Thursday, July 6, 2017

ಗಾವಿಲ ಬಿ ಇ

ಎಪ್ಪತ್ತರ ದಶಕದಲ್ಲಿ ಊರಿನಲ್ಲಿದ್ದ ಭಟ್ಟರಲ್ಲಿ ಇಗ್ಗಾ ಭಟ್ಟರಿಗೆ ಒ೦ದು ವಿಶೇಷವಾದ ಬೆಲೆ ಇತ್ತು. ಅದಕ್ಕೆ ಕಾರಣ ಭಟ್ಟರು ಊರಿನಲ್ಲಿ ಮಾತ್ರವಲ್ಲದೆ ಕಾಶಿ ಮತ್ತು ಕಾಂಚಿಗಳಲ್ಲಿ ಮಂತ್ರ ಕಲಿತು ನಂತರ ಗೋಕರ್ಣದ ಪಾಠ ಶಾಲೆಯಲ್ಲಿ ಶಾಸ್ತ್ರಿಗಳಾಗಿ ಕೆಲೆಸ ಮಾಡಿದ್ದಷ್ಟೇ ಅಲ್ಲ. ಊರಿನ ಅನೇಕರಿಗೆ ವೇದಾಧ್ಯಯನ ಪ್ರಯೋಗಗಳನ್ನು ಕಲಿಸಿದ್ದು, ಅನೇಕ ಮಂದಿ ಬಡ ಬ್ರಾಹ್ಮಣರ ಮನೆಯಲ್ಲಿ ದಕ್ಷಿಣೆ ಇಲ್ಲದೆ ಕಾರ್ಯಗಳನ್ನು ಸಾಗಿಸಿದ್ದು, ಬ್ರಾಹ್ಮಣ ಕೇವಲ ಪರಿಗ್ರಹಕ್ಕಲ್ಲ ದಾನ ಕೂಡಾ ಮಾಡಬೇಕು ಎಂಬ ನೀತಿಗೆ ಬದ್ಧರಾಗಿ ದಾನವನ್ನೂ ಮಾಡಿದ್ದು. ತಮ್ಮ ವಿದ್ಯ ಗರ್ವವನ್ನು ಸಂಪೂರ್ಣವಾಗಿ ತ್ಯಜಿಸಿದ್ದರಿಂದಲೇ ಭಟ್ಟರು ವಿಘ್ನೇಶ್ವರ ಭಟ್ಟರಾಗಿಯೇ ಉಳಿಯದೆ ಗಾಳಿಕೊಪ್ಪದ ಎಲ್ಲರ ಬಾಯಿಯಲ್ಲೂ ಪ್ರೀತಿಯಿಂದ ಇಗ್ಗಾ ಭಟ್ಟರಾಗಿದ್ದು.

ಇಂತಿಪ್ಪ ಭಟ್ಟರಿಗೆ ಮೂರು ಮಕ್ಕಳು. ದೊಡ್ಡ ಮಗ ಪರಮೇಶ್ವರ ಅಪ್ಪನಂತೆಯೇ ಪೌರೊಹಿತ್ಯದ ದಾರಿಯನ್ನು ಆರಿಸಿಕೊಂಡು ಅದಾಗಲೇ ಮಂತ್ರ ತಂತ್ರ ಕಲಿಯಲಿ ಘಟ್ಟ ಇಳಿದಾಗಿತ್ತು. ಇನ್ನೊಬ್ಬ ಮಗ ಗೋಪಾಲ ಅದೇಕೋ ತೋಟ ಮನೆಗಳ ಕಡೆ ವಿಶೇಷ ಆಸ್ಥೆ ಹೊಂದಿ ಕೃಷಿಯಲ್ಲಿ ಮತ್ತು ಹೈನುಗಾರಿಕೆಗೆ ತೊಡಗಿಕೊಂಡ. ಕೊನೆಯ ಮಗ ಲಕ್ಷ್ಮೀನಾರಾಯಣ. ಕೊನೆಯ ಮಗ ಎಂದು ಮುದ್ದು ಸ್ವಲ್ಪ ಅತಿಯೇ ಆಗಿತ್ತು. ಇದರಿಂದ ಆತ ಸ್ವಲ್ಪ ಉಡಾಫ಼ೆ ಮತ್ತು ಸೋಮಾರಿತನ ಬೆಳೆಸಿಕೊಂಡ.ಗಾಳಿಕೊಪ್ಪದ ವಿಘ್ನೇಶ್ವರ ಭಟ್ಟರ ಮಗ ಅಂತ ಕರ್ಯಲು ಜನಕ್ಕೆ ಕಷ್ಟವೂ ಬೇಸರ್ವೂ ಆಗಿ ಗಾವಿಲ ಎನ್ನಿಸಿಕೊಂಡ. ಊರಲ್ಲಿ ಇಷ್ಟು ದಿನ ಮರ್ಯಾದೆ ಗೌರವಗಳಿಂದ ಬದುಕಿದ್ದ ಭಟ್ಟರಿಗೆ ಮಗ ಬೆಳೆದಂತೆಲ್ಲ ತಲೆಬಿಸಿ ಕೊಡತೊಡಗಿತ್ತು. ಹೆಂಡತಿ ಹತ್ತಿರ " ಸರಸೀ! ಶಣ್ಣ ಮಾಣಿ ಒಬ್ಬವ ದಡ ಹತ್ತಿರೆ ಸಾಕಿತ್ತು ಮಾರಾಯ್ತಿ. ಆಸ್ತಿ ಮನೆ ಬೆಳಸ್ದೇ ಇದ್ರೂ ಅಡ್ಡಿಲ್ಲೆ, ಉಳಿಸಿರೆ ಸಾಕಿತ್ತು." ಎಂದು ಎಷ್ಟೊ ಸಾರಿ ಉದ್ಗರಿಸಿದ್ದರು.

