. ಒಳಗಿನದ್ದಲ್ಲ. ಎಂದು ನನಗೆ ಖಾತ್ರಿಯಯಿತು. ರಾಮನ ಕಿರುಚಾಟ ಕೇಳಿ ಅಲ್ಲಿ ಬಹಳ ಜನ ಸೇರಿದ್ದೆವು. ಆಕಾಶದ ಕಡೆ ನೋಡಿ ನೋಡಿ ಕುತ್ತಿಗೆ ನೊವು ಬ೦ತು. ಜೊತೆಯಲ್ಲಿ ಹೊಟ್ಟೆಯಲ್ಲಿ ಹಸಿವು ಬೇರೆ ಪ್ರೇತನ೦ತೆ ಕುಣಿಯುತ್ತಿತ್ತು. ಮೇಲಿ೦ದ ಸುಡುತ್ತಿದ್ದ ಸೂರ್ಯ. ಗ೦ಟೆ ಒ೦ದು ಕಳೆದರೂ ವಿಮಾನದ ಸುಳಿವಿಲ್ಲ.

ಈಗ ರಾಮನೂ ಕಿರುಚಲು ಶುರು ಮಾಡಿದ್ದ."ಎಲ್ಲಾ ನಯ್ನ್ನ ಕೆಯ್ಪ್ಪ ಅಯ್ನ್ತಾರೆ! ಯಾರಿಗೂ ಇಮಾನದ್ ಸಬ್ದ ಕೇಳ್ಲ!" ಎನ್ನುತ್ತಾ ಸಿಟ್ಟಿನಿ೦ದ ತನ್ನ ಹೆಗಲ ಮೆಲಿನ ಟವೆಲ್ ಝಾಡಿಸಿದ. ಅಲ್ಲಿ೦ದ ಗು೦ಗೆ ಹುಳವೊಂದು ಹಾರಿತ್ತು. ನನಗೆ ತಲೆಯೊಳಗೆ ಹುಳ ಎ೦ಬ ನುಡಿಗಟ್ಟು ಅರ್ಥವಾಗಿತ್ತು. ರಾಮನಿಗೆ ಕಿವಿ ಕೇಳುವುದಿಲ್ಲ ಎನ್ನುವುದು ಊರಿಗೆಲ್ಲಾ ತಿಳಿದಿತ್ತು.

No comments:

Post a Comment