ಗಾವಿಲ ಸೋಮಾರಿಯಾದರೂ ದಡ್ಡನಲ್ಲ. ಎಲ್ಲಾ ತರಗತಿಗಳಲ್ಲೂ ಪಾಸಾಗುತ್ತಿದ್ದ. ಹಾಗೆಯೇ ಎಸ್ ಎಸ್ ಎಲ್ ಸಿ ಕೂಡಾ ಮುಗಿಸಿದ, ಪಿ ಯು ಸಿ ಕೂಡಾ ಪಾಸಾದ. ಜೊತೆಯಲ್ಲಿ ಉಂಡಾಡುತ್ತಿದ್ದ ಇಬ್ಬರು ಹುಡುಗರು ಬಿ ಮಾಡಲು ಬೆಂಗಳೂರು ಸೇರಿದ ನೆಂಟರ ಮಕ್ಕಳ ಬಗ್ಗೆ ಹೊಟ್ಟೆಕಿಚ್ಚಿನ ಮಾತು ಹೊರ ಹಾಕಿದಾಗ ಗಾವಿಲನಿಗೆ ಏನೋ ಒಂದು ಹುಳ ಬಿಟ್ಟಂತಾಗಿತ್ತು.
ಸೀದಾ ಮನೆಗೆ ಬಂದವನೇ, "ಅಪ್ಪ ಆನು ಬಿ ಮಾಡಕ್ಕು ಮಾಡಿದ್ದಿ" ಅಂದ. ಬಿ ಮತ್ತು ಎರಡೂ ತಿಳಿಯದ ಭಟ್ಟರು "ಅಂದ್ರ್ ಎಂತ ಮಾಣಿ?" ಅಂದಿದ್ದಕ್ಕೆ, ಅದು ಹೊಸಾ ತರ ವಿದ್ಯೆ. ಕಲಿಯಲೆ ಬೆಂಗಳೂರಿಗೆ ಹೋಗಕ್ಕು. ಗಪ್ಪತಿ ಮತ್ತೆ ರಾಮು ಚಿಕ್ಕಿ ಮಗ ಮಾಡ್ತಾ ಇದ್ನಡ. ಆನೂ ಹೋಗಿ ಅವನ ಜೊತೆ ಇದ್ಕಂಡು ಓದ್ತಿ. ನೀನು ದುಡ್ಡು ಕಳಸ್ತ್ಯಾ?" ಅಂದ.

ಭಟ್ಟರು ಸಂತೋಷದಿಂದ ಒಪ್ಪಿ ಹಣ ಕೊಟ್ಟು ಕಳಿಸಿದರು. ಭಟ್ಟರು ಕೇವಲ ಸಮಾಧಾನಿಯಾಗಿ ಉಳಿಯಲಿಲ್ಲ. ಊರಲ್ಲಿ ಅನೇಕರ ಹತ್ತಿರ ತಮಗಾದ ಸಂತೋಷವನ್ನು ಹೇಳಿಕೊಂಡಿದ್ದರು. ಆದರೆ ಎರಡನೇ ಮಗ ಗೋಪಾಲನಿಗೆ ಏಕೋ ಅನುಮಾನ ಶುರುವಾಯಿತು. ಆದರೆ ಅದನ್ನು ತೋರಿಸದೆ "ತಮ್ಮನ್ನ ಕಂಡ್ಕ ಬತ್ತಿ" ಎಂದು ಬೆಂಗಳೂರಿನ ಬಸ್ಸು ಹತ್ತಿದ. ಮೊದಲು ಬಂದ ಯಾವುದೋ ಪತ್ರದ ಮೇಲಿದ್ದ ವಿಳಾಸವನ್ನೇ ಹಿಡಿದು ತಮ್ಮನ ರೂಮಿಗೂ ಬಂದ. ತಮ್ಮ ಅಣ್ಣನನ್ನು ಚೆನ್ನಾಗಿ ಮಾತಾಡಿಸಿ ನಂತರ "ಅಣ್ಣ ಕಾಲೇಜಿಗೆ ತಡ ಆಗ್ತು ಆನು ಬತ್ತಿ."ಎಂದು ಹೊರಟ. ಗೋಪಾಲ, "ಪ್ಯಾಟೆ ನೋಡಿದ ಹಂಗೆ ಆಗ್ತಲ ಆನೂ ಬತ್ತಿ. ಹೆಂಗೂ ಕಾಲೇಜು ಹತ್ರ ಇದ್ದಲ" ಎಂದ, ಗಾವಿಲ ತಲೆ ಆಡಿಸಿದ. ಕಾಲೇಜಿನ ಒಳ ಬಂದು ಪರೀಕ್ಷಿಸಬೇಕು ಎಂದುಕೊಂಡಿದ್ದ ಗೋಪಾಲ ಇಂಗ್ಲಿಶ್ ಹೊಡೆತ ನೋಡಿ (ಕೇಳಿ) ಹೊರಗಡೆಯೇ  ಉಳಿದ. ಗೋಪಾಲ ಒಳ ಹೋದ. ಅನುಮಾನ ಪಿಶಾಚಿಯ ಬಾಧೆಗೆ ಒಳಗಾಗಿದ್ದ ಗೋಪಾಲ ಹೊರಗಡೆಯೇ ಉಳಿದ. ಸಂಜೆ ಗಾವಿಲ ಎಲ್ಲರೊಟ್ಟಿಗೇ ಬಂದಾಗ ಗೋಪಾಲನಿಗೆ ತನ್ನ ಮೇಲೇ ಬೇಸರವಾಗಿ ತಮ್ಮನ ಜೇಬಿಗೆ ಒಂದಿಷ್ಟು ದುಡ್ಡು ತುರುಕಿ ಪ್ರಾಯಶ್ಚಿತ್ತ ಮಾಡಿಕೊಂಡ ಭಾವನೆ ತಂದುಕೊಂಡ.

ಹೀಗೇ ಆರೇಳು ವರ್ಷಗಳು ಕಳೆಯಿತು. ಒಮ್ಮೆ ರಜೆಯ ಹೆಳೆ ಹೇಳಿ ಊರಿಗೆ ಬಂದಾಗ ಗಾವಿಲ ದೋಸ್ತಿ ಗಪ್ಪು ಕೇಳಿದ. "ಯಾವಾಗ ಮುಗಿತೋ ಮಾರಾಯ ನಿನ್ನ ಬಿ ?" ಎಂದು. ಗಾವಿಲ ನಗುತ್ತಾ "ಬೆಂಗಳೂರು ಸಾಕಾದಾಗ" ಎಂದುಉತ್ತರ ಕೊಟ್ಟ. ಗಪ್ಪು ಅರ್ಥವಾಗದ ಮುಖಭಾವ ಮಾಡಿದಾಗ, "ಉಲಿದವರಿಗೆಲ್ಲಾ ಬಿ ಅಂದ್ರೆ ಬ್ಯಾಚುಲರ್ ಆಫ಼್ ಇನ್ಜಿನಿಯರಿಂಗ್, ಯಂಗೆ ಬೆಂಗಳೂರಲ್ಲಿ ಇದ್ದೇನೆ" ಅಂದ. ಇದನ್ನೆಲ್ಲಾ ಮರೆಯಲ್ಲಿ ನಿಂತು ಗೋಪಾಲ ಕೇಳಿ ತನ್ನ ಮೈ ಎಲ್ಲಾ ಉರಿದು ಹೋದಂತೆ ತನ್ನ ಮೇಲೆ ತಾನೇ ಹೇಸಿಗೆ ಪಟ್ಟ.


ಭಾವದಿಂದ ಹೊರಬರಲು ಮನೆಗೆ ಬರುತ್ತಿದ್ದಂತೆ ತಮ್ಮನಿಗೆ ಡಿ ಟಿ ಪಿ ಮಾಡಿದ. ಅಂದ್ರೆ ದೊಣ್ಣೆ ತಗಂಡು ಪೆಟ್ಟು. ಹಾಂ! ಅದು ಬೈನೆ ಮರದ ದೊಣ್ಣೆಯಾಗಿದ್ದರಿಂದ ಬಿ ಕೂಡಾ ಆಗುತ್ತದೆ ಅಂದ್ರೆ ಬೈನೆ ಗೂಟದಲ್ಲಿ ಇಟ್ಟ.

No comments:

Post a Comment